ಶುಭ್ ಮನ್ ಗಿಲ್-ಅಬ್ರಾರ್ ಅಹ್ಮದ್ 
ಕ್ರಿಕೆಟ್

ICC Champions Trophy 2025: ''ಪ್ರಿನ್ಸ್ ನ ಕೆಣಕಿ, ಕಿಂಗ್ ಇರೋದನ್ನೇ ಮರೆತ''..; ಪಾಕ್ ಸ್ಪಿನ್ನರ್ Abrar Ahmedಗೆ ಅಭಿಮಾನಿಗಳ ಟ್ರೋಲ್!

ನಿನ್ನೆ ಪಾಕಿಸ್ತಾನ ನೀಡಿದ್ದ 242 ರನ್​ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಬ್ಯಾಟರ್ ಗಳು ಪಾಕಿಸ್ತಾನ್ ತಂಡದ ಎಲ್ಲಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ್ದರು.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಮಣಿಸಿದ್ದು, ಆ ಮೂಲಕ ಟೂರ್ನಿಯಿಂದಲೇ ಪಾಕಿಸ್ತಾನ ತಂಡವನ್ನು ಬಹುತೇಕ ಹೊರದಬ್ಬಿದೆ.

ಇನ್ನು ನಿನ್ನೆ ಪಾಕಿಸ್ತಾನ ನೀಡಿದ್ದ 242 ರನ್​ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಬ್ಯಾಟರ್_ಗಳು ಪಾಕಿಸ್ತಾನ್ ತಂಡದ ಎಲ್ಲಾ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ್ದರು. ಆದರೆ ಯುವ ಸ್ಪಿನ್ನರ್ ಅಬ್ರಾರ್ ಅಹ್ಮದ್ ಮಾತ್ರ ಭಾರತೀಯ ಬ್ಯಾಟರ್​ಗಳನ್ನು ಕಾಡಿದ್ದರು.

ಶುಭ್​ಮನ್ ಗಿಲ್ ಅವರನ್ನು ಮಿಸ್ಟರಿ ಸ್ಪಿನ್ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದರು. ಅಂತಿಮವಾಗಿ ಅಬ್ರಾರ್ ಅಹ್ಮದ್ 10 ಓವರ್​ಗಳಲ್ಲಿ ಕೇವಲ 28 ರನ್ ನೀಡಿ 1 ವಿಕೆಟ್ ಕಬಳಿಸಿದರು.

ಗಿಲ್ ಗೆ ವಿವಾದಾತ್ಮಕ ಸೆಂಡ್ ಆಫ್

ಇನ್ನು ಶುಭ್ ಮನ್ ಗಿಲ್ ಔಟಾಗುತ್ತಿದ್ದಂತೆಯೇ ಅಬ್ರಾರ್ ವಿವಾದಾತ್ಮಕ ಸೆಂಡ್ ಆಫ್ ನೀಡಿದ್ದರು. ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ, ಪೆವಿಲಿಯನ್​ಗೆ ನಡಿ ಎಂದು ಕಣ್​ ಸನ್ನೆ ಮಾಡಿದ್ದರು. ಇಂತಹದೊಂದು ಬೀಳ್ಕೊಡುಗೆಯನ್ನು ನಿರೀಕ್ಷಿಸದಿದ್ದ ಗಿಲ್ ಗುರಾಯಿಸುತ್ತಲೇ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು.

ಪ್ರಿನ್ಸ್ ನ ಕೆಣಕಿ, ಕಿಂಗ್ ಇರೋದನ್ನೇ ಮರೆತ

ಇನ್ನು ಅಬ್ರಾರ್ ರ ಈ ವರ್ತನೆಗೆ ಕೇವಲ ಭಾರತೀಯ ಅಭಿಮಾನಿಗಳು ಮಾತ್ರವಲ್ಲ.. ಪಾಕಿಸ್ತಾನದ ಅಭಿಮಾನಿಗಳೂ ಕೂಡ ಕೆಂಡಕಾರುತ್ತಿದ್ದಾರೆ. ಪ್ರಿನ್ಸ್ ನ ಕೆಣಕಿ ಕ್ರೀಸ್ ನಲ್ಲಿ ಕಿಂಗ್ ಇರೋದನ್ನೇ ಮರೆತ.. ಈತನಿಂದಲೇ ಫಾರ್ಮ್ ನಲ್ಲೇ ಇಲ್ಲದ ಕೊಹ್ಲಿ ರೊಚ್ಚಿಗೆದ್ದು ಶತಕ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದರು ಎನ್ನುವ ಅರ್ಥದಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಪಂದ್ಯದಲ್ಲಿ ಅಜೇಯ 101 ರನ್ ಗಳಿಸಿದ ಕೊಹ್ಲಿ ಇನ್ನೂ 7 ಓವರ್ ಬಾಕಿ ಇರುವಂತೆಯೇ ಭಾರತಕ್ಕೆ ಜಯ ತಂದಿತ್ತರು.

ಗಿಲ್ ಔಟ್ ಆದಾಗ ಅಭಿಮಾನಿಗಳು ಪಾಕ್ ಸ್ಪಿನ್ನರ್ ನನ್ನು ಕೇವಲ ಪೋಸ್ಟ್‌ಗಳ ಮೂಲಕ ಟ್ರೋಲ್ ಮಾಡುವುದಲ್ಲದೆ, ಮೀಮ್‌ಗಳನ್ನು ಸಹ ಬಿಡುಗಡೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT