ರಾಜಸ್ಥಾನ ರಾಯಲ್ಸ್ ಪಿಂಕ್ ಪ್ರಾಮಿಸ್ 
ಕ್ರಿಕೆಟ್

IPL 2024: 13 ಸಿಕ್ಸರ್, 78 ಮನೆಗಳಿಗೆ ಸೋಲಾರ್ ವ್ಯವಸ್ಥೆ, ರಾಜಸ್ಥಾನ ರಾಯಲ್ಸ್ Pink Promise!

ಹಾಲಿ ಐಪಿಎಲ್ 2024ರ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡ ತನ್ನ ಪ್ರದರ್ಶನದೊಂದಿಗೇ ಪಿಂಕ್ ಪ್ರಾಮಿಸ್ ಹೆಸರಿನ ಸಾಮಾಜಿಕ ಕಾರ್ಯವೊಂದನ್ನು ಕೈಗೆತ್ತಿಗೊಂಡಿದೆ.

ಜೈಪುರ: ಹಾಲಿ ಐಪಿಎಲ್ 2024ರ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡ ತನ್ನ ಪ್ರದರ್ಶನದೊಂದಿಗೇ ಪಿಂಕ್ ಪ್ರಾಮಿಸ್ ಹೆಸರಿನ ಸಾಮಾಜಿಕ ಕಾರ್ಯವೊಂದನ್ನು ಕೈಗೆತ್ತಿಗೊಂಡಿದೆ.

ಪಿಂಕ್ ಪ್ರಾಮಿಸಿ(Pink Promise) ಮಿಷನ್ ಅಡಿಯಲ್ಲಿ ಮಹಿಳೆಯರ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತು ಆರ್​ಸಿಬಿ(RCB) ವಿರುದ್ಧ ಪಿಂಕ್​ ಜೆರ್ಸಿಯಲ್ಲಿ(rajasthan royals pink jersey) ಕಣಕ್ಕಿಳಿದ್ದ ರಾಜಸ್ಥಾನ ರಾಯಲ್ಸ್‌(rajasthan royals) ಫ್ರಾಂಚೈಸಿ ತನ್ನ ವಿನೂತನ ಕಾರ್ಯದ ಮೂಲಕ ಜನ-ಮನ ಗೆದ್ದಿದೆ. ತನ್ನ ಪಿಂಕ್ ಪ್ರಾಮಿಸ್ ಯೋಜನೆ ಮೂಲಕ ರಾಜಸ್ಥಾನ ತಂಡ ಹತ್ತಾರು ಕುಟುಂಬಗಳಿಗೆ ಸೋಲಾರ್ ಪವರ್ ಅಳವಡಿಸುವ ಮೂಲಕ ಇತರರಿಗೆ ಸೂರ್ತಿಯಾಗಿದೆ.

ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸಿಡಿಸುವ ಪ್ರತೀ ಸಿಕ್ಸರ್ ಗೆ 6 ಮನೆಗಳಿಗೆ ಸೋಲಾರ್ ಪವರ್ ವ್ಯವಸ್ಥೆ ಅಳವಡಿಸುವ ಯೋಜನೆ ಇದಾಗಿದೆ. ಅದರಂತೆ ರಾಜಸ್ಥಾನ ತಂಡ ಇದೀಗ ಒಟ್ಟು 78 ಕುಟುಂಬಗಳ ಪಾಲಿಗೆ ಬೆಳಕಾಗಿದ್ದು, ಪ್ರತೀ ಸಿಕ್ಸರ್​ಗೆ ರಾಜಸ್ಥಾನದಲ್ಲಿರುವ 6 ಮನೆಗಳಿಗೆ ಉಚಿತ ಸೌರವಿದ್ಯುತ್‌ ಸಂಪರ್ಕವನ್ನು ನೀಡುವುದಾಗಿ ಫ್ರಾಂಚೈಸಿ ಪಂದ್ಯಕ್ಕೂ ಮುನ್ನ ಘೋಷಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ಒಟ್ಟು 13 ಸಿಕ್ಸರ್​ ಸಿಡಿದಿತ್ತು. ಈ ಲೆಕ್ಕಾಚಾರದಲ್ಲಿ ಒಟ್ಟು 78 ಮನೆಗಳಿಗೆ ಸೌರವಿದ್ಯುತ್‌ ಸಂಪರ್ಕವನ್ನು ಒದಗಿಸಲಿದೆ.

ರಾಜಸ್ಥಾನದ ಮಹಿಳೆಯರನ್ನು ಸಶಕ್ತಗೊಳಿಸಲು ಪಂದ್ಯದ ದಿನದ ಸಂಪೂರ್ಣ ಆದಾಯವನ್ನು ಫ್ರಾಂಚೈಸಿ ಮೀಸಲಾಗಿಟ್ಟಿತ್ತು. ಈ ಪಂದ್ಯದಲ್ಲಿ ಮಾರಾಟವಾಗುವ ಪ್ರತಿ ಟಿಕೆಟ್‌ನಿಂದ 100 ರೂ.ಗಳನ್ನು ಮಹಿಳೆಯರ ಅಭಿವೃದ್ಧಿಗೆ ನೀಡಲಾಯಿತು ಎಂದು ಫ್ರಾಂಚೈಸಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಹಲ್ಗಾಮ್ ಉಗ್ರ ದಾಳಿ: 1,597 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ NIA; ಉನ್ನತ LeT ಕಮಾಂಡರ್ ಸಾಜಿದ್ ಜಾಟ್ ಹೆಸರು ಉಲ್ಲೇಖ!

ನಿತೀಶ್ ಕುಮಾರ್ ವಿವಾದ: ನೇಮಕಾತಿ ಪತ್ರ ಪಡೆಯಲು ಬಂದ Muslim ವೈದ್ಯೆಯ hijab ಗೆ ಕೈ ಹಾಕಿದ ಸಿಎಂ; ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ| video

Video: ಯಶವಂತಪುರ ನಿಲ್ದಾಣದಲ್ಲಿ ಹೈಡ್ರಾಮಾ: RPF ಸಿಬ್ಬಂದಿ ಮೇಲೆ ಪುಂಡರ ಹಲ್ಲೆ, ರೈಲು ವಿಳಂಬ! ಆಗಿದ್ದೇನು?

ರಾಮ ಜನ್ಮಭೂಮಿ ಚಳವಳಿಯ ಪ್ರಮುಖ ನಾಯಕ ರಾಮವಿಲಾಸ್ ವೇದಾಂತಿ ವಿಧಿವಶ!

'ಎಲ್ಲಾ ಬಂದ್ ಆಗ್ಬೇಕು': ಜೈಲಿನಲ್ಲಿ ನಟ ದರ್ಶನ್- DGP ಮುಖಾಮುಖಿ, ಬೆವರಿಳಿಸಿದ ಅಲೋಕ್ ಕುಮಾರ್!

SCROLL FOR NEXT