ಭಾರತ vs ಇಂಗ್ಲೆಂಡ್ ಸರಣಿಯ ಸಮಯದಲ್ಲಿ ಭಾರತದ ಆಟಗಾರರು 
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್‌ನಲ್ಲಿ ಭಾರತ Vaseline ಬಳಸಿದೆ: ಪಾಕ್ ಮಾಜಿ ಆಟಗಾರ ಶಬ್ಬೀರ್ ಅಹ್ಮದ್ ಖಾನ್ ಆರೋಪ

ಮೊದಲ ಮೂರು ಟೆಸ್ಟ್‌ ಪಂದ್ಯಗಳ ನಂತರ 2-1 ಹಿನ್ನಡೆಯಲ್ಲಿದ್ದರೂ, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲಗೊಳಿಸುವ ಮೂಲಕ ತಂಡವು ಮೆಚ್ಚುಗೆಗೆ ಪಾತ್ರವಾಗಿದೆ.

ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಮರಣೀಯ ಆಟದ ಬಳಿಕ ಭಾರತೀಯ ಕ್ರಿಕೆಟ್ ತಂಡದ ಹೆಚ್ಚಿನ ಸದಸ್ಯರು ದೇಶಕ್ಕೆ ಮರಳಿದ್ದಾರೆ. ಸರಣಿಯ ಆರಂಭದಲ್ಲಿ ಶುಭಮನ್ ಗಿಲ್ ನೇತೃತ್ವದ ತಂಡದ ಸಾಕಷ್ಟು ಆತಂಕ ಎದುರಾಗಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜ ಆಟಗಾರರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರಿಂದ ತಂಡದಲ್ಲಿ ಹಲವು ಯುವ ಆಟಗಾರರು ಸ್ಥಾನ ಪಡೆದಿದ್ದರು. 2007 ರಿಂದ ಭಾರತವು ಟೆಸ್ಟ್ ಸರಣಿಯನ್ನು ಗೆದ್ದೇ ಇಲ್ಲ. ಹೀಗಾಗಿ, ಇಂಗ್ಲೆಂಡ್‌ನಿಂದ ಸಕಾರಾತ್ಮಕ ಫಲಿತಾಂಶದೊಂದಿಗೆ ಮರಳುವುದು ನಿರೀಕ್ಷೆಗೆ ಮೀರಿದ್ದಾಗಿತ್ತು. ಮೊದಲ ಮೂರು ಟೆಸ್ಟ್‌ ಪಂದ್ಯಗಳ ನಂತರ 2-1 ಹಿನ್ನಡೆಯಲ್ಲಿದ್ದರೂ, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲಗೊಳಿಸುವ ಮೂಲಕ ತಂಡವು ಮೆಚ್ಚುಗೆಗೆ ಪಾತ್ರವಾಗಿದೆ.

ಐದನೇ ಟೆಸ್ಟ್‌ನ ಕೊನೆಯ ದಿನ ಕಠಿಣವಾಗಿತ್ತು. ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯನ್ನು ಗೆಲ್ಲಲು ಇಂಗ್ಲೆಂಡ್‌ಗೆ ಕೇವಲ 35 ರನ್‌ಗಳು ಬೇಕಾಗಿದ್ದವು. ಆದರೆ, ಸರಣಿಯನ್ನು ಡ್ರಾ ಮಾಡಿಕೊಳ್ಳಲು ಭಾರತಕ್ಕೆ ನಾಲ್ಕು ವಿಕೆಟ್‌ಗಳು ಬೇಕಾಗಿದ್ದವು. ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್‌ ನೆರವಿನಿಂದ ಭಾರತ ಆರು ರನ್‌ಗಳಿಂದ ಗೆದ್ದಿತು. ಇದು ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅಂತರದ ಗೆಲುವಾಗಿತ್ತು.

ಆದಾಗ್ಯೂ, ಪಾಕಿಸ್ತಾನದ ಮಾಜಿ ಆಟಗಾರ ಶಬ್ಬೀರ್ ಅಹ್ಮದ್ ಖಾನ್ (10 ಟೆಸ್ಟ್‌ಗಳು, 32 ಏಕದಿನಗಳು) ಭಾರತೀಯರು ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿದರು. 'ಭಾರತವು ವ್ಯಾಸಲಿನ್ ಬಳಸಿದೆ ಎಂದು ನಾನು ಭಾವಿಸುತ್ತೇನೆ. 80+ ಓವರ್‌ಗಳ ನಂತರವೂ ಚೆಂಡು ಹೊಸದು ಎಂಬಂತೆ ಹೊಳೆಯುತ್ತಿತ್ತು. ಅಂಪೈರ್ ಈ ಚೆಂಡನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಬೇಕು' ಎಂದು ಅವರು X ನಲ್ಲಿ ಬರೆದಿದ್ದಾರೆ.

ಆ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರಲ್ಲಿ ಒಬ್ಬರು 2010 ರಲ್ಲಿ ನಡೆದ ಏಕದಿನ ಸರಣಿ ಸಮಯದಲ್ಲಿ ಶಾಹಿದ್ ಅಫ್ರಿದಿ ಚೆಂಡನ್ನು ಕಚ್ಚಿದ್ದನ್ನು ನೆನಪಿಸಿದ್ದಾರೆ.

ನಿಜವಾಗಿಯೂ! ಹಳೆಯ ಚೆಂಡುಗಳಲ್ಲಿ ಅಂತಹ ಅತಿರಂಜಿತ ಸ್ವಿಂಗ್ ಅನ್ನು ಹೊರತೆಗೆಯಲು ವಕಾರ್ ಮತ್ತು ವಾಸಿಮ್ ಅವರು ವ್ಯಾಸಲಿನ್ ಬಳಸಿದ್ದಾರೆಯೇ ಎಂದು ನೀವು ದಯವಿಟ್ಟು ಕೇಳುತ್ತೀರಾ?. ಅದಕ್ಕಾಗಿಯೇ ಇಂದು ಪಾಕಿಸ್ತಾನಕ್ಕೆ ಟ್ರೋಫಿ ಇಲ್ಲ, ಸಾಧನೆಯೂ ಇಲ್ಲ... ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ಶಬ್ಬೀರ್, ದಯವಿಟ್ಟು ಯಾವುದೇ ಪಿತೂರಿ ಸಿದ್ಧಾಂತಗಳು ಬೇಡ, ಈಗ ಅದಕ್ಕೆ ಸಮಯವಲ್ಲ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ 'ರಾಜಾತಿಥ್ಯ': ಇಬ್ಬರು ಅಧಿಕಾರಿಗಳು ಅಮಾನತು; ಮುಖ್ಯ ಅಧೀಕ್ಷಕ ಎತ್ತಂಗಡಿ; ತನಿಖೆಗೆ ಸಮಿತಿ ರಚನೆ

ವೈಟ್-ಕಾಲರ್ ಭಯೋತ್ಪಾದಕ ಪರಿಸರ ಅನಾವರಣ; 350 ಕೆಜಿ ಸ್ಫೋಟಕಗಳ ಪತ್ತೆ ಬೆನ್ನಲ್ಲೆ ವೈದ್ಯರ ಮನೆಯಿಂದ 2,563 ಕೆಜಿ ಸ್ಫೋಟಕಗಳು ವಶಕ್ಕೆ!

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆರೋಗ್ಯ ಗಂಭೀರ, ವೆಂಟಿಲೇಟರ್ ಅಳವಡಿಕೆ!

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಮಾಜ್​: ಹಿಂದೂಗಳಂತೆ ಅವರು ನಾಮಹಾಕಿ ತಟ್ಟೆ ಹಿಡಿಯಲ್ಲ; ಮಾಜಿ ಸಚಿವ ಆಂಜನೇಯ

'2 ದಿನಗಳಿಂದ ತೀವ್ರ ಕೆಮ್ಮು, ಎದೆ ನೋವು': ಅಮೆರಿಕದಲ್ಲಿ ಆಂಧ್ರ ಮೂಲದ 23 ವರ್ಷದ ವಿದ್ಯಾರ್ಥಿನಿ ಸಾವು, ಶವ ಸಾಗಣೆಗೆ 'ಹಣ ಸಂಗ್ರಹ ಅಭಿಯಾನ'

SCROLL FOR NEXT