ಪಾಂಡ್ಯಗೆ ಕುರ್ಚಿ ಬಿಟ್ಟು ಎದ್ದು ಹೋದ ಮಾಲಿಂಗ  
ಕ್ರಿಕೆಟ್

IPL 2024: ಮದವೇರಿದ ಪಾಂಡ್ಯ; ಕುಳಿತಿದ್ದ ಮಾಲಿಂಗ ಕುರ್ಚಿ ಬಿಟ್ಟು ಎದ್ದು ಹೋದದ್ದೇಕೆ?, ವಿಡಿಯೋ ನೋಡಿ!

IPL 17ನೇ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ವಿರುದ್ಧ ಕೂಗು ಹೆಚ್ಚಾಗುತ್ತಿದೆ. ಅಭಿಮಾನಿಗಳಿಂದ ಮಾಜಿ ಕ್ರಿಕೆಟಿಗರವರೆಗೂ ಪಾಂಡ್ಯ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಏತನ್ಮಧ್ಯೆ, ಹೊಸ ವೀಡಿಯೊ ಹೊರಬಿದ್ದಿದ್ದು ಇದರಿಂದಾಗಿ ಹಾರ್ದಿಕ್ ಪಾಂಡ್ಯ ವಿರುದ್ಧ ಟೀಕೆಗಳು ಪ್ರಾರಂಭವಾಗಿವೆ.

IPL 17ನೇ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವ ವಿರುದ್ಧ ಕೂಗು ಹೆಚ್ಚಾಗುತ್ತಿದೆ. ಅಭಿಮಾನಿಗಳಿಂದ ಮಾಜಿ ಕ್ರಿಕೆಟಿಗರವರೆಗೂ ಪಾಂಡ್ಯ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಏತನ್ಮಧ್ಯೆ, ಹೊಸ ವೀಡಿಯೊ ಹೊರಬಿದ್ದಿದ್ದು ಇದರಿಂದಾಗಿ ಹಾರ್ದಿಕ್ ಪಾಂಡ್ಯ ವಿರುದ್ಧ ಟೀಕೆಗಳು ಪ್ರಾರಂಭವಾಗಿವೆ.

ಪೊಲಾರ್ಡ್ ಮತ್ತು ಮಾಲಿಂಗ ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಔಟಾಗಿ ಅಲ್ಲಿಗೆ ಬಂದ ಪಾಂಡ್ಯ ಇಬ್ಬರನ್ನು ನೋಡಿ ತನಗೆ ಒಂದು ಕುರ್ಚಿ ಬೇಕು ಎನ್ನುವಂತೆ ವರ್ತಿಸುತ್ತಾನೆ. ಇದನ್ನು ನೋಡಿದ ಪೊಲಾರ್ಡ್ ತನ್ನ ಕುರ್ಚಿಯಿಂದ ಎದ್ದೇಳಲು ಮುಂದಾಗುತ್ತಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಲಸಿತ್ ಮಾಲಿಂಗ ಪೊಲಾರ್ಡ್ ರನ್ನು ತಡೆದು ತನ್ನ ಕುರ್ಚಿಯನ್ನು ಬಿಟ್ಟು ಅಲ್ಲಿಂದ ಹೊರ ಹೋಗುತ್ತಾರೆ. ಇದಾದ ನಂತರ ಪಾಂಡ್ಯ ಆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪಾಂಡ್ಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಗಾಗಿ ಇಷ್ಟೆಲ್ಲಾ ಸಾಧನೆ ಮಾಡಿದ ಇಬ್ಬರು ಹಿರಿಯ ಆಟಗಾರರ ಮುಂದೆ ಪಾಂಡ್ಯ ನಿಲ್ಲಲಾರ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ. ನಾನೇ ನಾಯಕ, ನನಗೆ ಕುರ್ಚಿ ಬಿಟ್ಟುಬಿಡಿ ಎಂದು ಹಾರ್ದಿಕ್ ಬಿಂಬಿಸುತ್ತಿದ್ದಾರಂತೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಅದೇ ಸಮಯದಲ್ಲಿ, ಮತ್ತೊಬ್ಬ ಬಳಕೆದಾರರು ಮಾಲಿಂಗ ಎದ್ದದ್ದನ್ನು ಹಾರ್ದಿಕ್ ಪಾಂಡ್ಯ ನೋಡಿದರು ಆದರೆ ಇನ್ನೂ ಅವರನ್ನು ತಡೆಯಲಿಲ್ಲ ಎಂದು ಬರೆದಿದ್ದಾರೆ. ಇದರಿಂದ ಅಲ್ಲೇ ಕುಳಿತಿದ್ದ ಪೊಲಾರ್ಡ್ ಕೂಡ ಅಸಹನೀಯರಾದರು. ಪಾಂಡ್ಯಗೆ ಹಿರಿಯರನ್ನು ಹೇಗೆ ಗೌರವಿಸಬೇಕೆಂದು ತಿಳಿದಿಲ್ಲ ಎಂದು ಅವರು ಬರೆದಿದ್ದಾರೆ.

ಕಳಪೆ ಪ್ರದರ್ಶನದಿಂದಾಗಿ ಹಾರ್ದಿಕ್ ಪಾಂಡ್ಯ ನಿರಂತರವಾಗಿ ವಿಮರ್ಶಕರ ಟೀಕೆಗೆ ಗುರಿಯಾಗುತ್ತಿದ್ದಾರೆ. ಮತ್ತೊಂದೆಡೆ, ಹೈದರಾಬಾದ್ ವಿರುದ್ಧದ ಪಂದ್ಯದ ನಂತರ, ಟೀಮ್ ಮ್ಯಾನೇಜ್‌ಮೆಂಟ್ ಕೂಡ ಈ ವಿಷಯದ ಬಗ್ಗೆ ಸಾಕಷ್ಟು ಚಿಂತಿಸಿದೆ. ರೋಹಿತ್ ಶರ್ಮಾ ಅವರೊಂದಿಗೆ ನೀತಾ ಅಂಬಾನಿ ಮತ್ತು ಅನಂತ್ ಅಂಬಾನಿ ಮಾತುಕತೆಯ ಚಿತ್ರಗಳು ಸಹ ಹೊರಬಿದ್ದಿವೆ.

ಮುಂಬೈ ಈ ಋತುವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನಿಂದ ಪ್ರಾರಂಭಿಸಿತ್ತು. ಆದರೆ ಮೊದಲ ಪಂದ್ಯದಲ್ಲೇ ಸೋಲು ಕಂಡಿತ್ತು. ಹೀಗಾಗಿ ಕ್ಯಾಪ್ಟನ್ ಪಾಂಡ್ಯ ಕೂಡ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ. ಪಾಂಡ್ಯ ಕೂಡ ರೋಹಿತ್ ಶರ್ಮಾ ಅವರನ್ನು ಬೌಂಡರಿಗೆ ಹೋಗಿ ಫೀಲ್ಡಿಂಗ್ ಮಾಡುವ ಹೇಳುತ್ತಿರುವುದು. ಅದೇ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ಎರಡನೇ ಪಂದ್ಯದಲ್ಲಿ ಬುಮ್ರಾ ಅವರನ್ನು ತಡವಾಗಿ ಕರೆತಂದಿದ್ದಕ್ಕಾಗಿ ಗುರಿಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT