ಸಂಗ್ರಹ ಚಿತ್ರ 
ಕ್ರಿಕೆಟ್

ಕೆಪಿಎಲ್: ಬಿಜಾಪುರ್ ಬುಲ್ಸ್ ಬಗ್ಗು ಬಡಿದ ಬೆಳಗಾವಿ ಪ್ಯಾಂಥರ್ಸ್

ಆರ್ ಸಮರ್ಥ್ (ಅಜೇಯ 50) ಹಾಗೂ ಅಭಿನವ್ ಮನೋಹರ್ (ಅಜೇಯ 42) ಅವರುಗಳ ಸಮಯೋಚಿತ ಆಟದ ಬಲದಿಂದ ಬೆಳಗಾವಿ ಪ್ಯಾಂಥರ್ಸ್ ಕರ್ನಾಟಕ ಪ್ರೀಮಿಯರ್ ಲೀಗ್‍ ಟಿ-20 ಕ್ರಿಕೆಟ್ ಟೂರ್ನಿಯ 18ನೇ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಬಿಜಾಪುರ್ ಬುಲ್ಸ್ ತಂಡವನ್ನು ಮಣಿಸಿತು. 

ಮೈಸೂರು: ಆರ್ ಸಮರ್ಥ್ (ಅಜೇಯ 50) ಹಾಗೂ ಅಭಿನವ್ ಮನೋಹರ್ (ಅಜೇಯ 42) ಅವರುಗಳ ಸಮಯೋಚಿತ ಆಟದ ಬಲದಿಂದ ಬೆಳಗಾವಿ ಪ್ಯಾಂಥರ್ಸ್ ಕರ್ನಾಟಕ ಪ್ರೀಮಿಯರ್ ಲೀಗ್‍ ಟಿ-20 ಕ್ರಿಕೆಟ್ ಟೂರ್ನಿಯ 18ನೇ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಬಿಜಾಪುರ್ ಬುಲ್ಸ್ ತಂಡವನ್ನು ಮಣಿಸಿತು. 
  
ಮೊದಲು ಬ್ಯಾಟ್ ಮಾಡಿದ ಬಿಜಾಪುರ್ ಬುಲ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಎಂಜಿ ನವೀನ್, ರಾಜು ಭಟ್ಕಳ್ ಒಂದಕಿಯಲ್ಲಿ ಆಟ ಮುಗಿಸಿದರು. ಭರತ್ ಚಿಪ್ಲಿ 33, ಜಿಎಸ್ ಚಿರಂಜೀವಿ 12, ಎಸ್ ಎನ್ ರಾಜು 18, ಜೆಸ್ವಂತ್ ಆಚಾರ್ಯ 11 ಹಾಗೂ ಎನ್.ಪಿ ಭರೇತ್ ಅಜೇಯ 35 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಬಿಜಾಪುರ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 136 ರನ್ ಕಲೆ ಹಾಕಿತು. ಬೆಳಗಾವಿ ಪರ ಶುಭಾಂಗ್ ಹೆಗ್ಡೆ, ಡಿ.ಅವನಿಶ್, ಎಂಬಿ ದರ್ಶನ್ ತಲಾ ಎರಡು ವಿಕೆಟ್ ಕಬಳಿಸಿದರು. 
  
ಬೆಳಗಾವಿ ತಂಡದ ಆರಂಭವೂ ಕಳಪೆಯಾಗಿತ್ತು. ಮೂರನೇ ವಿಕೆಟ್ ಗೆ ಆರ್. ಸರ್ಮಥ್ ಹಾಗೂ ದಿಕ್ಷಾಂಶು ನೇಗಿ ತಂಡಕ್ಕೆ 50 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ, ಆರಂಭಿಕ ಆಘಾತದಿಂದ ಪಾರು ಮಾಡಿತು. ದಿಕ್ಷಾಂಶು 32 ರನ್ ಬಾರಿಸಿ ಔಟಾದರು. ಸಮರ್ಥ್ 45 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಅಜೇಯರಾಗುಳಿದರು. ಅಭಿನವ್ ಮನೋಹರ್ 42 ರನ್ ಬಾರಿಸಿ ಔಟ್ ಆಗದೇ ಉಳಿದರು. ಬೆಳಗಾವಿ 17.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಕಲೆ ಹಾಕಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT