ಏಕದಿನ ವಿಶ್ವಕಪ್ 
ಕ್ರಿಕೆಟ್

ಭಾರತ-ಪಾಕಿಸ್ತಾನ ಮತ್ತು ಇತರ ಎಂಟು ವಿಶ್ವಕಪ್ ಪಂದ್ಯಗಳ ದಿನಾಂಕ ಬದಲಾವಣೆ, ಇಲ್ಲಿದೆ ವಿವರ!

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2023ರ ODI ವಿಶ್ವಕಪ್‌ನ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2023ರ ODI ವಿಶ್ವಕಪ್‌ನ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಇದರಲ್ಲಿ ಭಾರತ-ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಹೊರತುಪಡಿಸಿ ಉಳಿದ 8 ಪಂದ್ಯಗಳ ದಿನಾಂಕವೂ ಬದಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಭಾನುವಾರ, 15 ಅಕ್ಟೋಬರ್ 2023ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿತ್ತು. ಈಗ ಅದನ್ನು ಒಂದು ದಿನ ಮುಂಚಿತವಾಗಿ ಸ್ಥಳಾಂತರಿಸಲಾಗಿದೆ. ಪಂದ್ಯವು ಈಗ ಅದೇ ಸ್ಥಳದಲ್ಲಿ ಶನಿವಾರ, 14 ಅಕ್ಟೋಬರ್ 2023ರಂದು ನಡೆಯಲಿದೆ.

ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್‌ನ ಪಂದ್ಯವನ್ನು ಈಗ 24 ಗಂಟೆಗಳ ನಂತರ ಅಂದರೆ ಅಕ್ಟೋಬರ್ 14ರ ಶನಿವಾರದ ಬದಲಿಗೆ 15 ಅಕ್ಟೋಬರ್ 2023ರ ಭಾನುವಾರದಂದು ನಡೆಯಲಿದೆ. ಅಕ್ಟೋಬರ್ 12 ರಂದು ಗುರುವಾರ ನಡೆಯಲಿರುವ ಹೈದರಾಬಾದ್‌ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಈಗ ಅಕ್ಟೋಬರ್ 10 ಮಂಗಳವಾರ ನಡೆಯಲಿದೆ. 13 ಅಕ್ಟೋಬರ್ 2023ರಂದು ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಶ್ರೇಷ್ಠ ಪಂದ್ಯವನ್ನು ಈಗ 24 ಗಂಟೆಗಳ ಮೊದಲು 12 ಅಕ್ಟೋಬರ್ 2023ರಂದು ನಡೆಸಲಾಗುತ್ತದೆ.

ಬಾಂಗ್ಲಾದೇಶ-ನ್ಯೂಜಿಲೆಂಡ್ ಪಂದ್ಯಗಳ ವೇಳಾಪಟ್ಟಿ ಬದಲಾವಣೆ
ಅದೇ ರೀತಿ ಅಕ್ಟೋಬರ್ 14ರಂದು ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ ಪಂದ್ಯ ನಡೆಯಬೇಕಿತ್ತು. ಆದರೆ ಈಗ ಒಂದು ದಿನ ಮುಂಚಿತವಾಗಿ ಮರು ನಿಗದಿಪಡಿಸಲಾಗಿದೆ. ಈಗ ಈ ಪಂದ್ಯವು ಶುಕ್ರವಾರ 13 ಅಕ್ಟೋಬರ್ 2023ರಂದು ನಡೆಯಲಿದೆ. ಟೂರ್ನಿಯ ಆರಂಭಿಕ ಹಂತದ ವೇಳಾಪಟ್ಟಿಯಲ್ಲಿಯೇ ಸಣ್ಣ ಬದಲಾವಣೆ ಮಾಡಲಾಗಿದೆ. ಧರ್ಮಶಾಲಾದಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವು ಈಗ ಹಗಲು-ರಾತ್ರಿಯ ಬದಲು ಹಗಲು ಪಂದ್ಯವಾಗಿ ಮಾರ್ಪಟ್ಟಿದೆ. ಈಗ ಈ ಪಂದ್ಯ ಬೆಳಗ್ಗೆ 10:30ಕ್ಕೆ(ಸ್ಥಳೀಯ ಕಾಲಮಾನ) ಆರಂಭವಾಗಲಿದೆ.

ನವೆಂಬರ್ 12ರಂದು ಭಾರತದ ಪಂದ್ಯ
ಲೀಗ್ ಹಂತದ ಕೊನೆಯಲ್ಲಿ ನವೆಂಬರ್ 12 (ಭಾನುವಾರ) ಡಬಲ್ ಹೆಡರ್ ವೇಳಾಪಟ್ಟಿ ಬದಲಾಗಿದೆ. ಈ ದಿನ ನಡೆಯಬೇಕಿದ್ದ ಪಂದ್ಯಗಳನ್ನು ಒಂದು ದಿನ ಮುಂಚಿತವಾಗಿ ನವೆಂಬರ್ 11ಕ್ಕೆ (ಶನಿವಾರ) ಸ್ಥಳಾಂತರಿಸಲಾಗಿದೆ. ಪುಣೆ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ (10:30 AM) ಮತ್ತು ಕೋಲ್ಕತ್ತಾ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ (02:00 PM) ಎದುರಿಸಲಿದೆ. ನೆದರ್ಲೆಂಡ್ಸ್ ವಿರುದ್ಧದ ಭಾರತದ ಕೊನೆಯ ಲೀಗ್ ಪಂದ್ಯವು ಈಗ ಬೆಂಗಳೂರಿನಲ್ಲಿ ನವೆಂಬರ್ 11ರ ಬದಲಿಗೆ 12ರಂದು ಹಗಲು-ರಾತ್ರಿ ಪಂದ್ಯವಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!