ಅನಿಲ್ ಕುಂಬ್ಳೆ 
ಕ್ರಿಕೆಟ್

ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಕುಂಬ್ಳೆ ಬಗ್ಗೆ ಲಂಕಾ, ಪಾಕ್ ಆಟಗಾರರ ಪ್ರಶಂಸೆ!

“ಐಸಿಸಿ ಹಾಲ್ ಆಫ್ ಫೇಮ್‌” ಆಯ್ಕೆಗೊಂಡಿರುವ ಟೀಮ್ ಇಂಡಿಯಾ ಸ್ಪಿನ್ ದಂತ ಕಥೆ ಅನಿಲ್ ಕುಂಬ್ಳೆ ಅವರ ಬಗ್ಗೆ ಶ್ರೀಲಂಕಾ ಹಾಗೂ ಪಾಕಿಸ್ತಾನಕ್ಕೆ ಸೇರಿದ ಮಾಜಿ ಕ್ರಿಕೆಟಿಗರು ಪ್ರಶಂಸೆಯ ಸುರಿಮಳೆ ಹರಿಸಿದ್ದಾರೆ.

ನವದೆಹಲಿ: “ಐಸಿಸಿ ಹಾಲ್ ಆಫ್ ಫೇಮ್‌” ಆಯ್ಕೆಗೊಂಡಿರುವ ಟೀಮ್ ಇಂಡಿಯಾ ಸ್ಪಿನ್ ದಂತ ಕಥೆ ಅನಿಲ್ ಕುಂಬ್ಳೆ ಅವರ ಬಗ್ಗೆ ಶ್ರೀಲಂಕಾ ಹಾಗೂ ಪಾಕಿಸ್ತಾನಕ್ಕೆ ಸೇರಿದ ಮಾಜಿ ಕ್ರಿಕೆಟಿಗರು ಪ್ರಶಂಸೆಯ ಸುರಿಮಳೆ ಹರಿಸಿದ್ದಾರೆ.

ಕುಂಬ್ಳೆ ಕಾರಣದಿಂದಾಗಿ ಹಲವು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾಗಿ ಶ್ರೀ ಲಂಕಾ ಆಲ್-ಟೈಮ್ ಶ್ರೇಷ್ಠ ಆಟಗಾರ ಸಂಗಕ್ಕಾರ ಶ್ಲಾಘಿಸಿದ್ದಾರೆ. ವೇಗ ಹಾಗೂ ನಿಖರತೆ ಅವರ ಬೌಲಿಂಗ್‌ ನ ಪ್ರಧಾನ ಆಸ್ತ್ರಗಳು ಎಂದು ಅವರು ಹೇಳಿದ್ದಾರೆ, ಇದರೊಂದಿಗೆ ತಮ್ಮ ವೃತ್ತಿಜೀವನದುದ್ದಕ್ಕೂ ಬಹಳಷ್ಟು ಹೆಣಗಾಡಬೇಕಾಯಿತು. ಕುಂಬ್ಳೆ ಎತ್ತರ ಅವರಿಗೆ ಅನುಕೂಲಕರ ಅಂಶವಾಗಿತ್ತು. ಅವರು ಎಸೆದ ಚೆಂಡುಗಳು ಚೆನ್ನಾಗಿ ಪುಟಿದೇಳುತ್ತಿದ್ದವು ಎಂದು ನೆನಪಿಸಿಕೊಂಡಿದ್ದಾರೆ.

ಅವರು ಬೌಲರ್ ಆಗಿ ತಮ್ಮನ್ನು ತೊಂದರೆಗೊಳಪಡಿಸಿದರೂ ಅವರು ವೈಯಕ್ತಿಕವಾಗಿ ತುಂಬಾ ಒಳ್ಳೆಯವರು ಎಂದು ಶ್ಲಾಘಿಸಿದ್ದಾರೆ.
ಬ್ಯಾಟ್ಸ್‌ಮನ್‌ ಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಕುಂಬ್ಳೆ ನಿಶ್ಚಿತ ಯೋಜನೆ ಹೊಂದಿರುತ್ತಿದ್ದರು. ಅದನ್ನು, ಅವರು ವಿಫಲಗೊಳಿಸದೆ ಕಾರ್ಯಗತಗೊಳಿಸಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದರು ಎಂದು ಹೇಳಿದ್ದಾರೆ. ಶ್ರೀಲಂಕಾದ ಮತ್ತೊಬ್ಬ ಬ್ಯಾಟ್ಸ್‌ಮನ್ ಜಯವರ್ಧನೆ, ಕುಂಬ್ಳೆ ಅವರ ಶಕ್ತಿ ಏನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಅವರು ತಮ್ಮ ಚೆಂಡುಗಳ ಮೂಲಕ ಬ್ಯಾಟ್ಸ್‌ಮನ್‌ನನ್ನು ಪ್ರಶ್ನಿಸುತ್ತಲೇ ಇದ್ದರು ಎಂದು ಅವರು ಹೇಳಿದ್ದಾರೆ.

ಬೌಲರ್‌ಗಳು ಕೂಡ ಕುಂಬ್ಳೆ ಅವರನ್ನು ಹೊಗಳಿ ಅಟ್ಟಕೇರಿಸಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ಬ್ಯಾಟ್ಸ್‌ಮನ್ ವಾಸಿಮ್ ಅಕ್ರಮ್ ಕುಂಬ್ಳೆ ಅವರನ್ನು ಕೊಂಡಾಡಿದ್ದಾರೆ ದೆಹಲಿಯಲ್ಲಿ, ಕುಂಬ್ಳೆ ತಮ್ಮ ವಿರುದ್ಧ 10 ವಿಕೆಟ್ ತೆಗೆದುಕೊಂಡಿದ್ದು ನನ್ನ ಕಣ್ಣೆದುರು ನಡೆಯಿತು.

ಅವರ 10ನೇ ವಿಕೆಟ್ ನಾನೇ ಆಗಿದ್ದೇ. ಈ ಐತಿಹಾಸಿಕ ಘಟನೆ ವೀಕ್ಷಿಸಲು ನನಗೆ ಅವಕಾಶ ಲಭಿಸಿತ್ತು ಎಂದು ಹೇಳಿದ್ದಾರೆ. ಏತನ್ಮಧ್ಯೆ, ಕುಂಬ್ಳೆ ಭಾರತಕ್ಕಾಗಿ 132 ಟೆಸ್ಟ್, 271 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 619 ಹಾಗೂ ಏಕದಿನ ಪಂದ್ಯಗಳಲ್ಲಿ 337 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಟೀಮ್‌ ಇಂಡಿಯಾ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT