ಜೋ ರೂಟ್, ವಿರಾಟ್ ಕೊಹ್ಲಿ 
ಕ್ರಿಕೆಟ್

ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯ ರದ್ದು: ಪರಿಹಾರ ನೀಡುವಂತೆ ಇಂಗ್ಲೆಂಡ್ ಐಸಿಸಿಗೆ ಮೊರೆ- ವಕ್ತಾರರು

ಭಾರತ- ಇಂಗ್ಲೆಂಡ್ ತಂಡಗಳ ನಡುವೆ ಸೆಪ್ಟೆಂಬರ್ 10 ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೊರೆ ಹೋಗಿದೆ.

ಲಂಡನ್: ಭಾರತ- ಇಂಗ್ಲೆಂಡ್ ತಂಡಗಳ ನಡುವೆ ಸೆಪ್ಟೆಂಬರ್ 10 ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೊರೆ ಹೋಗಿದೆ. ಸಂದಿಗ್ಧತೆಗೆ ಸಿಲುಕಿರುವ ಈ ವಿಷಯದಲ್ಲಿ ಯಾವುದಾದರೂ ಪರಿಹಾರ ನೀಡುವಂತೆ ಐಸಿಸಿಯನ್ನು ಕೋರಿದೆ.

5ನೇ ಪಂದ್ಯದೊಂದಿಗೆ  ಸರಣಿ ಫಲಿತಾಂಶದ ಬಗ್ಗೆ ಎರಡೂ ಮಂಡಳಿಗಳಲ್ಲಿ ಒಮ್ಮತ  ಸಾಧ್ಯವಾಗದ ಕಾರಣ  ಐಸಿಸಿ ವಿವಾದ ಪರಿಹಾರ ಸಮಿತಿಗೆ (ಡಿಆರ್‌ಸಿ) ಪತ್ರ ಬರೆಯಲಾಗಿದೆ ಎಂದು ಇಸಿಬಿಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.  

ಕೋವಿಡ್ -19 ಪ್ರಕರಣದಿಂದಾಗಿ  ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು  ಪ್ರಕಟಿಸಿದರೆ ತಮಗೆ  40 ಮಿಲಿಯನ್ ಪೌಂಡ್‌ ನಷ್ಟವಾಗಲಿದೆ. ಇಂತಹ  ಸಂದರ್ಭಗಳಲ್ಲಿ ಸರಿಯಾದ  ಪರಿಹಾರ ಕಂಡುಕೊಂಡರೆ ವಿಮಾ ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ ಎಂದು ಇಂಗ್ಲೀಷ್‌  ಮಂಡಳಿ  ಹೇಳಿದೆ.

ಆದರೆ, ಈ ಸಮಸ್ಯೆಯನ್ನು ಪರಿಹರಿಸಲು ಐಸಿಸಿ ಮುಂದೆ ಎರಡು ಪರ್ಯಾಯಗಳಿವೆ. ಒಂದು ವೇಳೆ ಐದನೇ ಟೆಸ್ಟ್ ರದ್ದಾದರೆ (ಮರು ವೇಳಾಪಟ್ಟಿ ನಿಗದಿಪಡಿಸದೆ), ಭಾರತ ಸರಣಿಯನ್ನು 2-1ರಿಂದ ಗೆಲ್ಲುತ್ತದೆ. ಆಗ ಇದನ್ನು ನಾಲ್ಕು ಟೆಸ್ಟ್‌ಗಳ ಸರಣಿ ಎಂದು ಪರಿಗಣಿಸಬೇಕು. ಆದರೆ, ಈ ಪ್ರಸ್ತಾಪವನ್ನು ಇಸಿಬಿ ಒಪ್ಪುಕೊಳ್ಳದಿರಬಹುದು. 

ಎರಡನೆಯದಾಗಿ, ಟೀಮ್ ಇಂಡಿಯಾವೇ ಈ ಪಂದ್ಯವನ್ನು ಆಡಲು ಹಿಂಜರಿದರೆ  ಇಂಗ್ಲೆಂಡ್ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್ ತಂಡ ಪಂದ್ಯ ಆಡಲು ಸಿದ್ಧವಾಗಿದ್ದರೂ ಕೊರೊನಾ ಕಾರಣ ಭಾರತ ಒಪ್ಪದಿದ್ದಾಗ ಇಂಗ್ಲೆಂಡ್ ಪರವಾಗಿ ಫಲಿತಾಂಶ ಘೋಷಿಸುವ ಅವಕಾಶವೂ  ಇದೆ. ಇದು ಸಂಭವಿಸಿದಲ್ಲಿ, ಸರಣಿ  2-2ರಲ್ಲಿ ಸಮನಾಗಿರುತ್ತದೆ.  ಆಗ ಇಸಿಬಿ  ವಿಮೆಯನ್ನು ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT