ಮಿಥಾಲಿ ರಾಜ್ 
ಕ್ರಿಕೆಟ್

2021ರಲ್ಲಾದರೂ ಮಹಿಳಾ ಐಪಿಎಲ್‌ ಆಯೋಜಿಸಿ: ಬಿಸಿಸಿಐಗೆ ಮಿಥಾಲಿ ರಾಜ್ ಆಗ್ರಹ

ಜಗತ್ತಿನಲ್ಲೇ ಕೊರೋನಾ ವೈರಸ್‌ ಭೀತಿ ಆವರಿಸಿರುವ ಈ ಗಳಿಗೆಯಲ್ಲಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್‌ ಲೀಗ್‌ ನ 13ನೇ ಆವೃತ್ತಿಯ ಆಯೋಜನೆಗೆ ಇನ್ನಿಲ್ಲದ ಕರಸತ್ತು ಮಾಡುತ್ತಿದೆ.

ನವದೆಹಲಿ: ಜಗತ್ತಿನಲ್ಲೇ ಕೊರೋನಾ ವೈರಸ್‌ ಭೀತಿ ಆವರಿಸಿರುವ ಈ ಗಳಿಗೆಯಲ್ಲಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್‌ ಲೀಗ್‌ ನ 13ನೇ ಆವೃತ್ತಿಯ ಆಯೋಜನೆಗೆ ಇನ್ನಿಲ್ಲದ ಕರಸತ್ತು ಮಾಡುತ್ತಿದೆ.

ನಿಗದಿಯಂತೆ 2020ನೇ ಐಪಿಎಲ್‌ ಟೂರ್ನಿ ಮಾರ್ಚ್‌ 29ರಂದು ಮುಂಬಯಿನಲ್ಲಿ ಶುರುವಾಗಬೇಕಿತ್ತು. ಆದರೆ, ವೈರಸ್‌ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಇದೀಗ 3 ವಾರಗಳ ಕಾಲ ಇಡೀ ದೇಶವೇ ಲಾಕ್‌ಡೌನ್‌ ಆಗಿರುವಾಗ ಏಪ್ರಿಲ್‌ ಅಂತ್ಯಕ್ಕೂ ಐಪಿಎಲ್‌ ಆರಂಭವಾಗುವ ಯಾವುದೇ ಸುಳಿವಿಲ್ಲ.

ಇಂಥ ಸಂದರ್ಭದಲ್ಲಿ ಮಾತನಾಡಿರುವ ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಮಹಿಳಾ ಐಪಿಎಲ್‌ ಟೂರ್ನಿಯನ್ನು ಆದಷ್ಟು ಬೇಗ ಆಯೋಜಿಸಬೇಕು. ಬಿಸಿಸಿಐ ಈ ಟೂರ್ನಿ ಆಯೋಜನೆಗೆ ಮೀನಾಮೇಶ ಎಣಿಸುವುದನ್ನು ಬಿಡಬೇಕು, ಎಂದು ಆಗ್ರಹ ಮಾಡಿದ್ದಾರೆ.

ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ 2021ರಲ್ಲೇ ನಡೆಸಬೇಕು. ಪುರುಷರ ಐಪಿಎಲ್‌ನಂತೆ ಮಹಿಳಾ ಐಪಿಎಲ್‌ ಟೂರ್ನಿಯನ್ನೂ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಆಯೋಜಿಸುವುದು ಉತ್ತಮ ಎಂದು 37 ವರ್ಷದ ಅನುಭವಿ ಆಟಗಾರ್ತಿ ಹೇಳಿದ್ದಾರೆ.

"ವೈಯಕ್ತಿಕವಾಗಿ ಹೇಳುವುದಾದರೆ ಮಹಿಳಾ ಐಪಿಎಲ್‌ ಟೂರ್ನಿಯನ್ನು ಮುಂದಿನ ವರ್ಷ ನಡೆಸಬೇಕು. ನೀತಿ ನಿಯಮಗಳಲ್ಲಿ ಕೆಲವು ಬದಲಾವಣೆ ತಂದು ಸಣ್ಣ ಪ್ರಮಾಣದಲ್ಲಾದರೂ ಈ ಟೂರ್ನಿಯನ್ನು ಆಯೋಜಿಸಬೇಕು. ಉದಾಹರಣೆಗೆ ತಂಡವೊಂದರಲ್ಲಿ ನಾಲ್ಕು ವಿದೇಶಿಗರ ಬದಲಿಗೆ ಐದಾರು ವಿದೇಶಿಯರಿಗೆ ಆಡುವ ಅವಕಾಶ ಕಲ್ಪಿಸಬೇಕು," ಎಂದು ಸಂದರ್ಶನವೊಂದರಲ್ಲಿ ಮಿಥಾಲಿ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬಿಸಿಸಿಐ, ಮಹಿಳಾ ಐಪಿಎಲ್‌ನ ಪ್ರದರ್ಶನ ಪಂದ್ಯಗಳನ್ನು ಆಯೋಜಿಸುತ್ತಾ ಬಂದಿದೆ. ಆದರೆ, ಪೂರ್ಣ ಪ್ರಮಾಣದ ಟೂರ್ನಿ ಆಯೋಜನೆಗೆ ಇನ್ನು ಸಮಯ ಬೇಕಾಗುತ್ತದೆ ಎಂದು ಹೇಳಿದೆ. ಈ ವರ್ಷ 7 ಪಂದ್ಯಗಳ ಮಹಿಳಾ ಟಿ20 ಚಾಲೆಂಜರ್‌ ಟೂರ್ನಿಯನ್ನು ಜೈಪುರದಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಆದರೆ ಕೋವಿಡ್‌-19 ಭೀತಿ ಹಿನ್ನೆಲೆಯಲ್ಲಿ ಈ ಟೂರ್ನಿಯೂ ರದ್ದಾಗುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಕೂಡ 2021ರಲ್ಲಿ ಮಹಿಳಾ ಐಪಿಎಲ್‌ ಆಯೋಜನೆ ಬಗ್ಗೆ ಸೌರವ್‌ ಗಂಗೂಲಿ ಸಾರಥ್ಯದ ಬಿಸಿಸಿಐ ಯೋಜನೆ ರೂಪಿಸಬೇಕು ಎಂದು ಅಭಿಪ್ರಾಯ ಹೊರಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT