ಕೊಲ್ಕತ್ತಾ: ಮಾರಕ ಕೊರೋನಾವೈರಸ್ ವಿರುದ್ಧ ದೇಶಾದ್ಯಂತ ಸಮರ ಮುಂದುವರೆದಿರುವಂತೆ ಪಶ್ಚಿಮ ಬಂಗಾಳದ ಅಗತ್ಯವಿರುವ ಜನರಿಗೆ 50 ಲಕ್ಷ ಮೌಲ್ಯದ ಅಕ್ಕಿ ನೀಡುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಲಾಲಾ ಬಾಬಾ ರೈಸ್ ನೊಂದಿಗೆ ಗಂಗೂಲಿ ಸರ್ಕಾರಿ ಶಾಲಾ ಮಕ್ಕಳು ಭದ್ರತೆ ಹಾಗೂ ಸುರಕ್ಷತೆಗಾಗಿ ಅಕ್ಕಿ ಒದಗಿಸಲಿದ್ದಾರೆ. ಅಗತ್ಯ ವಿರುವವರಿಗೆ 50 ಲಕ್ಷ ಮೌಲ್ಯದ ಅಕ್ಕಿಯನ್ನು ಸೌರವ್ ಗಂಗೂಲಿ ಒದಗಿಸಲಿದ್ದಾರೆ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರದ ತುರ್ತು ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಹೇಳಿದ್ದಾರೆ.