ಅಫ್ರಿದಿ 
ಕ್ರಿಕೆಟ್

ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದು ಹಾಕಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ: ವಿಡಿಯೋ ವೈರಲ್

ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿತ್ ಅಫ್ರಿದಿಯವರು, ಇದೀಗ ಟಿವಿ ಕಾರ್ಯಕ್ರಮವೊಂದರಲ್ಲಿ ಹಿಂದು ಸಂಪ್ರದಾಯವನ್ನು ಅಣಕಿಸಿರುವುದು ಭಾರತೀಯರ ಕಣ್ಣು ಕೆಂಪಗಾಗುವಂತೆ ಮಾಡಿದೆ. 

ಸಂದರ್ಶನದಲ್ಲಿ ಹಿಂದು ಸಂಪ್ರದಾಯ ಅಣಕಿಸಿದ ಅಫ್ರಿದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪರ ಆಕ್ರೋಶ

ಇಸ್ಲಾಮಾಬಾದ್: ಸದಾಕಾಲ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿತ್ ಅಫ್ರಿದಿಯವರು, ಇದೀಗ ಟಿವಿ ಕಾರ್ಯಕ್ರಮವೊಂದರಲ್ಲಿ ಹಿಂದು ಸಂಪ್ರದಾಯವನ್ನು ಅಣಕಿಸಿರುವುದು ಭಾರತೀಯರ ಕಣ್ಣು ಕೆಂಪಗಾಗುವಂತೆ ಮಾಡಿದೆ. 

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಫ್ರಿದಿಯವರು, ಟಿವಿ ನೋಡುತ್ತಿದ್ದ ವೇಳೆ ಮಗಳು ಆರತಿ ಮಾಡುವುದನ್ನು ನೋಡಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ. ಹೇಳಿಕೆ ನೀಡುವ ವೇಳೆ ಆರತಿ ಪದವನ್ನು ಹೇಳಲು ಬಾರದಂತೆ ಸಂಪ್ರದಾಯವನ್ನೇ ಅಣಕಿಸುವ ರೀತಿ ವರ್ತಿಸಿದ್ದಾರೆ. ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. 

ಸಂದರ್ಶನ ನಡೆಸುತ್ತಿದ್ದ ಮಹಿಳೆ ಅಫ್ರಿದಿಯವರನ್ನು ಎಂದಾದರೂ ನೀವು ಟಿವಿ ಒಡೆದು ಹಾಕಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 

ಈ ವೇಳೆ ಉತ್ತರ ನೀಡಿರುವ ಅಫ್ರಿದಿ, ಒಂದೊಮ್ಮೆ ಒಡೆದು ಹಾಕಿದ್ದೆ. ನನ್ನ ಪತ್ನಿ ಪ್ರತೀನಿತ್ಯ ಧಾರಾವಾಹಿಗಳನ್ನು ನೋಡುತ್ತಿದ್ದರು. ಆಗ ಸ್ಟಾರ್ ಪ್ಲಸ್ ಅತ್ಯಂತ ಪ್ರಸಿದ್ಧಿ ಪಡೆದಿದ್ದ ವಾಹಿನಿಯಾಗಿತ್ತು. ಮಕ್ಕಳೊಂದಿಗೆ ಅಲ್ಲದೆ, ಒಬ್ಬರೇ ಕುಳಿತು ಟಿವಿ ನೋಡುವಂತೆ ತಿಳಿಸಿದ್ದೆ. ಒಂದೊಮ್ಮೆ ನನ್ನ ಮಗಳು ಟಿವಿ ನೋಡಿಕೊಂಡು ಆರತಿ ಮಾಡುತ್ತಿದ್ದಳು. ಈ ವೇಳೆ ಕೋಪಗೊಂಡು ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿದ್ದಾರೆ. 

ಹೇಳಿಕೆ ವೇಳೆ ಆರತಿ ಪದವನ್ನು ಹೇಳಲು ಬಾರದಂತೆ ಹಿಂದೂ ಸಂಪ್ರದಾಯವನ್ನು ಅಫ್ರಿದಿ ಅಣಕಿಸಿರುವುದು ಕಂಡು ಬಂದಿದೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಫ್ರಿದಿ ವಿರುದ್ಧ ಭಾರತೀಯರು ಕಿಡಿಕಾರುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT