ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಸೀನ್ ವೈಟ್ ಹೆಡ್ 
ಕ್ರಿಕೆಟ್

ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್.. ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾದ ಬೌಲರ್

ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆಯ ಎಡಗೈ ಸ್ಪಿನ್ನರ್ ಸೀನ್ ವೈಟ್‌ ಹೆಡ್ ಇನ್ನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ ಕಬಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 

ಜೋಹಾರ್ನ್ಸ್‌ ಬರ್ಗ್‌: ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆಯ ಎಡಗೈ ಸ್ಪಿನ್ನರ್ ಸೀನ್ ವೈಟ್‌ ಹೆಡ್ ಇನ್ನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ ಕಬಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 

ಹೌದು.. ದಕ್ಷಿಣ ಆಫ್ರಿಕಾ ಪ್ರಥಮ ದರ್ಜೆ ಟೂರ್ನಿಯಲ್ಲಿ ಪವಾಡ ನಡೆದಿದ್ದು, ಫೊರ್‌ ಡೇ ಫ್ರಾಂಚೈಸ್ 2021-22 ಸರಣಿಯ ಭಾಗವಾಗಿ ಸೌತ್‌ವೆಸ್ಟರ್ನ್ ಡಿಸ್ಟ್ರಿಕ್ಟ್ , ಈಸ್ಟರ್ನ್ ಸ್ಟಾರ್ಮ್ಸ್ ನಡುವೆ ನಡೆದ ಪಂದ್ಯದ ಸಂದರ್ಭದಲ್ಲಿ ಸೀನ್ ವೈಟ್‌ಹೆಡ್ ಪವಾಡ ದಾಖಲಿಸಿದ್ದಾರೆ. ಸೀನ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದರು.

186 ರನ್‌ಗಳ ಗುರಿಯೊಂದಿಗೆ ಕಣಕ್ಕಿಳಿದ ಈಸ್ಟರ್ನ್ ಸ್ಟ್ರೋಮ್ಸ್ ಸೀನ್‌ ಹೊಡೆತಕ್ಕೆ ತತ್ತರಿಸಿ 65 ರನ್‌ಗಳಿಗೆ ಕುಸಿಯಿತು. ಇನ್ನೂ ಎರಡನೇ ಇನ್ನಿಂಗ್ಸ್‌ನಲ್ಲಿ ಸೀನ್ ವೈಟ್‌ಹೆಡ್ 12 ಓವರ್‌ಗಳಲ್ಲಿ 36 ರನ್ ನೀಡಿ 10 ವಿಕೆಟ್ ಪಡೆದರು . ಈ ಹತ್ತು ವಿಕೆಟ್‌ಗಳಲ್ಲಿ.. ಎರಡು ಸ್ಟಂಪ್‌ಗಳ ರೂಪದಲ್ಲಿ.. ಮೂರು ಎಲ್‌ ಬಿ ರೂಪದಲ್ಲಿ.. ನಾಲ್ಕು ಕ್ಯಾಚ್‌ಗಳ ರೂಪದಲ್ಲಿ.. ಮತ್ತೊಂದು ಕ್ಯಾಟ್ ಅಂಡ್‌ ಬೌಲ್ಡ್ ವಿಕೆಟ್ ಆಗಿದ್ದು.. 

ಒಟ್ಟಾರೆ ಎರಡು ಇನ್ನಿಂಗ್ಸ್‌ಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ ಸೀನ್, ಸೌತ್‌ವೆಸ್ಟರ್ನ್ ಡಿಸ್ಟ್ರಿಕ್ಟ್ 120 ರನ್‌ಗಳ ಬೃಹತ್ ಜಯದೊಂದಿಗೆ ಪಂದ್ಯವನ್ನು ಮುನ್ನಡೆಸಿದರು. ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್‌ನ ಇತಿಹಾಸದಲ್ಲಿ ಸೀನ್ ವೈಟ್‌ಹೆಡ್ ಅವರದು ಎರಡನೇ ಅತ್ಯುತ್ತಮ ಪ್ರದರ್ಶನ ಎಂದು ದಾಖಲಾಗಿದೆ. 

1906 ರಲ್ಲಿ, ಲೆಗ್ ಸ್ಪಿನ್ನರ್ ಬರ್ಟ್ ವಾಗ್ಲರ್ ಒಂದು ಇನ್ನಿಂಗ್ಸ್‌ನಲ್ಲಿ 26 ರನ್‌ಗಳಿಗೆ 10 ವಿಕೆಟ್‌ಗಳನ್ನು ಪಡೆದಿದ್ದರು. ಹೊಸದಾಗಿ 115 ವರ್ಷಗಳ ನಂತರ, ಸೀನ್ ವೈಟ್‌ ಹೆಡ್ 10 ವಿಕೆಟ್‌ಗಳ ಅತ್ಯುತ್ತಮ ಪ್ರದರ್ಶನ ನೀಡಿರುವುದು ಮತ್ತೊಂದು ವಿಶೇಷ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT