ವೈಭವ್ ಸೂರ್ಯವಂಶಿ 
ಕ್ರಿಕೆಟ್

IPL 2025: ಆಘಾತ ನೀಡಿದ 'Boss Baby' ವೈಭವ್ ಸೂರ್ಯವಂಶಿ ಬಗ್ಗೆ ಆರ್ ಅಶ್ವಿನ್ ಮಾತು!

ರಾಜಸ್ಥಾನ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಸೂರ್ಯವಂಶಿ ಅವರನ್ನು 1.10 ಕೋಟಿ ರೂ.ಗೆ ಖರೀದಿಸಿಸಿದಾಗ ಎಲ್ಲರ ಹುಬ್ಬೇರಿತ್ತು. ಆದರೆ, ಸಂಜು ಸ್ಯಾಮ್ಸನ್‌ ಅವರು ಗಾಯಗೊಂಡಾಗ ವೈಭವ್ ಅವರಿಗೆ ಆಡಲು ಅವಕಾಶ ಸಿಕ್ಕಿತು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದು 18 ವರ್ಷಗಳ ಬರವನ್ನು ನೀಗಿಸಿತು. 14 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಕೂಡ ಪದಾರ್ಪಣೆ ಮಾಡಿದರು. ತನ್ನ ಚೊಚ್ಚಲ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಬೃಹತ್ ಸಿಕ್ಸರ್ ಬಾರಿಸುವ ಮೂಲಕ ತನ್ನನ್ನು ತಾನು ಸಾಭೀತುಪಡಿಸಿಕೊಂಡರು. ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಪರ ಆಡಿದ ವೈಭವ್ ಸೂರ್ಯವಂಶಿ ತಮ್ಮ ಪ್ರದರ್ಶನದಿಂದಲೇ ಎಲ್ಲರನ್ನೂ ಬೆರಗುಗೊಳಿಸಿದರು.

ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ 'ಕುಟ್ಟಿ ಸ್ಟೋರೀಸ್' ಸಂಚಿಕೆಯನ್ನು ಸದ್ಯ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಅವರೊಂದಿಗೆ ಆಯೋಜಿಸಿದ್ದರು. ಈ ವೇಳೆ ಆರ್ ಅಶ್ವಿನ್ ಕೂಡ ವೈಭವ್ ಸೂರ್ಯವಂಶಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಸೂರ್ಯವಂಶಿ ಅವರನ್ನು 1.10 ಕೋಟಿ ರೂ.ಗೆ ಖರೀದಿಸಿಸಿದಾಗ ಎಲ್ಲರ ಹುಬ್ಬೇರಿತ್ತು. ಆದರೆ, ಸಂಜು ಸ್ಯಾಮ್ಸನ್‌ ಅವರು ಗಾಯಗೊಂಡಾಗ ವೈಭವ್ ಅವರಿಗೆ ಆಡಲು ಅವಕಾಶ ಸಿಕ್ಕಿತು.

ವೈಭವ್ ಸೂರ್ಯವಂಶಿ ಅವರ ಉತ್ತಮ ಹೊಡೆತಗಳನ್ನು ಕಂಡು ತಾನು ಎಷ್ಟು ಆಘಾತಕ್ಕೊಳಗಾಗಿದ್ದೆ ಎಂಬುದನ್ನು ಹೇಳುವ ಮೂಲಕ ಸಂಜು ಸ್ಯಾಮ್ಸನ್ ಮಾತುಕತೆಯನ್ನು ಪ್ರಾರಂಭಿಸಿದರು. ಶಾರ್ದೂಲ್ ಠಾಕೂರ್ ಅವರ ಮೊದಲ ಎಸೆತದಲ್ಲಿಯೇ ಬೃಹತ್ ಸಿಕ್ಸರ್‌ ಸಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮುಂದಿನ ಓವರ್‌ನಲ್ಲಿ, ಆವೇಶ್ ಖಾನ್ ಅವರ ಎಸೆತದಲ್ಲಿಯೂ ಒಂದು ಸಿಕ್ಸರ್‌ ಬಾರಿಸಿದರು.

'ಅವರು ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದಾಗ, ನಾನು, ‘ಅದು ಅದ್ಭುತವಾಗಿತ್ತು... ಅದು ಅದೃಷ್ಟದ ಸಿಕ್ಸ್’ ಎಂದು ಭಾವಿಸಿದೆ. ಆದರೆ, ನಂತರ ಅವರು ಮತ್ತೆ ಮತ್ತೆ ಹಾಗೆಯೇ ಪ್ರದರ್ಶನ ನೀಡುತ್ತಲೇ ಇದ್ದರು. ವಾಹ್! ಅವರು ಹೊಡೆಯುತ್ತಿದ್ದ ಶಾಟ್‌ಗಳ ಗುಣಮಟ್ಟ ನನ್ನನ್ನು ಆಘಾತಗೊಳಿಸಿತು' ಎಂದು ವೈಭವ್ ಅವರಿದ್ದ ತಂಡದ ನಾಯಕ ಸಂಜು ಸ್ಯಾಮ್ಸನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಹೇಳಿದರು.

ಈಮಧ್ಯೆ, ತಮ್ಮ ಎಸೆತದಲ್ಲಿಯೂ ಸೂರ್ಯವಂಶಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದನ್ನು ಕಂಡು ನಾನು ಬೆರಗಾದೆ ಎಂದು ಅಶ್ವಿನ್ ತಿಳಿಸಿದರು.

ಸಿಎಸ್‌ಕೆ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ, ಸೂರ್ಯವಂಶಿ 33 ಎಸೆತಗಳಲ್ಲಿ 57 ರನ್ ಗಳಿಸಿ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರಲ್ಲಿ ನಾಲ್ಕು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

'ನಾನು ನಿಮಗೆ ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ. ದೆಹಲಿಯಲ್ಲಿ ರಾಜಸ್ಥಾನ vs ಚೆನ್ನೈ ಪಂದ್ಯದ ನಂತರ, ನಾನು ಪಣೀಶ್ ಶೆಟ್ಟಿ(ಆರ್‌ಆರ್ ಪ್ರಮುಖ ವಿಶ್ಲೇಷಕ) ಜೊತೆ ಮಾತನಾಡುತ್ತಿದ್ದೆ. ನೀವು ಕೂಡ ನಮ್ಮೊಂದಿಗೆ ಸೇರಿಕೊಂಡಿರಿ ಮತ್ತು ಹೊರಟುಹೋದಿರಿ. ಅದು ಅವರ (ವೈಭವ್) ಹೊಡೆತದ ಬಗ್ಗೆ ಮಾತ್ರವಲ್ಲ' ಎಂದು ಅಶ್ವಿನ್ ಉತ್ತರಿಸಿದರು.

'ನಾನು ಅವರಿಗೆ ಸ್ಟಂಪ್‌ಗಳ ಸುತ್ತ ಬೌಲಿಂಗ್ ಮಾಡಿದೆ ಮತ್ತು ಅವರು ಅದನ್ನು ಕವರ್‌ಗಳ ಮೂಲಕ ಹೊಡೆದರು. ಮುಂದಿನ ಎಸೆತದಲ್ಲಿ, ನಾನು ನಿಧಾನವಾಗಿ ಬೌಲಿಂಗ್ ಮಾಡಿದೆ. ನೀವು (ಸ್ಯಾಮ್ಸನ್) ಬಹಳ ಸಮಯದಿಂದ ನನಗಾಗಿ ವಿಕೆಟ್ ಕೀಪಿಂಗ್ ಮಾಡಿದ್ದೀರಿ ಮತ್ತು ಬ್ಯಾಟರ್ ಅನ್ನು ಪರೀಕ್ಷಿಸಲು ಮತ್ತು ಅವರು ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸುತ್ತಾರೆಯೇ ಎಂದು ನೋಡಲು ನಾನು ಉದ್ದೇಶಪೂರ್ವಕವಾಗಿ ಒಂದು ನಿರ್ದಿಷ್ಟ ರೀತಿಯಲ್ಲಿ ಬೌಲಿಂಗ್ ಮಾಡುತ್ತೇನೆ ಎಂದು ನಿಮಗೆ ತಿಳಿದಿದೆ ಎಂದು ಅಶ್ವಿನ್ ಹೇಳಿದರು.

'ನಾನು ಸ್ವಲ್ಪ ವೈಡ್ ಬಾಲ್ ಎಸೆದೆ ಮತ್ತು ಅವರು (ವೈಭವ್) ಕಾಯುತ್ತಾ ಒಂದು ಸಾಲಿಡ್ ಶಾಟ್ ಅನ್ನು ಹೊಡೆದರು ಮತ್ತು ಚೆಂಡು ಮಿಡ್-ಆನ್ ಮೂಲಕ ಸಿಂಗಲ್‌ಗೆ ಹೋಯಿತು. ಆಗ ನಾನು 'ಎಂತಾ ಮನುಷ್ಯ... ಈ ವ್ಯಕ್ತಿ ಎಲ್ಲಿಂದ ಬಂದಿದ್ದಾನೆ? ಯೋಚಿಸುತ್ತಿದ್ದೆ. ಅವನಿಗೆ (ವೈಭವ್) 14 ವರ್ಷ ವಯಸ್ಸು ಮತ್ತು ನಾನು 18 ವರ್ಷಗಳ ಹಿಂದೆ ಐಪಿಎಲ್‌ಗೆ ಪದಾರ್ಪಣೆ ಮಾಡಿದೆ. ಜೋಸ್ ಬಟ್ಲರ್ ಕೂಡ ಜೋಫ್ರಾ ಆರ್ಚರ್ ಜೊತೆ ವೈಭವ್ ಬಗ್ಗೆ ಮಾತನಾಡುವುದನ್ನು ನಾನು ನೋಡಿದೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT