ಉಮ್ರಾನ್ ಮಲ್ಲಿಕ್ ಮತ್ತು ಶೊಯೆಬ್ ಅಖ್ತರ್ 
ಕ್ರಿಕೆಟ್

ಗಂಟೆಗೆ 161 ಕಿ.ಮಿ ವೇಗದಲ್ಲಿ ಬೌಲಿಂಗ್‌?; ಶೊಯೆಬ್ ಅಖ್ತರ್ ದಾಖಲೆ ಮುರಿಯುವ ಕುರಿತು ಭಾರತದ ವೇಗಿ ಉಮ್ರಾನ್ ಮಲ್ಲಿಕ್ ಹೇಳಿದ್ದೇನು?

ಭಾರತದ ವೇಗದ ಬೌಲಿಂಗ್ ಸೆನ್ಸೇಷನ್ ಉಮ್ರಾನ್ ಮಲ್ಲಿಕ್ ಪಾಕಿಸ್ತಾನದ ವೇಗಿ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೊಯೆಬ್ ಅಖ್ತರ್ ಅವರ ವೇಗದ ಬೌಲಿಂಗ್ ದಾಖಲೆ ಮುರಿಯುವ ಕುರಿತು ಮಾತನಾಡಿದ್ದಾರೆ.

ನವದೆಹಲಿ: ಭಾರತದ ವೇಗದ ಬೌಲಿಂಗ್ ಸೆನ್ಸೇಷನ್ ಉಮ್ರಾನ್ ಮಲ್ಲಿಕ್ ಪಾಕಿಸ್ತಾನದ ವೇಗಿ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೊಯೆಬ್ ಅಖ್ತರ್ ಅವರ ವೇಗದ ಬೌಲಿಂಗ್ ದಾಖಲೆ ಮುರಿಯುವ ಕುರಿತು ಮಾತನಾಡಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಅವರ 161 ಕಿ.ಮಿ ವೇಗದ ಎಸೆತದ ದಾಖಲೆಯನ್ನು ನೀವು ಮುರಿಯಲಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಸದ್ಯ ದೇಶಕ್ಕಾಗಿ ಉತ್ತಮವಾಗಿ ಆಟವಾಡುವುದರ ಬಗ್ಗೆಯಷ್ಟೇ ನಾನು ಗಮನಹರಿಸಿದ್ದೇನೆ. ಒಂದು ವೇಳೆ ನಾನು ಉತ್ತಮ ಪ್ರದರ್ಶನ ನೀಡಿದರೆ ಅಥವಾ ನಾನು ಅದೃಷ್ಟವಂತನಾಗಿದ್ದಾರೆ, ಆ ದಾಖಲೆಯನ್ನು ಮುರಿಯುತ್ತೇನೆ. ಆದರೆ ಆ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಪಂದ್ಯದ ವೇಳೆಯಲ್ಲಿ ನೀವು ಎಷ್ಟು ವೇಗವಾಗಿ ಬೌಲಿಂಗ್‌ ಮಾಡುತ್ತೀರಿ ಎನ್ನುವುದು ನಿಮಗೆ ತಿಳಿಯುವುದಿಲ್ಲ. ಎಷ್ಟು ವೇಗವಾಗಿ ಬೌಲಿಂಗ್‌ ಮಾಡಿದೆ ಎಂದು ಪಂದ್ಯದ ಬಳಿಕವಷ್ಟೇ ಗೊತ್ತಾಗುತ್ತದೆ. ಪಂದ್ಯದ ವೇಳೆ, ಸರಿಯಾದ ಸ್ಥಳದಲ್ಲಿ ಬೌಲಿಂಗ್‌ ಮಾಡಿ ವಿಕೆಟ್‌ ಪಡೆಯುವುದರ ಮೇಲಷ್ಟೇ ನನ್ನ ಗಮನ ಇರುತ್ತದೆ‘ ಎಂದು ಅವರು ಹೇಳಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ಪರ ಆಡುತ್ತಿರುವ ಉಮ್ರಾನ್‌ ಮಲಿಕ್, ತನ್ನ ವೇಗದ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದರು. ಗಂಟೆಗೆ 150 ಕಿ.ಮಿ ಗೂ ಹೆಚ್ಚಿನ ವೇಗದಲ್ಲಿ ಚೆಂಡು ಎಸೆಯುವ ಸಾಮರ್ಥ್ಯ ಹೊಂದಿರುವ ಅವರು, 2022ರ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಫಲವಾಗಿ ಅವರಿಗೆ ಭಾರತ ತಂಡದ ಬಾಗಿಲು ಕೂಡ ತೆರೆದಿತ್ತು.

ಈವರೆಗೆ ಐದು ಏಕದಿನ ಹಾಗೂ ಮೂರು ಟಿ–20 ಪಂದ್ಯಗಳನ್ನು ಆಡಿರುವ ಉಮ್ರಾನ್‌ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮಂಗಳವಾರದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧ ಟಿ–20 ಸರಣಿಗೂ ಅವರಿಗೆ ಅವಕಾಶ ಲಭಿಸಿದೆ. 2023ರ ಏಕದಿನ ವಿಶ್ವಕಪ್‌ ದೃಷ್ಠಿಯಲ್ಲಿ ಅವರಿಗೆ ಈ ಅವಕಾಶಗಳು ಮಹತ್ವದ್ದು ಎನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT