ಕ್ರಿಕೆಟ್

ಇನ್ನು ಮುಂದೆ ವಿಶ್ವಕಪ್‌ನ ಭಾಗವಲ್ಲ: ಭಾವನಾತ್ಮಕ ವಿಡಿಯೋ ಅಪ್ ಲೋಡ್ ಮಾಡಿದ ಶಿಖರ್ ಧವನ್

Raghavendra Adiga
ನವದೆಹಲಿ:  ಟೀಮ್ ಇಂಡಿಯಾದ ಆರಂಭಿಕ ಶಿಖರ್ ಧವನ್ ಹೆಬ್ಬರಳಿನ ಗಾಯದಿಂದ ಪ್ರಸಕ್ತ ಸಾಲಿನ ವಿಶ್ವಕಪ್ ಟೂರ್ನಿಯೊಂದ ಹೊರ ನಡೆದಿದ್ದಾರೆ.
ಈ ಬಗ್ಗೆ ಬುಧವಾರ ಟೀಮ್ ಮ್ಯಾನೇಜ್ಮೆಂಟ್ ಸ್ಪಷ್ಟ ಪಡಿಸಿತ್ತು. ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಹಿನ್ನೆಲೆ, ಅವರನ್ನು ವಿಶ್ವಕಪ್ ತಂಡದಿಂದ ಕೈ ಬಿಡಲಾಗಿದೆ. ಮುಂದಿನ ಪಂದ್ಯಗಳಲ್ಲಿ ಇವರ ಸ್ಥಾನವನ್ನು ಯುವ ವಿಕೆಟ್ ಕೀಪರ್ ರಿಷಭ್ ಪಂತ್ ತುಂಬಲಿದ್ದಾರೆ. ಈ ಬಗ್ಗೆ ಬಿಸಿಸಿಐ, ಐಸಿಸಿಗೆ ಪತ್ರವನ್ನು ಬರೆದು ಕೇಳಿಕೊಂಡಿದೆ.
ವಿಶ್ವಕಪ್ ನಿಂದ ಹೊರ ನಡೆಯುತ್ತಿದ್ದಂತೆ ಶಿಖರ್ ಧವನ್ ತಮ್ಮ ಅಧಿಕೃತ್ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಾಕಿದ್ದಾರೆ. ವಿಡಿಯೋದಲ್ಲಿ ಅವರು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದ್ದಾರೆ. ‘ವಿಶ್ವಕಪ್ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ನಾನು ಕಣಕ್ಕೆ ಇಳಿಯುವುದಿಲ್ಲ. ಎಡಗೈ ಹೆಬ್ಬೆರಳಿಗೆ ಗಾಯ, ಸರಿಯಾದ ಸಮಯದಲ್ಲಿ ಚೇತರಿಸಿಕೊಳ್ಳಲಿಲ್ಲ. ನಾನು ನಿಜಕ್ಕೂ ತಂಡದ ಸಹ ಆಟಗಾರರು ಹಾಗೂ ಅಭಿಮಾನಿಗಳ ಪ್ರೀತಿಗೆ ಮನಸೋತಿದ್ದೇನೆ’ ಎಂದಿದ್ದಾರೆ. 
SCROLL FOR NEXT