ಎಂಎಸ್ ಧೋನಿ-ಸಾಕ್ಷಿ 
ಕ್ರಿಕೆಟ್

ಟಾಮ್ ಕರನ್‌ ಔಟ್‌ ಸಂಬಂಧದ ತೀರ್ಪಿನ ಬಗ್ಗೆ ಸಾಕ್ಷಿ ಧೋನಿ ಅಸಮಾಧಾನ, ಟ್ವೀಟ್ ಡಿಲೀಟ್!

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡಗಳ ನಡುವಿನ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 4ನೇ ಪಂದ್ಯದಲ್ಲಿ ತೀರ್ಪುಗಾರರ ನಿರ್ಧಾರದ ಸಿಎಸ್‌ಕೆ ನಾಯಕ ಎಂಎಎಸ್‌ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಗರಂ ಆಗಿದ್ದರು.

ನವದೆಹಲಿ: ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡಗಳ ನಡುವಿನ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 4ನೇ ಪಂದ್ಯದಲ್ಲಿ ತೀರ್ಪುಗಾರರ ನಿರ್ಧಾರದ ಸಿಎಸ್‌ಕೆ ನಾಯಕ ಎಂಎಎಸ್‌ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ಗರಂ ಆಗಿದ್ದರು.

18ನೇ ಓವರ್‌ನಲ್ಲಿ ದೀಪಕ್‌ ಚಹರ್‌ ಶಾರ್ಟ್ ಎಸೆತ ಹಾಕಿದ್ದರು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಟಾಮ್‌ ಕರನ್‌ ಫುಲ್‌ ಮಾಡಲು ಪ್ರಯತ್ನಿಸಿ ವಿಫಲರಾದರು. ಚೆಂಡು ತೊಡೆಗೆ ತಾಗಿ ಪಿಚ್‌ ಆಗಿ ನಂತರ ವಿಕೆಟ್‌ ಕೀಪರ್‌ ಧೋನಿ ಕೈಗೆ ಸೇರಿತ್ತು. ಇದನ್ನು ಅಂಪೈರ್‌ಗಳು ವಿಕೆಟ್‌ ಕೀಪರ್‌ ಕ್ಯಾಚ್‌ ಎಂದು ತೀರ್ಪು ನೀಡಿದರು. ಈ ವೇಳೆ ಅಂಪೈರ್‌ಗಳು ಹಾಗೂ ಸಿಎಸ್‌ಕೆ ನಾಯಕ ಎಂಎಸ್‌ ಧೋನಿ ನಡುವೆ ಹೈಡ್ರಾಮ ನಡೆಯಿತು.

ಎಂಎಸ್‌ ಧೋನಿ ಕ್ಯಾಚ್‌ ಅಫೀಲ್‌ ಮಾಡಿದ್ದಕ್ಕೆ ಅಂಪೈರ್‌ ಔಟ್‌ ಎಂದು ನಿರ್ಧರಿಸಿದ್ದು, ಟಾಮ್ ಕರನ್‌ಗೆ ಅಚ್ಚರಿ ಉಂಟಾಗಿತ್ತು. ರಾಜಸ್ಥಾನ್‌ ರಾಯಲ್ಸ್‌ ಡಿಆರ್‌ಎಸ್‌ ಎಲ್ಲ ರಿವ್ಯೂವ್‌ಗಳನ್ನು ಖಾಲಿ ಮಾಡಿತ್ತು. ಆದರೆ, ಟಾಮ್‌ ಕರನ್‌ ಅಂಪೈರ್‌ಗಳ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಳಿದರು. ನಂತರ, ಮೂರನೇ ಅಂಪೈರ್‌ಗೆ ಸೂಚಿಸಿದ ಬಳಿಕ ವಿಡಿಯೋ ರೀಪ್ಲೆಯಲ್ಲಿ ಔಟ್‌ ಇಲ್ಲವೆಂಬ ಬಗ್ಗೆ ತೀರ್ಪುಗಾರರಿಗೆ ಮನವರಿಕೆಯಾಗಿತ್ತು.

ಇದಾದ ಬಳಿಕ ಟಾಮ್‌ ಕರನ್‌ ಅವರನ್ನು ಮತ್ತೆ ಬ್ಯಾಟಿಂಗ್‌ ಮಾಡಲು ಅಂಪೈರ್‌ಗಳು ಅನುಮತಿ ನೀಡಿದ್ದರಿಂದ. ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಎಂಎಸ್‌ ಧೋನಿ, ಅಂಪೈರ್‌ಗಳ ತೀರ್ಪು ಬದಲಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮೈದಾನದಲ್ಲಿ ಉಂಟಾಗಿದ್ದ ಈ ಹೈಡ್ರಾಮದ ಬಗ್ಗೆ ಸಾಕ್ಷಿ ಧೋನಿಗೆ ಅಸಮಾಧಾನ ಉಂಟಾಗಿತ್ತು. ಹಾಗಾಗಿ, ತಮ್ಮ ಅಸಮಾಧಾನ ಹೊರಹಾಕಲು ಅವರು ಹೆಚ್ಚು ಸಮಯ ಕಾಯಲಿಲ್ಲ. ತಕ್ಷಣ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪಂದ್ಯದ ಅಂಪೈರ್‌ಗಳ ವಿರುದ್ದ ಕಿಡಿಕಾರಿದರು.

ನೀವು ತಂತ್ರಜ್ಞಾನವನ್ನು ಬಳಿಸಿಕೊಳ್ಳುವುದಾದರೆ, ಅದನ್ನು ಸರಿಯಾದ ಹಾದಿಯಲ್ಲಿ ಬಳಸಿಕೊಳ್ಳಿ... ಔಟ್‌ ಅಂದರೆ ಔಟ್‌, ಕ್ಯಾಚ್ ಆಗಲಿ ಅಥವಾ ಎಲ್‌ಬಿಡಬ್ಲ್ಯು ಆಗಲಿ.. ಎಂದು ಸಾಕ್ಷಿ ಧೋನಿ ಟ್ವೀಟ್‌ ಮಾಡಿದ್ದರು. ಇದಾದ ಕೆಲ ಸಮಯದ ಬಳಿಕ ಅವರು ತಮ್ಮ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT