ವಿರಾಟ್ ಕೊಹ್ಲಿ 
ಕ್ರಿಕೆಟ್

ಪೂಮಾದಿಂದ 300 ಕೋಟಿ ರೂ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ ಹೂಡಿಕೆ!

ಎಂಟು ವರ್ಷಗಳ ಕಾಲ ಅಥ್ಲೆಟಿಕ್ ಉಡುಪುಗಳ ಬ್ರ್ಯಾಂಡ್ ಪೂಮಾದ ರಾಯಭಾರಿಯಾಗಿದ್ದ ಕೊಹ್ಲಿ ಇದೀಗ, ಕ್ರೀಡಾ ಉಡುಪುಗಳ ಬ್ರ್ಯಾಂಡ್ ಅಗಿಲಿಟಾಸ್ ಸ್ಪೋರ್ಟ್ಸ್‌ನೊಂದಿಗೆ( Agilitas Sports) ಪಾಲುದಾರಿಕೆಯನ್ನು ಘೋಷಿಸಿದ್ದಾರೆ.

ಕ್ರಿಕೆಟ್ ನಲ್ಲಿ ಮತ್ತೆ ಫಾರ್ಮ್ ಗೆ ಮರಳಿರುವ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ, ಕ್ರೀಡಾ ವ್ಯವಹಾರದ ಜಗತ್ತಿನಲ್ಲಿ ಹೊಸ ಉದ್ಯಮ ಪ್ರಾರಂಭಿಸಲು ಸಜ್ಜಾಗಿದ್ದಾರೆ.

ಎಂಟು ವರ್ಷಗಳ ಕಾಲ ಅಥ್ಲೆಟಿಕ್ ಉಡುಪುಗಳ ಬ್ರ್ಯಾಂಡ್ ಪೂಮಾದ ರಾಯಭಾರಿಯಾಗಿದ್ದ ಕೊಹ್ಲಿ ಇದೀಗ, ಕ್ರೀಡಾ ಉಡುಪುಗಳ ಬ್ರ್ಯಾಂಡ್ ಅಗಿಲಿಟಾಸ್ ಸ್ಪೋರ್ಟ್ಸ್‌ನೊಂದಿಗೆ( Agilitas Sports) ಪಾಲುದಾರಿಕೆಯನ್ನು ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ತನ್ನದೇ ಆದ 'one8' ಸ್ಪೋರ್ಟ್ಸ್ ಬ್ರ್ಯಾಂಡ್' ಅಗಿಲಿಟಾಸ್‌ನೊಂದಿಗೆ ಕೈಜೋಡಿಸಿದೆ ಎಂದು ಖಚಿತಪಡಿಸಿದ್ದಾರೆ. ಪೂಮಾ ಅವರೊಂದಿಗಿನ ತನ್ನ ಎಂಟು ವರ್ಷಗಳ ಒಪ್ಪಂದದ ಮುಕ್ತಾಯದ ನಂತರ ಕೊಹ್ಲಿ 300 ಕೋಟಿ ರೂ. ಆಫರ್ ಕೈಬಿಟ್ಟಿದ್ದು, ಅಜಿಲಿಟಾಸ್ (Agilitas Sports) ಜೊತೆಗಿನ one8 ಪಾಲುದಾರಿಕೆಯಲ್ಲಿ ಸ್ವತಃ 40 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

"ಇಂದು ನನ್ನ ಹೃದಯದಿಂದ ನೇರವಾಗಿ ಎಕ್ಸೈಟಿಂಗ್ ನೀಡುವ ಹೊಸ ಅಧ್ಯಯನದ ದಿನವಾಗಿದೆ. ಉದ್ದೇಶ ಮತ್ತು ಮಹತ್ವಾಕಾಂಕ್ಷೆಯಿಂದ one 8 ಮತ್ತು Agilitas ನ ಹೊಸ ಪ್ರಯಾಣ ಪ್ರಾರಂಭವಾಗುತ್ತದೆ. ಒನ್ 8 ಅನ್ನು ಅಗಿಲಿಟಾಸ್‌ಗೆ ಕಂಪನಿ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪೂಮಾ ಇಂಡಿಯಾದ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಅಭಿಷೇಕ್ ಗಂಗೂಲಿ ಸಹ-ಸಂಸ್ಥಾಪಕರಾಗಿರುವ ಅಜಿಲಿಟಾಸ್ ಸ್ಪೋರ್ಟ್ಸ್ ಕ್ರೀಡಾ ಉಡುಪುಗಳ ಸ್ಟಾರ್ಟಪ್ ಆಗಿದೆ.

ಆಫರ್ ಬಂದಾಗ ಅದರ ಹಿಂದಿನ ಶಕ್ತಿ, ಉತ್ಪಾದನಾ ಸಾಮರ್ಥ್ಯಗಳ ಬಗ್ಗೆ ಗಂಗೂಲಿ ತಿಳಿಸಿದ್ದರು. ಅವರಲ್ಲಿರುವ ಪರಿಣತಿ ಮತ್ತು ಅಂತಹವರು ನನಗೆ ಅರ್ಥಮಾಡಿಸಿದಾಗ ಇದು ಏನಾದರೂ ದೊಡ್ಡದಾಗಬಹುದು ಎಂದು ಭಾವಿಸಿದೆ ಮತ್ತು ಸಹಜವಾಗಿ ನಾನು ಅದರ ಭಾಗವಾಗಲು ಬಯಸುತ್ತೇನೆ ಎಂದು ಕೊಹ್ಲಿ ತಮ್ಮ ನಿರ್ಧಾರವನ್ನು ವಿವರಿಸಿದ್ದಾರೆ.

ಈ ಮಧ್ಯೆ ಕೊಹ್ಲಿ ಅಗಿಲಿಟಾಸ್‌ನ ಷೇರುದಾರರಾಗುತ್ತಾರೆ ಎಂದು ಗಂಗೂಲಿ ಖಚಿತಪಡಿಸಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಕ್ರಿಕೆಟ್ ನಲ್ಲಿ ಮತ್ತೆ ಫಾರ್ಮ್ ಗೆ ಮರಳಿರುವ 37 ವರ್ಷದ ಕೊಹ್ಲಿ, ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಎರಡು ಶತಕ ಸೇರಿದಂತೆ 302 ರನ್‌ಗಳನ್ನು ಸಿಡಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

IPL 2026: RCB vs GT ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ, ರಿಸರ್ವ್ ಡೇ ಕೂಡ ಇಲ್ಲ.. ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: Quad ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು Quad ಮಹತ್ವದ ತೀರ್ಮಾನ; ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

SCROLL FOR NEXT