ಸಂಗ್ರಹ ಚಿತ್ರ 
ಕ್ರಿಕೆಟ್

ಐಸಿಸಿ ಅಂಡರ್ 19 ವಿಶ್ವಕಪ್ ನಿಂದ ಪಾಕ್ ನ ನಾಸೀಮ್ ಔಟ್

ಈ ಮೊದಲೇ ಪಾಕಿಸ್ತಾನ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಕಾರಣದಿಂದ ಐಸಿಸಿ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಯುವ ವೇಗಿ ನಾಸೀಮ್ ಶಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಇಸ್ಲಾಮಾಬಾದ್: ಈ ಮೊದಲೇ ಪಾಕಿಸ್ತಾನ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಕಾರಣದಿಂದ ಐಸಿಸಿ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಯುವ ವೇಗಿ ನಾಸೀಮ್ ಶಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ಜ.17ರಿಂದ ಫೆ.9ರವರೆಗೆ ನಡೆಯಲಿರುವ ಐಸಿಸಿ ಕಿರಿಯರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಪಾಕಿಸ್ತಾನ ತಂಡದಿಂದ ಯುವ ವೇಗಿ ನಸೀಮ್‌ ಶಾ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಹಿಂಪಡೆದಿದೆ. ನವೆಂಬರ್ ನಲ್ಲಿ ನಾಸೀಮ್ ಪಾಕ್ ತಂಡದ ಪರ ಟೆಸ್ಟ್ ಆಡಿದ್ದಾರೆ. ಹೀಗಿದ್ದಾಗ ಅವರನ್ನು ಕಿರಿಯರ ತಂಡದಲ್ಲಿ ಆಡಿಸಲು ಆಗದು. ಪಾಕ್ ಮೊದಲು ಘೋಷಿಸಿದ ವಿಶ್ವಕಪ್ ತಂಡದಲ್ಲಿ ನಾಸೀಮ್ ಶಾ ಸ್ಥಾನ ಪಡೆದಿದ್ದರು.

ಪಾಕ್‌ ಟೆಸ್ಟ್‌ ತಂಡದ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ವೇಗದ ಬೌಲರ್‌ ಆಗಿರುವ 16 ವರ್ಷದ ನಸೀಮ್‌ ಶಾ ಅವರ ಬದಲಾಗಿ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ವಸೀಂ ಜೂನಿರ್‌ ಆಡಲಿದ್ದಾರೆ ಎಂದು ಪಿಸಿಬಿ ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಹಿರಿಯರ ತಂಡದಲ್ಲಿ ಈಗಾಗಲೇ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿರುವ ನಸೀಮ್‌ ಶಾ ಅವರ ಹೆಸರನ್ನು 19 ವರ್ಷದೊಳಗಿನ ವಿಶ್ವಕಪ್‌ನಲ್ಲಿ ಆಡಲಿರುವ ಪಾಕ್‌ ತಂಡದಲ್ಲಿ ಸೇರಿಸಲಾಗಿತ್ತು. ಪಾಕ್‌ ಹಿರಿಯರ ತಂಡದ ಪರ 3 ಟೆಸ್ಟ್‌ ಪಂದ್ಯಗಳನ್ನು ಆಡಿರುವ ನಸೀಮ್‌ ಶಾ, ಇನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಪಡೆದ ಸಾಧನೆಯನ್ನೂ ಮಾಡಿದ್ದಾರೆ. 

"ಐಸಿಸಿ 19 ವರ್ಷದೊಳಗಿನ ವಿಶ್ವಕಪ್‌ ಟೂರ್ನಿಯು ಭವಿಷ್ಯದ ತಾರೆಗಳಿಗೆ ಅಡಿಗಲ್ಲಾಗಿದೆ. ಈ ವೇದಿಕೆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುವ ಅವಕಾಶ ಪಡೆಯಲು ಯುವ ಆಟಗಾರರಿಗೆ ಉತ್ತಮ ಅವಕಾಶ ಲಭ್ಯವಾಗುತ್ತದೆ. ಆದರೆ ನಸೀಮ್‌ ಶಾ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪನ್ನು ಮೂಡಿಸಿಯಾಗಿದೆ. ಪಾಕಿಸ್ತಾನದ ಯುವ ಪಡೆ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ನಸೀಮ್‌ ಶಾ ಅವರನ್ನು ಹಿಂಪಡೆದಿರುವುದು ತಂಡದ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಬಾರದಷ್ಟೇ ಎಂದು ಪಿಸಿಬಿ ಸಿಇಒ ವಸೀಂ ಖಾನ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!