ಕ್ರಿಕೆಟ್

ಭಾರತದಲ್ಲಿ ಇಮ್ರಾನ್ ಖಾನ್ ಪೋಟೋ ಎತ್ತಂಗಡಿ ವಿಷಾಧನೀಯ - ಪಿಸಿಬಿ

Nagaraja AB
ಇಸ್ಲಾಬಾಮಾದ್: ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ  ಭಾರತದಲ್ಲಿನ ಹಲವು ಕ್ರೀಡಾಂಗಣದಿಂದ ಮಾಜಿ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಅವರ ಪೋಟೋ ಎತ್ತಂಗಡಿ ಮಾಡಿರುವುದು ವಿಷಾಧನೀಯ ಕ್ರಮವಾಗಿದೆ ಎಂದು  ಪಾಕಿಸ್ತಾನ ಕ್ರಿಕೆಟ್  ಮಂಡಳಿ ಹೇಳಿದೆ.
ಈ ಸಂಬಂಧ ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆ ಸಂದರ್ಭದಲ್ಲಿ  ಬಿಸಿಸಿಐ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.
ಕ್ರಿಕೆಟ್ ದೇಶ ಹಾಗೂ ಜನರ ನಡುವೆ ಸಂಪರ್ಕ ಬೆಸೆಯುವಲ್ಲಿ ಪ್ರಮುಖ ಪಾತ್ರ ಪಾತ್ರವಹಿಸುತ್ತದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಆದರೆ, ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪಾಕಿಸ್ತಾನದ ಪ್ರಧಾನ ಮಂತ್ರಿ  ಇಮ್ರಾನ್ ಖಾನ್ ಅವರ ಪೋಟೋವನ್ನು ಭಾರತದಲ್ಲಿನ  ಹಲವು ಕ್ರೀಡಾಂಗಣದಿಂದ ಎತ್ತಂಗಡಿ ಮಾಡಿರುವುದು ಗಂಭೀರವಾದ ವಿಷಾದನೀಯ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
SCROLL FOR NEXT