ಟೀಮ್ ಪೈನ್ 
ಕ್ರಿಕೆಟ್

ಕೊರೋನಾ ಕ್ರಿಕೆಟ್‌ಗಿಂತ ದೊಡ್ಡದು, ಗಂಭೀರವಾಗಿ ಪರಿಗಣಿಸಬೇಕು: ಆಸೀಸ್ ಕ್ರಿಕೆಟಿಗ ಟೀಮ್ ಪೈನ್

ಸಾಂಕ್ರಾಮಿಕ ರೋಗ ಕೊರೋನಾ ಕ್ರಿಕೆಟ್ಗಿಂತ ದೊಡ್ಡದು, ಅದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಜೀವಕ್ಕೆ ಕುತ್ತು ತರುತ್ತದೆ ಎಂದು ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟೀಮ್ ಪೈನ್ ತಿಳಿಸಿದ್ದಾರೆ. 

ಮೆಲ್ಬೋರ್ನ್: ಸಾಂಕ್ರಾಮಿಕ ರೋಗ ಕೊರೋನಾ ಕ್ರಿಕೆಟ್ಗಿಂತ ದೊಡ್ಡದು, ಅದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಜೀವಕ್ಕೆ ಕುತ್ತು ತರುತ್ತದೆ ಎಂದು ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟೀಮ್ ಪೈನ್ ತಿಳಿಸಿದ್ದಾರೆ. 

ಈ ಸಮಯದಲ್ಲಿ ಎಲ್ಲಾ ಕ್ರಿಕೆಟಿಗರಿಗೆ ಕಷ್ಟವಾದರೂ, ನಾವು ವಿರಾಮ ತೆಗೆದುಕೊಳ್ಳುವ ಸಮಯ ಎಂದು ನಾನು ಭಾವಿಸುತ್ತೇನೆ. ಈ ವರ್ಷದಲ್ಲಿ ಫೈನಲ್ಸ್ ಮತ್ತು ಟ್ರೋಫಿಗಳು ಹಿಂದಿದೆ ಬರುವುದರಿಂದ ಈ ಸಮಯ ಇನ್ನೂ ಕಠಿಣವಾಗಿದೆ ಎಂದು ನನಗೆ ತಿಳಿದಿದೆ. ಕೊರೋನಾ ಕ್ರಿಕೆಟ್ ಆಟಕ್ಕಿಂತ ದೊಡ್ಡದಾಗಿದ್ದು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ ಎಂದು ಪೈನ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

"ನಾವೆಲ್ಲರೂ ಅತಿಯಾಗಿ ಪ್ರೀತಿಸುವ ಆಟವನ್ನು ಆಡುತ್ತೇವೆ. ಆಟದ ಜೊತೆಗೆ ಬದುಕು ಮುಖ್ಯ. ಇನ್ನು ನಾವು ಬಯಸಿದ ರೀತಿಯಲ್ಲಿ ಸಾಧ್ಯವಾದಷ್ಟು ಬೇಗ ಆಟಕ್ಕೆ ಮರಳುತ್ತೇವೆ ಎಂದು ನಾನು ಭಾವಿಸುತ್ತೇನೆ ಆದರೆ ಈ ಮಧ್ಯೆ, ದಯವಿಟ್ಟು ನಿಮ್ಮ ಬಗ್ಗೆ ಕಾಳಜಿ ವಹಿಸಿ, ಇತರರನ್ನು ನೋಡಿಕೊಳ್ಳಿ ಮತ್ತು ಒಟ್ಟಿಗೆ ಸವಾರಿ ಮಾಡೋಣ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರದ್ದುಗೊಳಿಸಲಾಗಿದೆ. ಇದರ ಜೊತೆಗೆ ಮಾರ್ಚ್ 24ರಿಂದ ನ್ಯೂಜಿಲೆಂಡ್‌ನಲ್ಲಿ ನಡೆಯಬೇಕಿದ್ದ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯನ್ನು ಸಹ ಮುಂದೂಡಲಾಗಿದೆ.

ಒಟ್ಟಾರೆ ಜಗತ್ತಿನಾದ್ಯಂತ 2 ಲಕ್ಷ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು 8,010 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 83 ಸಾವಿರ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran conflict: ರಿಯಾದ್‌ ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ: ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಸೌದಿ; ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ- ಟ್ರಂಪ್ ಎಚ್ಚರಿಕೆ

ಟೆಕ್ಸಾಸ್'ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರ ಸಾವು, ಭಯೋತ್ಪಾದಕ ಕೃತ್ಯ ಶಂಕೆ..!

ಇರಾಕ್‌ನಲ್ಲಿ US ಪಡೆ ತಂಗಿದ್ದ ಹೋಟೆಲ್ ಮೇಲೆ ಇರಾನ್ ಬೆಂಬಲಿತ ಗುಂಪು ದಾಳಿ!

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ?: ಕಾರಣ ನೀಡಿದ Donald Trump

US-Israel-Iran War: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಕ್ರಮ; ಕೇಂದ್ರ ಸರ್ಕಾರ ಭರವಸೆ

SCROLL FOR NEXT