ಚೆಂಡಿಗಾಗಿ ತಡಕಾಡಿದ ಇಶಾನ್ ಕಿಶನ್ 
ಕ್ರಿಕೆಟ್

IPL 2025: 'ಈಗ ತಾನೆ ಬಾಲ್ ಹಿಡಿದ್ನಲ್ಲಾ ಗುರು.. ಎಲ್ಲೋಯ್ತು...'; ಚೆಂಡಿಗಾಗಿ ತಡಕಾಡಿದ Ishan Kishan; ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು! Video

ಪಂಜಾಬ್ ಕಿಂಗ್ಸ್ ಇನಿಂಗ್ಸ್ ವೇಳೆ ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್ ಮೊಹಮ್ಮದ್ ಶಮಿ ಎಸೆದ ಎಸೆತವನ್ನು ಬಾರಿಸಿದ ಸ್ಟ್ರೈಟ್ ಹಿಟ್ ಅನ್ನು ಇಶಾನ್ ಕಿಶನ್ ಓಡಿ ಹೋಗಿ ತಡೆದಿದ್ದರು.

ಹೈದರಾಬಾದ್: ನಿನ್ನೆ ಹೈದರಾಬಾದ್ ನಲ್ಲಿ ನಡೆದ ಪಂಜಾಬ್ ಮತ್ತು ಹೈದರಾಬಾದ್ ನಡುವಿನ ಪಂದ್ಯ ಬಿಗ್ ಸ್ಕೋರ್ ನ ಹೊರತಾಗಿಯೂ ಕೆಲ ಹಾಸ್ಯಮಯ ಸನ್ನಿವೇಶಕ್ಕೂ ವೇದಿಕೆಯಾಗಿತ್ತು.

ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 246 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಗುರಿ ಮುಟ್ಟಿತು. ಈ ಪಂದ್ಯದಲ್ಲಿ ಅಸಾಧ್ಯವಾಗಿದ್ದ ಗುರಿಯನ್ನು ಹೈದರಾಬಾದ್ ಯಶಸ್ವಿಯಾಗಿ ಮುಟ್ಟಿತ್ತು.

ಹೈದಾರಾಬಾದ್ ಗೆಲುವಿನಲ್ಲಿ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರೆ, ಮತ್ತೊಂದು ಬದಿಯಲ್ಲಿದ್ದ ಅಭಿಷೇಕ್ ಶರ್ಮಾ ಕೇವಲ 55 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಿತ 141 ರನ್ ಚಚ್ಚಿದರು.

ಫೀಲ್ಡಿಂಗ್ ವೇಳೆ ಚೆಂಡಿಗಾಗಿ ತಡಕಾಡಿದ ಇಶಾನ್ ಕಿಶನ್

ಇನ್ನು ಪಂಜಾಬ್ ಕಿಂಗ್ಸ್ ಇನಿಂಗ್ಸ್ ವೇಳೆ ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್ ಮೊಹಮ್ಮದ್ ಶಮಿ ಎಸೆದ ಎಸೆತವನ್ನು ಬಾರಿಸಿದ ಸ್ಟ್ರೈಟ್ ಹಿಟ್ ಅನ್ನು ಇಶಾನ್ ಕಿಶನ್ ಓಡಿ ಹೋಗಿ ತಡೆದಿದ್ದರು. ಆದರೆ ಚೆಂಡು ತಡೆದ ಬಳಿಕ ಅವರು ಬಾಲ್​ಗಾಗಿ ಹುಡುಕಾಡಿದ್ದು ವಿಶೇಷವಾಗಿತ್ತು. ಚೆಂಡು ಜಾಹೀರಾತು ಬರಹಗಳ ಮೇಲೆ ನಿಂತಿದ್ದರಿಂದ ಇಶಾನ್ ಕಿಶನ್​ಗೆ ವೈಟ್ ಬಾಲ್ ಗೋಚರಿಸಲಿಲ್ಲ. ಈ ವೇಳೆ ಚೆಂಡು ಎಲ್ಲಿಗೆ ಹೋಯಿತು ಎಂದು ಇಶಾನ್ ಕಿಶನ್ ತಡಕಾಡಿದರು. ಆದರೆ ಇದನ್ನು ಗಮನಿಸಿದ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಓಡಿ ಬಂದು ಚೆಂಡು ತೆಗೆದು ಕೊಂಡು ಎಸೆದರು. ಆ ಮೂಲಕ ಹೆಚ್ಚುವರಿ ರನ್ ಗಳ ತಡೆದರು.

ಆದರೆ ಪಕ್ಕದಲ್ಲೇ ಇದ್ದ ಚೆಂಡನ್ನು ಗುರುತಿಸದ ಇಶಾನ್ ಕಿಶನ್ ಆ ಸಂದರ್ಭದಲ್ಲಿ ಎಲ್ಲರ ನಗುವಿನ ಆಹಾರವಾಗಿದ್ದರು. ಅತ್ತ ಇಶಾನ್ ಕಿಶನ್ ಚೆಂಡಿಗಾಗಿ ತಡಕಾಡುತ್ತಿದ್ದರೆ ಪ್ರೇಕ್ಷಕರು ಮಾತ್ರ ನಗುವಿನ ಅಲೆಯಲ್ಲಿ ತೇಲುತ್ತಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT