ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ಈ ವಿಡಿಯೋ ಕೆಳಗೆ ಇದು ಔಟ್ ಅಥವಾ ನಾಟೌಟ್ ಎಂಬುದನ್ನು ನಿರ್ಧರಿಸಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಕೌಂಟಿ ಕ್ರಿಕೆಟ್ ನಲ್ಲಿ ನಡೆದಿದ್ದ ಘಟನೆಯ ವಿಡಿಯೋವನ್ನು ಸಚಿನ್ ಶೇರ್ ಮಾಡಿದ್ದಾರೆ. ಹೌದು ಬೌಲರ್ ಎಸೆದ ಚೆಂಡು ವಿಕೆಟ್ ಗೆ ತಗುಲಿತು. ಈ ವೇಳೆ ಬೇಲ್ಸ್ ಕೆಳಗೆ ಬೀಳದೆ ವಿಕೆಟ್ ಮೇಲೆ ಮಧ್ಯಕ್ಕೆ ಬಂದು ನಿಂತುಕೊಂಡಿತು. ಇದರಿಂದ ಮೈದಾನದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕ್ರಿಕೆಟ್ ಲೋಕವನ್ನು ಗಾಢವಾಗಿ ಚಿಂತಿಸುವಂತೆ ಮಾಡಿದೆ.
ಸಚಿನ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳೆ ಅವರು ಬೇಲ್ಸ್ ತನ್ನ ಸ್ಥಾನದಿಂದ ಬೇರ್ಪಟ್ಟರೇ ಅದು ಔಟ್ ಎಂದು ತೀರ್ಪು ನೀಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಂಪೈರ್ ಧರ್ಮಸೇನಾ ನೀಡಿದ 6 ರನ್ ತೀರ್ಪು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟು ಕೆಲವರು ಧರ್ಮಸೇನಾರನ್ನು ಎಳೆತಂದು ಟ್ರೋಲ್ ಮಾಡುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos