ರಾಹುಲ್ ದ್ರಾವಿಡ್ 
ಕ್ರಿಕೆಟ್

ಏಷ್ಯಾಕಪ್ 2022: ಸುದ್ದಿಗೋಷ್ಠಿಯಲ್ಲಿ "ಸೆಕ್ಸಿ" ಪದ ಬಳಸಲು ರಾಹುಲ್ ದ್ರಾವಿಡ್ ಹಿಂಜರಿದ್ರಾ?

ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇಂದು ನಡೆಯಲಿರುವ ಸೂಪರ್ 4 ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ಸಾಮರ್ಥ್ಯದ ಬಗ್ಗೆ ತರಬೇತುದಾರ ರಾಹುಲ್ ದ್ರಾವಿಡ್ ವಿಶ್ವಾಸ ಹೊಂದಿದ್ದಾರೆ. 

ದುಬೈ: ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇಂದು ನಡೆಯಲಿರುವ ಸೂಪರ್ 4 ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ಸಾಮರ್ಥ್ಯದ ಬಗ್ಗೆ ತರಬೇತುದಾರ ರಾಹುಲ್ ದ್ರಾವಿಡ್ ವಿಶ್ವಾಸ ಹೊಂದಿದ್ದಾರೆ. 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ರಾಹುಲ್ ದ್ರಾವಿಡ್, ಭಾರತದ ಬೌಲಿಂಗ್ ದಾಳಿ ಗ್ಲಾಮರಸ್ ಆಗಿ ಕಾಣದೇ ಇರಬಹುದು, ಆದರೆ, ಬೌಲರ್ ಗಳು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಲಿದ್ದಾರೆ ಎಂದರು. ಇದನ್ನು ವಿವರಿಸಲು ಪ್ರಯತ್ನಿಸುವಾಗ, ಅವರು 'ಆ ಒಂದು ಪದ'ದಲ್ಲಿ ಸಿಲುಕಿಕೊಂಡರು, ಆದರೆ ಅದನ್ನು ಉಚ್ಚರಿಸದೆಯೇ ತ್ವರಿತಗತಿಯಲ್ಲಿ ಸಂದೇಶ ರವಾನಿಸಿದರು.

ಭಾರತದ ವಿರುದ್ಧ ಪಾಕ್ ಬೌಲರ್ ಗಳು ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆಯೇ ಎಂಬ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ದ್ರಾವಿಡ್, ಅವರು ಉತ್ತಮ ಬೌಲರ್ ಹೊಂದಿದ್ದಾರೆ ಎಂದು ಒಪ್ಪಿಕೊಂಡರು. ಅಲ್ಲದೇ ತಮ್ಮ ಬೌಲರ್ ಗಳ ದಾಳಿಯನ್ನು ಕೂಡಾ ಸಮರ್ಥಿಸಿಕೊಂಡರು.  

ನಮ್ಮ ವೇಗದ ಬೌಲರ್‌ಗಳ ಬೌಲಿಂಗ್ ವಿಶ್ಲೇಷಣೆ ಕೂಡ ಬಹಳ ಚೆನ್ನಾಗಿತ್ತು. ಹಾಗಾಗಿ ಅವರ ಬೌಲಿಂಗ್ ನ್ನು ಖಂಡಿತವಾಗಿ ಗೌರವಿಸುತ್ತೇನೆ, ಆದರೆ ನಾವು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ ಎಂದು ನನಗೆ ತುಂಬಾ ವಿಶ್ವಾಸವಿದೆ" ಎಂದು ಅವರು ಹೇಳಿದರು.

ನಂತರ ಏನೋ ಹೇಳಲು ಮುಂದಾದ ರಾಹುಲ್ ದ್ರಾವಿಡ್ ಹಾಗೆಯೇ ಸುಮ್ಮನಾದರು. ಈ ಪದ ಬಳಸಲು ಬಯಸಿದ್ದೆ, ಆದರೆ ನಾನು ಆ ಪದವನ್ನು ಬಳಸಲಾರೆ, ನನ್ನ ಮನಸ್ಸಿನಲ್ಲಿರುವ ಮಾತು ನನ್ನ ಬಾಯಿಂದ ಹೊರಬರುತ್ತಿದೆ, ಆದರೆ ನಾನು ಅದನ್ನು ಬಳಸಲಾರೆ ಎಂದು ದ್ರಾವಿಡ್ ಹೇಳುವ ಮೂಲಕ ವರದಿಗಾರರನ್ನು ರಂಜಿಸಿದರು.

 ನೀವು ಬಳಸಲು ಬಯಸಿದ ಪದ "ಅತಿರಂಜಿತವೇ? ಎಂದು ವರದಿಗಾರರೊಬ್ಬರು ಕೇಳಿದರು. "ಇಲ್ಲ, ಅತಿರಂಜಿತ ಅಲ್ಲ. ನಾಲ್ಕು ಅಕ್ಷರಗಳು, 'ಎಸ್' ನಿಂದ ಪ್ರಾರಂಭವಾಗುತ್ತವೆ ಎಂದು ರಾಹುಲ್ ದ್ರಾವಿಡ್ ಹೇಳುವ ಮೂಲಕ ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT