ಟೀಂ ಇಂಡಿಯಾ ಬೌಲರ್ ಮೊಹಮ್ಮದ್​ ಶಮಿ 
ಕ್ರಿಕೆಟ್

IPL 2024: ಗುಜರಾತ್ ಟೈಟಾನ್ಸ್‌ಗೆ ದೊಡ್ಡ ಹೊಡೆತ; IPL ನಿಂದ ಈ ಸ್ಟಾರ್ ಬೌಲರ್ ಔಟ್!

ಐಪಿಎಲ್ 2024 ಆರಂಭವಾಗಲು ಇನ್ನೂ ಸುಮಾರು ಒಂದು ತಿಂಗಳು ಬಾಕಿ ಇದೆ. ಅದಕ್ಕೂ ಮುನ್ನ 2022ರ ಚಾಂಪಿಯನ್ ತಂಡ ಮತ್ತು 2023ರ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ದೊಡ್ಡ ಹಿನ್ನಡೆ ಅನುಭವಿಸಿವೆ.

ಮುಂಬೈ: ಐಪಿಎಲ್ 2024 ಆರಂಭವಾಗಲು ಇನ್ನೂ ಸುಮಾರು ಒಂದು ತಿಂಗಳು ಬಾಕಿ ಇದೆ. ಅದಕ್ಕೂ ಮುನ್ನ 2022ರ ಚಾಂಪಿಯನ್ ತಂಡ ಮತ್ತು 2023ರ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ದೊಡ್ಡ ಹಿನ್ನಡೆ ಅನುಭವಿಸಿವೆ. ಎಡ ಪಾದದ ಗಾಯದಿಂದಾಗಿ ಮೊಹಮ್ಮದ್ ಶಮಿ ಸಂಪೂರ್ಣ ಐಪಿಎಲ್ ಸೀಸನ್‌ನಿಂದ ಹೊರಗುಳಿದಿದ್ದಾರೆ. ಮೊಹಮ್ಮದ್ ಶಮಿಗೆ ಬ್ರಿಟನ್‌ನಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಲಿದ್ದಾರೆ.

ಕಳೆದ ಏಕದಿನ ವಿಶ್ವಕಪ್ ಬಳಿಕ ಶಮಿ ಮೈದಾನದಿಂದ ದೂರ ಉಳಿದಿದ್ದಾರೆ. ಗಾಯದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಆಯ್ಕೆಯಾಗಿರಲಿಲ್ಲ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು. ಶಮಿ ಅನುಪಸ್ಥಿತಿಯು ಗುಜರಾತ್‌ಗೆ ತುಂಬಾ ಹಿನ್ನಡೆಯಾಗಲಿದೆ. ಹಾರ್ದಿಕ್ ಪಾಂಡ್ಯ ಗುಜರಾತ್ ತೊರೆದು ಮುಂಬೈ ಇಂಡಿಯನ್ಸ್ ಗೆ ತೆರಳಿರುವುದರಿಂದ ತಂಡ ಈಗಾಗಲೇ ನಷ್ಟ ಎದುರಿಸುತ್ತಿದೆ. ಗುಜರಾತ್ ತಂಡದ ನಾಯಕರಾಗಿದ್ದ ಹಾರ್ದಿಕ್ ಅವರನ್ನು ಕಳೆದ ವರ್ಷ ಹರಾಜಿಗೂ ಮುನ್ನ ಮುಂಬೈ ಜಿಟಿಗೆ ವ್ಯಾಪಾರ ಮಾಡಿತ್ತು.

ವಿಶ್ವಕಪ್ ವೇಳೆಯೇ ಶಮಿ ಗಾಯಗೊಂಡಿದ್ದರು. ಅವರು ಗಾಯಗೊಂಡ ಪಾದದ ಜೊತೆಗೆ ವಿಶ್ವಕಪ್‌ನಲ್ಲಿ ಆಡಿದರು. ಆ ಪಂದ್ಯಾವಳಿಯಲ್ಲಿ, ಅವರು ಅದ್ಭುತ ಪ್ರದರ್ಶನ ನೀಡಿದರು. ಏಳು ಪಂದ್ಯಗಳಲ್ಲಿ 24 ವಿಕೆಟ್ಗಳನ್ನು ಪಡೆದರು. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ, ಇದಾದ ಬಳಿಕ ನಿರಂತರವಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇದೀಗ ಅವರ ಗಾಯಕ್ಕೆ ಸೂಕ್ತ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಮಿ ಚೇತರಿಸಿಕೊಳ್ಳಲು ಹಲವು ತಿಂಗಳು ಬೇಕಾಗಬಹುದು. ಐಪಿಎಲ್ ನಂತರವೇ ಟಿ20 ವಿಶ್ವಕಪ್ ನಡೆಯಲಿದ್ದು, ಶಮಿ ಆಡುವ ಬಗ್ಗೆ ಅನುಮಾನ ಮೂಡಿದೆ. ಆದರೆ, ಅದಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ.

ಶಮಿ 2022 ರಿಂದ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ ಮತ್ತು ಎರಡೂ ಋತುಗಳಲ್ಲಿ ತಂಡ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಪಿಎಲ್ 2022 ರಲ್ಲಿ, ಶಮಿ 16 ಪಂದ್ಯಗಳಲ್ಲಿ 20 ವಿಕೆಟ್ ಪಡೆದರು. ಆರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ, 2023ರಲ್ಲಿ ಶಮಿ 17 ಪಂದ್ಯಗಳಲ್ಲಿ 28 ವಿಕೆಟ್‌ ಪಡೆದಿದ್ದರು. ಕಳೆದ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಶಮಿ ಅನುಪಸ್ಥಿತಿಯಿಂದ ಗುಜರಾತ್ ಈ ವರ್ಷ ಸಾಕಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ತಂಡದ ಇಬ್ಬರು ಅನುಭವಿ ಆಟಗಾರರು ಈ ಋತುವಿನಲ್ಲಿ ಅವರೊಂದಿಗೆ ಇರುವುದಿಲ್ಲ. ಹಾರ್ದಿಕ್ ಬದಲಿಗೆ ಶುಭಮನ್ ಗಿಲ್ ಈ ಋತುವಿಗೆ ನಾಯಕರಾಗಿ ನೇಮಕಗೊಂಡಿದ್ದಾರೆ. ಅದೇ ಸಮಯದಲ್ಲಿ, ತಂಡವು ಶೀಘ್ರದಲ್ಲೇ ಶಮಿ ಬದಲಿಯನ್ನು ಘೋಷಿಸಬಹುದು.

ಶಮಿ ಹೊರತುಪಡಿಸಿ, ಗುಜರಾತ್‌ನಲ್ಲಿ ಮೋಹಿತ್ ಶರ್ಮಾ ಮತ್ತು ಉಮೇಶ್ ಯಾದವ್ ರೂಪದಲ್ಲಿ ಇಬ್ಬರು ಅನುಭವಿ ಬೌಲರ್‌ಗಳಿದ್ದಾರೆ. ಅದೇ ಸಮಯದಲ್ಲಿ ದರ್ಶನ್ ನಲ್ಕಂಡೆ, ಸುಶಾಂತ್ ಮಿಶ್ರಾ ಮತ್ತು ಕಾರ್ತಿಕ್ ತ್ಯಾಗಿ ರೂಪದಲ್ಲಿ ಮೂವರು ಯುವ ಬೌಲರ್‌ಗಳಿದ್ದಾರೆ. ಜೋಶ್ ಲಿಟಲ್ ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದರು ಮತ್ತು ಅವರು ತಂಡಕ್ಕೆ ಉಪಯುಕ್ತವೆಂದು ಸಾಬೀತುಪಡಿಸಬಹುದು. ಇದಲ್ಲದೆ, ತಂಡವು ಆಸ್ಟ್ರೇಲಿಯಾದ ವೇಗದ ಬೌಲರ್ ಸ್ಪೆನ್ಸರ್ ಜಾನ್ಸನ್ ಅವರನ್ನು ಹರಾಜಿನಲ್ಲಿ ಖರೀದಿಸಿತು. ಹಾರ್ದಿಕ್ ಬದಲಿಗೆ ಗುಜರಾತ್ ತಂಡವು ಅಫ್ಘಾನಿಸ್ತಾನದ ಅದ್ಭುತ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್ಜಾಯ್ ಅವರನ್ನು ಖರೀದಿಸಿತ್ತು. ಅವರು ವೇಗವಾಗಿ ಬೌಲ್ ಮಾಡಬಲ್ಲರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT