ವಿಶ್ವಕಪ್ 
ಕ್ರಿಕೆಟ್

ಟಿ20 ವಿಶ್ವಕಪ್ ವಿಜೆತ ತಂಡಕ್ಕೆ 1.6 ಮಿಲಿಯನ್ ಡಾಲರ್ ಬಹುಮಾನ: ಐಸಿಸಿ

ಟಿ20 ವಿಶ್ವಕಪ್ ವಿಜೇತ ತಂಡ 1.6 ಮಿಲಿಯನ್ ಬಹುಮಾನ ಪಡೆಯಲಿದೆ ಎಂದು ಐಸಿಸಿ ಘೋಷಣೆ ಮಾಡಿದೆ. ರನ್ನರ್ ಅಪ್ ತಂಡಕ್ಕೆ ವಿಜೇತ ತಂಡಕ್ಕಿಂತ ಅರ್ಧದಷ್ಟು ಮೊತ್ತದ ಬಹುಮಾನ ದೊರೆಯಲಿದೆ.

ದುಬೈ: ಟಿ20 ವಿಶ್ವಕಪ್ ವಿಜೇತ ತಂಡ 1.6 ಮಿಲಿಯನ್ ಬಹುಮಾನ ಪಡೆಯಲಿದೆ ಎಂದು ಐಸಿಸಿ ಘೋಷಣೆ ಮಾಡಿದೆ. ರನ್ನರ್ ಅಪ್ ತಂಡಕ್ಕೆ ವಿಜೇತ ತಂಡಕ್ಕಿಂತ ಅರ್ಧದಷ್ಟು ಮೊತ್ತದ ಬಹುಮಾನ ದೊರೆಯಲಿದೆ.

16 ತಂಡಗಳು ಭಾಗಿಯಾಗಲಿರುವ ಟೂರ್ನಮೆಂಟ್ ಹತ್ತಿರ ಹತ್ತಿರ ಒಂದು ತಿಂಗಳು ನಡೆಯಲಿದ್ದು, ಸೆಮಿಫೈನಲ್ಸ್ ನಲ್ಲಿ ಸೋಲುವ ತಂಡಕ್ಕೆ 400,000 ಡಾಲರ್ ಗಳ ಬಹುಮಾನವನ್ನು ಗೆದ್ದಿದ್ದಾರೆ. ಸೂಪರ್ 12 ಹಂತದಲ್ಲಿ ನಿರ್ಗಮಿಸುವ 8 ತಂಡಗಳಿಗೆ ತಲಾ 70,000 ಬಹುಮಾನ ದೊರೆಯಲಿದೆ.

ಕಳೆದ ವರ್ಷದ ಐಸಿಸಿ ಪುರುಷರ ಟಿ20 ವಿಶ್ವಕಪ್ ನಂತೆ ಸೂಪರ್ 12 ಹಂತದಲ್ಲಿ 30 ಪಂದ್ಯಗಳ ಪೈಕಿ ಪ್ರತಿ ಗೆಲುವಿಗೂ 40,000 ಅಮೇರಿಕನ್ ಡಾಲರ್ ಬಹುಮಾನ ದೊರೆಯಲಿದೆ ಎಂದು ಐಸಿಸಿ ಹೇಳಿದೆ. ಸೂಪರ್ 12 ಹಂತಕ್ಕೆ ನೇರವಾಗಿ ಆಯ್ಕೆಯಾಗಿರುವ ತಂಡಗಳೆಂದರೆ ಅದು ಅಫ್ಘಾನಿಸ್ಥಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂ ಜಿಲ್ಯಾಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾಗಳಾಗಿವೆ.

ಗ್ರೂಪ್ ಎ ನಲ್ಲಿ ನಮೀಬಿಯಾ, ಶ್ರೀಲಂಕಾ, ನೆದರ್ಲ್ಯಾಂಡ್, ಯುಎಇ ಹಾಗೂ ಗ್ರೂಪ್ ಬಿ ನಲ್ಲಿ ವೆಸ್ಟ್ ಇಂಡೀಸ್, ಸ್ಕಾಟ್ ಲ್ಯಾಂಡ್, ಐರ್ಲ್ಯಾಂಡ್, ಜಿಂಬಾಂಬ್ವೆ ಗಳನ್ನು ನಾಲ್ಕು ತಂಡಗಳಿರುವಂತೆ 2 ಗುಂಪುಗಳನ್ನಾಗಿ ವಿಭಾಗಿಸಲಾಗಿದ್ದು, ಮೊದಲ ಹಂತದಲ್ಲಿ ಆಡಲಿವೆ. ಮೊದಲ ಹಂತದಲ್ಲಿ ಯಾವುದೇ ಗೆಲುವಿಗೆ 40,000 ಅಮೇರಿಕನ್ ಡಾಲರ್ ಬಹುಮಾನವನ್ನು ಘೋಷಿಸಲಾಗುತ್ತದೆ,  12 ಪಂದ್ಯಗಳಿಗೆ 480,000 ಅಮೇರಿಕನ್ ಡಾಲರ್ ಬಹುಮಾನ ಪಡೆಯಲಿವೆ. ಟಿ20 ವಿಶ್ವಕಪ್ ಅ.16 ರಿಂದ ನವೆಂಬರ್ 13 ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT