ಕ್ರಿಕೆಟ್

ಕಿರಿಯರ ತಂಡ ಶ್ರೇಷ್ಠ ಪ್ರದರ್ಶನ ನೀಡಿ ಪಟ್ಟ ಉಳಿಸಿಕೊಳ್ಳಲಿದೆ: ರೋಹಿತ್ ಶರ್ಮಾ

Vishwanath S

ಮುಂಬೈ: ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಪಟ್ಟವನ್ನು ಉಳಿಸಿಕೊಳ್ಳಲಿದೆ ಎಂದು ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟಾರೆ 16 ತಂಡಗಳು ಭಾಗವಹಿಸಲಿವೆ. ಜನವರಿ 17 ರಿಂದ ಟೂರ್ನಿ ಆಫ್ರಿಕಾದಲ್ಲಿ ನಡೆಹಯಲಿದೆ. ಭಾರತ “ಎ” ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜಪಾನ್, ನ್ಯೂಜಿಲೆಂಡ್, ಶ್ರೀಲಂಕಾ ತಂಡದ ವಿರುದ್ಧ ಹೋರಾಟ ನಡೆಸಲಿದೆ.

“ನಮ್ಮ ತಂಡ ಬಲಾಢ್ಯವಾಗಿದೆ. ನಮಗೆ ಹಾಲಿ ಚಾಂಪಿಯನ್ ಎಂಬ ಪಟ್ಟವಿದೆ. ಈ ಬಾರಿಯೂ ನಮ್ಮ ತಂಡ ಕಪ್ ಗೆಲ್ಲಲಿದೆ. ಶ್ರೇಷ್ಠ ಪ್ರದರ್ಶನ ನೀಡಿ ಟ್ರೋಫಿಗೆ ಮುತ್ತಿಡಲು ಭಾರತ ಪ್ಲಾನ್ ಮಾಡಿಕೊಂಡಿದೆ” ಎಂದು ರೋಹಿತ್ ತಿಳಿಸಿದ್ದಾರೆ.

SCROLL FOR NEXT