ಶ್ರೀಲಂಕಾ ಕ್ರಿಕೆಟ್ 
ಕ್ರಿಕೆಟ್

ಶ್ರೀಲಂಕಾ ಕ್ರಿಕೆಟ್ ಗೆ 6.3 ಶತಕೋಟಿ ರೂಪಾಯಿ ದಾಖಲೆಯ ನಿವ್ವಳ ಆದಾಯ

ರಾಜಕೀಯ ಆಂತರಿಕ ಬೇಗುದಿಯಿಂದ ತತ್ತರಿಸಿದ್ದ ಶ್ರೀಲಂಕಾದಲ್ಲಿ ಇದೀಗ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಬರೊಬ್ಬರಿ 6.3 ಶತಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಹೇಳಲಾಗಿದೆ.

ಕೊಲಂಬೊ: ರಾಜಕೀಯ ಆಂತರಿಕ ಬೇಗುದಿಯಿಂದ ತತ್ತರಿಸಿದ್ದ ಶ್ರೀಲಂಕಾದಲ್ಲಿ ಇದೀಗ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಬರೊಬ್ಬರಿ 6.3 ಶತಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಹೇಳಲಾಗಿದೆ.

ಹೌದು.. ಶ್ರೀಲಂಕಾ ಕ್ರಿಕೆಟ್ ಮಂಡಳಿ ನೀಡಿರುವ ವರದಿಯ ಪ್ರಕಾರ, ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) 2022 ರಲ್ಲಿ ರೂ 6.3 ಬಿಲಿಯನ್ ಗಳಿಸಿದ್ದು, ಇದು ಕ್ರೀಡಾ ಸಂಸ್ಥೆಯ ಅತ್ಯಧಿಕ ವಾರ್ಷಿಕ ನಿವ್ವಳ ಆದಾಯವಾಗಿದೆ ಎಂದು ಹೇಳಿದೆ.

ಈ ಕುರಿತು ಪ್ರಕಟಣೆ ಕೂಡ ನೀಡಿರುವ SLC, "ನಿವ್ವಳ ಆದಾಯದಲ್ಲಿ ಇತ್ತೀಚಿನ ಹೆಚ್ಚಳವು ಪ್ರಾಥಮಿಕವಾಗಿ ನಾಲ್ಕು ಆದಾಯ ವಿಭಾಗಗಳಿಂದ ಉತ್ಪತ್ತಿಯಾಗಿದೆ, ಅವುಗಳು ಅಂತಾರಾಷ್ಟ್ರೀಯ ಕ್ರಿಕೆಟ್, ದೇಶೀಯ ಕ್ರಿಕೆಟ್, ಪ್ರಾಯೋಜಕತ್ವದ ಒಪ್ಪಂದಗಳು ಮತ್ತು ICC ವಾರ್ಷಿಕ ಸದಸ್ಯರ ವಿತರಣೆಗಳು" ಎಂದು  ತಿಳಿಸಿದೆ.

ಅಂತೆಯೇ SLC ಗಾಗಿ ಹೊಸ ಸಂವಿಧಾನವನ್ನು ರಚಿಸಲು ಕ್ರೀಡಾ ಸಚಿವ ರೋಷನ್ ರಾಣಾ ಸಿಂಗ್ ಅವರು 10 ಸದಸ್ಯರ ಸಮಿತಿಯನ್ನು ನೇಮಿಸಿದ್ದಾರೆ. ಈ ಸಮಿತಿಯು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆಟಿ ಚಿತ್ರಸಿರಿ ನೇತೃತ್ವದ ಸಮಿತಿಯು ಹಲವಾರು ಕಾನೂನು ಗಣ್ಯರು ಮತ್ತು ಮಾಜಿ ರಾಷ್ಟ್ರೀಯ ಕ್ರಿಕೆಟಿಗರಾದ ಚರಿತ್ ಸೇನಾನಾಯಕೆ ಮತ್ತು ಫರ್ವೀಜ್ ಮಹರೂಫ್ ಅವರನ್ನು ಒಳಗೊಂಡಿದೆ. ಈ ಉದ್ದೇಶಕ್ಕಾಗಿ ಐಸಿಸಿಯಿಂದ ಮಾರ್ಗದರ್ಶನ ಮತ್ತು ತಜ್ಞರ ಸಲಹೆಯನ್ನು ಪಡೆದಿದ್ದೇನೆ ಎಂದು ರಾಣಾಸಿಂಗ್ ಹೇಳಿದ್ದಾರೆ.

ಎಸ್‌ಎಲ್‌ಸಿ ಪದಾಧಿಕಾರಿಗಳ ಚುನಾವಣೆಗಳು ಯಾವಾಗಲೂ ವಿವಾದದಿಂದ ಕೂಡಿರುತ್ತವೆ, ಏಕೆಂದರೆ ಹೆಚ್ಚಿನ ಸಂಖ್ಯೆಯ ಮತಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ, ಇದು ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿ ಮತ-ಖರೀದಿಯಂತಹ ದುರುಪಯೋಗದ ಆರೋಪಗಳಿಗೆ ಕಾರಣವಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT