ಎಂ ಎಸ್ ಧೋನಿ 
ಕ್ರಿಕೆಟ್

ಎಲ್ಲರಂತೆ ನನಗೂ ಒತ್ತಡ, ಭಯ ಇರುತ್ತಿತ್ತು, ತಂಡದಲ್ಲಿ ಮೆಂಟಲ್‌ ಕಂಡೀಷನಿಂಗ್ ಕೋಚ್‌ ಇರಬೇಕು: ಧೋನಿ

ಇತ್ತೀಚಿಗೆ ಬಹುತೇಕ ಆಟಗಾರರು ಮಾನಸಿಕ ಸ್ವಾಸ್ಥ್ಯದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಹೀಗಾಗಿ ತಂಡದಲ್ಲಿ ಸದಾ ಮೆಂಟಲ್‌ ಕಂಡೀಷನಿಂಗ್‌ ಕೋಚ್....

ನವದೆಹಲಿ: ಇತ್ತೀಚಿಗೆ ಬಹುತೇಕ ಆಟಗಾರರು ಮಾನಸಿಕ ಸ್ವಾಸ್ಥ್ಯದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಹೀಗಾಗಿ ತಂಡದಲ್ಲಿ ಸದಾ ಮೆಂಟಲ್‌ ಕಂಡೀಷನಿಂಗ್‌ ಕೋಚ್‌ (ಮಾನಸಿಕ ಆರೋಗ್ಯ ಸುಧಾರಣೆ ಮಾರ್ಗದರ್ಶಕ) ಇರಲೇ ಬೇಕು ಎಂದು ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಹೇಳಿದ್ದಾರೆ.

"ಭಾರತದಲ್ಲಿ ಮಾನಸಿಕ ಸ್ವಾಸ್ಥ್ಯ ವಿಚಾರದಲ್ಲಿ ತೊಂದರೆ ಅನುಭವಿಸುತ್ತಿರುವುದನ್ನು ಆಟಗಾರರು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಯಾರೂ ಈ ಬಗ್ಗೆ ಮಾತನಾಡುವುದೂ ಇಲ್ಲ. ಎಲ್ಲರಂತೆ ನನಗೂ ಭಯ, ಒತ್ತಡ ಇರುತ್ತದೆ. ನಾನು ಬ್ಯಾಟ್‌ ಮಾಡಲು ಹೋದಾಗ ಮೊದಲ 5-10 ಎಸೆತಗಳನ್ನು ಎದುರಿಸಲು ಎದೆ ನಡುಗುತ್ತಿರುತ್ತದೆ. ಒತ್ತಡ ಆವರಿಸಿರುತ್ತದೆ. ಭಯ ಕಾಡುತ್ತಿರುತ್ತದೆ. ಇದು ಪ್ರತಿಯೊಬ್ಬರನ್ನೂ ಕಾಡುತ್ತದೆ ಕೂಡ," ಎಂದು ಧೋನಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

"ಈ ಸಂಗತಿಯನ್ನು ಕೋಚ್‌ ಬಳಿ ಚರ್ಚಿಸಲು ಆಟಗಾರರು ಅಂಜುತ್ತಾರೆ. ಅದಕ್ಕಾಗಿಯೇ ಕೋಚ್‌ ಮತ್ತು ಆಟಗಾರರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಮೆಂಟಲ್‌ ಕಂಡೀಷನಿಂಗ್‌ ಕೋಚ್‌ 15 ದಿನಗಳಿಗೊಮ್ಮೆ ತಂಡಕ್ಕೆ ಭೇಟಿ ನೀಡುವುದಲ್ಲ. 15 ದಿನಗಳಿಗೆ ಒಮ್ಮೆ ಬಂದರೆ ಕೇವಲ ಅನುಭವವನ್ನಷ್ಟೇ ಹಂಚಿಕೊಳ್ಳಲು ಸಾಧ್ಯ. ಹೀಗಾಗಿ ಆಟಗಾರರ ಜೊತೆಗೆ ಅವರು ಸದಾ ಇರಬೇಕು. ಈ ಮೂಲಕ ಎಲ್ಲಿ ಆಟಗಾರನಿಗೆ ಸಮಸ್ಯೆ ಎದುರಾಗುತ್ತಿದೆ ಎಂಬುದನ್ನು ಅವರು ತಿಳಿದು ಅದನ್ನು ಬಗೆಹರಿಸಲು ಸಾಧ್ಯವಾಗುತ್ತದೆ," ಎಂದು ಧೋನಿ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT