ಅನಿಲ್ ಕುಂಬ್ಳೆ 
ಕ್ರಿಕೆಟ್

ಚೆಂಡಿನ ಮೇಲೆ ಎಂಜಲು ಬಳಕೆ ನಿಷೇಧಿಸಲು ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಶಿಫಾರಸು

ಬೌಲರ್ ಗಳು ಚೆಂಡಿನ ಮೇಲೆ ಲಾಲಾರಸವನ್ನು ಬಳಸುವುದನ್ನು ನಿಷೇಧಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ತಾಂತ್ರಿಕ ಸಮಿತಿ ಶಿಫಾರಸು ಮಾಡಿದೆ.

ದುಬೈ: ಬೌಲರ್ ಗಳು ಚೆಂಡಿನ ಮೇಲೆ ಲಾಲಾರಸವನ್ನು ಬಳಸುವುದನ್ನು ನಿಷೇಧಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ತಾಂತ್ರಿಕ ಸಮಿತಿ ಶಿಫಾರಸು ಮಾಡಿದೆ.

ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಸೋಮವಾರ ಎಂಜಲು ಬಳಕೆಯನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. "ನಾವು ಬಿಕ್ಕಟ್ಟಿನ ಸಮಯವನ್ನು ಎದುರಿಸುತ್ತಿದ್ದೇವೆ. ಸಮಿತಿಯ ಶಿಫಾರಸುಗಳನ್ನು ಮಧ್ಯಂತರ ಆಧಾರದ ಮೇಲೆ ಮಾಡಲಾಗಿದೆ. ಇದರಿಂದ ಸುರಕ್ಷತೆಯನ್ನು ಕಾಪಾಡಿಕೊಂಡು ನಮ್ಮ ಆಟದ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳಬಹುದು" ಎಂದು ಕುಂಬ್ಳೆ ಹೇಳಿದ್ದಾರೆ.

ಕೊರೋನಾ ವೈರಸ್ ನಿಂದಾಗಿ ಬೌಲರ್‌ಗಳು ಚೆಂಡಿನ ಮೇಲೆ ಜೊಲ್ಲನ್ನು ಬಳಸುವುದನ್ನು ನಿಷೇಧಿಸುವ ಬಗ್ಗೆ ಜಾಗತಿಕ ಚರ್ಚೆ ನಡೆಯುತ್ತಿದೆ ಮತ್ತು ಈ ಸಮಯದಲ್ಲಿ ಎಂಜಲು ಬಳಕೆಯನ್ನು ನಿಷೇಧಿಸಲು ಸಮಿತಿ ಶಿಫಾರಸು ಮಾಡಿದೆ. ಕೊರೋನಾ ವೈರಸ್ ಬಾಯಿಯ ಮೂಲಕವೂ ಹರಡುತ್ತದೆ, ಆದ್ದರಿಂದ ಎಲ್ಲಾ ಜನರಿಗೆ ಮುಖವಾಡಗಳನ್ನು ಧರಿಸುವಂತೆ ಸೂಚನೆ ನೀಡಲಾಗಿದೆ. 

ಚೆಂಡನ್ನು ಹೊಳೆಯಲು ಬೌಲರ್‌ಗಳು ಬಾಯಿಯ ಲಾವರಸ ಅಥವಾ ಬೆವರನ್ನು ಬಳಸುತ್ತಾರೆ. ಕೊರೋನಾದಿಂದ  ಎಲ್ಲಾ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಕೊರೋನಾ ನಂತರದ ಸಂದರ್ಭಗಳಲ್ಲಿ ಬೌಲರ್‌ಗೆ ಲಾವಾರಸವನ್ನು ಬಳಸಲು ಅವಕಾಶ ನೀಡಬೇಕೆ ಎಂಬ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿರುವುದರಿಂದ ಇದು ಅಪಾಯವನ್ನು ಹೆಚ್ಚಿಸುತ್ತದೆ. ತಾಂತ್ರಿಕ ಸಮಿತಿಯು ಬಾಯಿಯಲ್ಲಿ ಲಾಲಾರಸದ ಬಳಕೆಯನ್ನು ನಿಷೇಧಿಸಲು ಶಿಫಾರಸು ಮಾಡಿದೆ.

ಬೌಲರ್‌ಗಳು ಚೆಂಡಿನ ಹೊಳಪನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದರಿಂದಾಗಿ ಸ್ವಿಂಗ್ ಮತ್ತು ರಿವರ್ಸ್ ಸ್ವಿಂಗ್ ಮಾಡಲು ಅವಕಾಶ ನೀಡುತ್ತದೆ. ತಾಂತ್ರಿಕ ಸಮಿತಿಯು ಶಿಫಾರಸು ಮಾಡುವ ಮೊದಲು ಐಸಿಸಿಯ ವೈದ್ಯಕೀಯ ಸಲಹಾ ಸಮಿತಿಯ ಮುಖ್ಯಸ್ಥ ಡಾ. ಪೀಟರ್ ಹಾರ್ಕರ್ ಅವರಿಂದ ಸಲಹೆ ಪಡೆದಿದೆ.ಬೆವರಿನ ಬಳಕೆಯಿಂದಾಗಿ ಕರೋನಾ ಹರಡುವ ಸಾಧ್ಯತೆಯಿಲ್ಲ, ಆದ್ದರಿಂದ ಚೆಂಡಿನ ಮೇಲೆ ಬೆವರು ಬಳಸುವುದನ್ನು ನಿಷೇಧಿಸಿಲ್ಲ ಎಂದು ಸಮಿತಿ ಹೇಳುತ್ತದೆ. ಮೈದಾನದಲ್ಲಿ ಎಲ್ಲೆಡೆ ಸ್ವಚ್ಛತೆ, ನೈರ್ಮಲ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಮಿತಿ ಹೇಳಿದೆ.

ಕೊರೋನಾದಿಂದ ಅನೇಕ ದೇಶಗಳು ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚಿವೆ. ವಾಣಿಜ್ಯ ವಿಮಾನಗಳು ಕಡಿಮೆ ಸಂಖ್ಯೆಯಲ್ಲಿ ಹಾರಾಡುತ್ತಿವೆ. ಮತ್ತು ಕಡ್ಡಾಯವಾದ ಕ್ಯಾರೆಂಟೈನ್ ಗಳನ್ನು ಅನುಸರಿಸಬೇಕಾಗಿದೆ. ಆದ್ದರಿಂದ ಸ್ಥಳೀಯ ಪಂದ್ಯ ಅಧಿಕಾರಿಗಳನ್ನು ಅಲ್ಪಾವಧಿಗೆ ನೇಮಕ ಮಾಡಲು ಸಮಿತಿ ಶಿಫಾರಸು ಮಾಡಿದೆ ಎಂದು ಐಸಿಸಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT