ಎಂಎಸ್ ಧೋ 
ಕ್ರಿಕೆಟ್

ಧೋನಿ ವಿಕೆಟ್ ಪಡೆಯದೆ ನಾವು ಗೆಲ್ಲುವುದು ಸಾಧ್ಯವಿಲ್ಲ: ಕಿವೀಸ್ ಆಲ್​ರೌಂಡರ್​ ಜಿಮ್ಮಿ ನೀಶಮ್

ಭಾನುವಾರ ನ್ಯೂಜಿಲ್ಯಾಂಡ್ ನಲ್ಲಿ ಭಾರತ-ಕಿವೀಸ್ ವಿರುದ್ಧ ಅಂತಿಮ ಏಕದಿನ ಕದನ ನಡೆಯಲಿದೆ. ಕಳೆದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದ ಟೀಂ ಇಂಡಿಯಾ....

ವೆಲ್ಲಿಂಗ್ಟನ್: ಭಾನುವಾರ ನ್ಯೂಜಿಲ್ಯಾಂಡ್ ನಲ್ಲಿ ಭಾರತ-ಕಿವೀಸ್ ವಿರುದ್ಧ ಅಂತಿಮ ಏಕದಿನ ಕದನ ನಡೆಯಲಿದೆ. ಕಳೆದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ಇದೇ ವೇಳೆ ಕಿವೀಸ್ ತಂಡದ ಆಲ್ ರೌಡರ್ ಜಿಮ್ಮಿ ನೀಶಮ್ ಧೋನಿಯ ಆಟವನ್ನು ಪ್ರಶಂಸಿಸ್ದ್ದಾರೆ.
ಧೋನಿ ಮೈದಾನದಲ್ಲಿರುವವರೆಗೆ ಭಾರತ ವಿರುದ್ಧ ಗೆಲ್ಲುವುದು ಅಸಾಧ್ಯ. ನಾವೇನಾದರೂ ಟೀಂ ಇಂಡಿಯಾ ವಿರುದ್ಧ ಜಯ ಸಾಧಿಸಬೇಕಾದರೆ ಧೋನಿ ವಿಕೆಟ್ ಅನ್ನು ಮೊದಲು ಕೀಳಬೇಕಾಗುತ್ತದೆ ಎಂದು ಜಿಮ್ಮಿ ನೀಶಮ್ ಅಭಿಪ್ರಾಯಪಟ್ಟರು. 
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಧೋನಿಯೊಬ್ಬ ಅದ್ಭುತ ಬ್ಯಾಟ್ಸ್ ಮನ್ ಆಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅವರಂತಾಡುವ ಬೇರೆ ಆಟಗಾರರು ವಿರಳ.ಅವರ ವಿಕೆಟ್ ಪಡೆದರೆ ಮಾತ್ರ ಗೆಲುವು ನಮ್ಮದಾಗಲಿದೆ" ಎಂದಿದ್ದಾರೆ.
"ಧೋನಿ ವಿಶ್ವಕಪ್ ತಂಡದಲ್ಲಿರುತ್ತಾರೆಯೆ, ಇಲ್ಲವೆ ಎನ್ನುವ ಬಗ್ಗೆ ಭಾರತೀಯ ಮಾದ್ಯಮಗಳಲ್ಲಿ ಕೆಲ ಚರ್ಚೆಗಳು ನಡೆದಿದೆ. ಆದರೆ ಅವರೊಬ್ಬ ಶ್ರೇಷ್ಠ ಆಟಗಾರನೆಂಬುದರಲ್ಲಿ ಎರಡು ಮಾತಿಲ್ಲ" ಅವರು ಹೇಳಿದರು.
ಕಿವೀಸ್ ನೆಲದಲ್ಲಿ ಐದು ಏಕದಿನ ಪಂದ್ಯದ ಸರಣಿಯಲ್ಲಿ ಭಾರತ ಇದಾಗಲೇ ಮೂರು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿದೆ. ಆದರೆ ನಾಲ್ಕನೇ ಪಂದ್ಯದಲ್ಲಿ ಧೋನಿ ಹಾಗೂ ನಾಯಕ ಕೊಹ್ಲಿ ಅಲಭ್ಯತೆ ಪರಿಣಾಮ ಟಿಂ ಇಂಡಿಯಾ ಎಂಟು ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಇದೀಗ ಐದನೇ ಪಂದ್ಯಕ್ಕೆ ಧೋನಿ ಪುನರಾಗಮನವಾಗಿದ್ದು ಟೀಂ ಇಂಡಿಯಾಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT