ಕೆಎಲ್ ರಾಹುಲ್ 
ಕ್ರಿಕೆಟ್

ಲಾರ್ಡ್ಸ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ರನೌಟ್; ನನಗೆ ಸ್ಟ್ರೈಕ್ ನೀಡಲು ಹೋಗಿ ಎಡವಟ್ಟಾಯ್ತು: ಕೆಎಲ್ ರಾಹುಲ್

ಲೀಡ್ಸ್‌ನಲ್ಲಿ ಶತಕ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಅರ್ಧಶತಕದ ನಂತರ ಲಾರ್ಡ್ಸ್‌ನಲ್ಲಿ ರಾಹುಲ್ ಗಳಿಸಿದ ಶತಕವು ಇಂಗ್ಲೆಂಡ್‌ನಲ್ಲಿ ಅವರ ನಾಲ್ಕನೇ ಟೆಸ್ಟ್ ಶತಕವಾಗಿದೆ.

ಲಾರ್ಡ್ಸ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್‌ನ 3ನೇ ದಿನದಂದು ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಮೋಡಿ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸುವಂತಿತ್ತು. ಆದರೆ, ಪಂತ್ 74 ರನ್ ಗಳಿಸಿ ರನೌಟ್ ಆದರೆ, ಇತ್ತ ರಾಹುಲ್ ಶತಕ ಗಳಿಸಿ ನಿರ್ಗಮಿಸಿದರು. ದಿನದ ಆಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಪಂತ್ ಅವರ ಔಟ್ ಬಗ್ಗೆ ಮಾತನಾಡಿದರು.

ಊಟಕ್ಕೆ ಮುಂಚಿನ ಕೊನೆಯ ಓವರ್‌ನಲ್ಲಿ ಪಂತ್ 74 ರನ್ ಗಳಿಸಿ ರನೌಟ್ ಆದರು. ತಮ್ಮ 10ನೇ ಟೆಸ್ಟ್ ಶತಕ ಗಳಿಸದ ಕೆಎಲ್ ರಾಹುಲ್, ಈ ಐತಿಹಾಸಿಕ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಪಾತ್ರರಾದರು. ಬಳಿಕ ರಾಹುಲ್ ಕೂಡ ತಮ್ಮ ವಿಕೆಟ್ ಕಳೆದುಕೊಂಡರು. ಆಗ ಭಾರತ 5 ವಿಕೆಟ್‌ ನಷ್ಟಕ್ಕೆ 254 ರನ್‌ ಗಳಿಸಿತ್ತು.

'ಅದಕ್ಕೂ ಮುನ್ನ ನಮ್ಮ ನಡುವೆ ಮಾತುಕತೆ ನಡೆಯಿತು. ಸಾಧ್ಯವಾದರೆ ಊಟದ ವಿರಾಮಕ್ಕೂ ಮುನ್ನವೇ ನಾನು ಶತಕ ಗಳಿಸುತ್ತೇನೆ ಎಂದು ಅವರಿಗೆ ಹೇಳಿದೆ. ಊಟಕ್ಕೂ ಮುನ್ನ ಬಶೀರ್ ಅವರು ಕೊನೆಯ ಓವರ್ ಎಸೆದಾಗ, ನಾನು ಅದನ್ನು ಗಳಿಸಲು ಉತ್ತಮ ಅವಕಾಶವಿದೆ ಎಂದು ನಾನು ಭಾವಿಸಿದೆ. ಆದರೆ, ದುರದೃಷ್ಟವಶಾತ್, ನಾನು ನೇರವಾಗಿ ಫೀಲ್ಡರ್‌ಗೆ ಹೊಡೆದೆ. ಅದು ನಾನು ಬೌಂಡರಿಗೆ ಹೊಡೆಯಬಹುದಾದ ಚೆಂಡಾಗಿತ್ತು' ಎಂದು ರಾಹುಲ್ ದಿನದಾಟದ ಅಂತ್ಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ನಂತರ ಅವರು ಸ್ಟ್ರೈಕ್ ಅನ್ನು ತಿರುಗಿಸಲು ಮತ್ತು ನನ್ನನ್ನು ಮತ್ತೆ ಸ್ಟ್ರೈಕ್‌ಗೆ ತರಬಹುದೇ ಎಂದು ನೋಡಲು ಅವರು ಬಯಸಿದರುು. ಆದರೆ, ರನೌಟ್ ಆದರು. ಆ ಹಂತದಲ್ಲಿ ರನ್-ಔಟ್ ನಿಜವಾಗಿಯೂ ಮೊಮೆಂಟಮ್ ಅನ್ನು ಬದಲಾಯಿಸಿತು. ಅದು ನಮ್ಮಿಬ್ಬರಿಗೂ ನಿರಾಶಾದಾಯಕವಾಗಿತ್ತು. ಸ್ಪಷ್ಟವಾಗಿ, ಯಾರೂ ತಮ್ಮ ವಿಕೆಟ್ ಅನ್ನು ಹಾಗೆ ಎಸೆಯಲು ಬಯಸುವುದಿಲ್ಲ' ಎಂದು ಅವರು ಹೇಳಿದರು.

ಲೀಡ್ಸ್‌ನಲ್ಲಿ ಶತಕ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಅರ್ಧಶತಕದ ನಂತರ ಲಾರ್ಡ್ಸ್‌ನಲ್ಲಿ ರಾಹುಲ್ ಗಳಿಸಿದ ಶತಕವು ಇಂಗ್ಲೆಂಡ್‌ನಲ್ಲಿ ಅವರ ನಾಲ್ಕನೇ ಟೆಸ್ಟ್ ಶತಕವಾಗಿದೆ.

ಮೂರು ದಿನಗಳ ಆಕರ್ಷಕ ಆಟದ ನಂತರ, ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಸ್ಕೋರ್‌ಗಳು ಸಮಬಲಗೊಂಡವು, ಶನಿವಾರ ಇಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು 119.2 ಓವರ್‌ಗಳಲ್ಲಿ 387 ರನ್‌ಗಳಿಗೆ ಆಲೌಟ್ ಮಾಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel-Iran war: Dohaದಲ್ಲಿ ಸಿಲುಕಿದ Indian basketball team, ತಂಡದಲ್ಲಿದ್ದಾರೆ ಮೂವರು ಕನ್ನಡಿಗರು..!

'ನಾನೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತು, ಖಂಡಿತಾ ನಮ್ಮಿಬ್ಬರದ್ದು ಹಾಲು-ಜೇನಿನ ಸಂಬಂಧ': D K ಶಿವಕುಮಾರ್

ವಾಯುಮಾರ್ಗ ಬಂದ್ ಎಫೆಕ್ಟ್: ದುಬೈಗೆ ಹೊರಟ Emirates ವಿಮಾನ KIAಗೆ ವಾಪಸ್

SCROLL FOR NEXT