ಜಸ್ ಪ್ರೀತ್ ಬುಮ್ರಾ 
ಕ್ರಿಕೆಟ್

'ಗಾಯದ ಅಪಾಯ.. ನಿರ್ದಿಷ್ಟ ಪ್ರಮಾಣದ ಹೊರೆ ಕಾಯ್ದುಕೊಳ್ಳಬೇಕು': Jasprit Bumrah ಬಗ್ಗೆ ಕೋಚ್ Gautam Gambhir, BCCI ಕಠಿಣ ನಿರ್ಧಾರ!

ಇದೀಗ ಗಾಯದ ಮೇಲೆ ಬರೆ ಎಳೆದಂತೆ ತಂಡದ ಅನುಭವಿ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಇಡೀ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಆಯ್ದ ಕೆಲವೇ ಟೆಸ್ಟ್ ಪಂದ್ಯಗಳಿಗೆ ಮಾತ್ರ ಲಭ್ಯರಿದ್ದಾರೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಸಕಲ ಸಿದ್ಧತೆ ನಡೆಸಿರುವಂತೆಯೇ ತಂಡದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಕುರಿತು ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಹೌದು.. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ಆರ್ ಅಶ್ವಿನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರರು ನಿವೃತ್ತಿ ಘೋಷಿಸಿರುವುದರಿಂದ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಎದ್ದು ಕಾಣುತ್ತಿದೆ. ಇನ್ನು ಇದೀಗ ಗಾಯದ ಮೇಲೆ ಬರೆ ಎಳೆದಂತೆ ತಂಡದ ಅನುಭವಿ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಇಡೀ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಆಯ್ದ ಕೆಲವೇ ಟೆಸ್ಟ್ ಪಂದ್ಯಗಳಿಗೆ ಮಾತ್ರ ಲಭ್ಯರಿದ್ದಾರೆ.

ಈ ಬಗ್ಗೆ ಸ್ವತಃ ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಸರಣಿಯ ಎಲ್ಲಾ ಐದು ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಸಮಯದಲ್ಲಿ ಬೆನ್ನುನೋವಿಗೆ ತುತ್ತಾಗಿದ್ದ ಬುಮ್ರಾ ಬಳಿಕ ಅವರ ಕೆಲಸದ ಹೊರೆ ನಿರ್ವಹಣೆ ದೊಡ್ಡ ವಿಷಯವಾಗಿದೆ. ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮಾಜಿ ಮುಖ್ಯ ಭೌತಚಿಕಿತ್ಸಕ ಆಶಿಶ್ ಕೌಶಿಕ್ ಅವರು ಬಿಸಿಸಿಐ ಮತ್ತು ತಂಡದ ನಿರ್ವಹಣೆಗೆ ಸ್ವಲ್ಪ ವಿಭಿನ್ನವಾದ ಸಲಹೆ ನೀಡಿದ್ದರು.

ಬೌಲಿಂಗ್ ವಿಭಾಗ ನಿರ್ವಹಣೆಗೆ ಕ್ರಮ

ಇನ್ನು ತಂಡದ ಬೌಲಿಂಗ್ ವಿಭಾಗದ ಕುರಿತು ಮಾತನಾಡಿದ ತಂಡದ ಫಿಸಿಯೋ ಆಶಿಶ್ ಕೌಶಿಕ್, 'ಬೌಲಿಂಗ್‌ನ ಹೊರೆಯನ್ನು ತೆಗೆದುಕೊಳ್ಳಲು ಬೌಲರ್ ಗಳನ್ನು ಬಲಪಡಿಸುವುದು ನಿರ್ಣಾಯಕವಾಗಿದೆ. ಅವರು ತರಬೇತಿ ಪಡೆಯಬೇಕು. ಪಿಚ್ ಮೇಲೆ ಸಾಕಷ್ಟು ಸಮಯವನ್ನು ಕಳೆಯಬೇಕು ಮತ್ತು ಕಂಡೀಷನಿಂಗ್ ಕಾರ್ಯಕ್ರಮಗಳ ರೂಪದಲ್ಲಿ ಸಾಕಷ್ಟು ಓಡಬೇಕು. ಅದೇ ರೀತಿಯಲ್ಲಿ ಪ್ರದರ್ಶನ ನೀಡಬಹುದು ಎಂದು ಖಚಿತಪಡಿಸಿಕೊಳ್ಳಬೇಕು ಎಂದರು.

ಅಂತೆಯೇ ಪ್ರತಿಯೊಬ್ಬ ಆಟಗಾರನಿಗೂ ತೀವ್ರವಾದ ಮತ್ತು ದೀರ್ಘಕಾಲದ ಕೆಲಸದ ಹೊರೆ ಅನುಪಾತವಿರುತ್ತದೆ. ಗಾಯಗಳ ಅಪಾಯವನ್ನು ಕಡಿಮೆ ಮಾಡಲು ಒಂದು ನಿರ್ದಿಷ್ಟ ಪ್ರಮಾಣದ ಕೆಲಸದ ಹೊರೆಯನ್ನು ಕಾಯ್ದುಕೊಳ್ಳಬೇಕು ಮತ್ತು ಆ ಕೆಲಸದ ಹೊರೆಗಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಅಪಾಯ ಉಂಟಾಗಬಹುದು ಎಂದು ಸಂಶೋಧನೆ ಸೂಚಿಸುತ್ತದೆ.

ಬುಮ್ರಾ ವಿಚಾರದಲ್ಲೂ ಆಗುತ್ತಿರುವುದೂ ಇದೇ.. ನೀವು ಎಷ್ಟು ಹೆಚ್ಚು ಬೌಲ್ ಮಾಡಬಹುದೋ, ಅಷ್ಟೇ ಕಡಿಮೆ ಬೌಲ್ ಮಾಡಬಹುದು. ಕೆಲಸದ ಹೊರೆ ಬೌಲಿಂಗ್‌ಗೆ ಮಾತ್ರವಲ್ಲ, ತರಬೇತಿಗೂ ಸಹ ಅನ್ವಯಿಸುತ್ತದೆ. ಇದನ್ನು ಎಲ್ಲಾ ಶ್ರಮದಾಯಕ ಚಟುವಟಿಕೆಗಳಿಂದ ಅಳೆಯಬೇಕು. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ಬಲವರ್ಧನೆ ಮತ್ತು ಕಂಡೀಷನಿಂಗ್ ಕೆಲಸ. ಅದು ಅವರು ನೀಡಬಹುದಾದ ಸ್ಥಳದಿಂದ ಹೆಚ್ಚಾಗಬಾರದು ಅಥವಾ ಕಡಿಮೆಯೂ ಆಗಬಾರದು" ಎಂದು ಕೌಶಿಕ್ ಹೇಳಿದರು.

ತಂಡಕ್ಕೆ ಅರ್ಶ್ ದೀಪ್ ಸಿಂಗ್ ತಂಡ ಸೇರ್ಪಡೆ ಸಾಧ್ಯತೆ

ಏತನ್ಮಧ್ಯೆ, ಭಾರತದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ಜೂನ್ 20 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ತಮ್ಮ ಕೆಂಪು-ಚೆಂಡಿನ ಲಯವನ್ನು ಮರುಶೋಧಿಸಲು ಎದುರು ನೋಡುತ್ತಿರುವುದರಿಂದ, ಅವರು ಈ ಹಿಂದೆ ಕೌಂಟಿ ಕ್ರಿಕೆಟ್ ಆಡಿ ಫಾರ್ಮ್ ಗೆ ಮರಳಿರುವುದು ತಂಡಕ್ಕೆ ಸಕಾರಾತ್ಮಕವಾಗಿ ಪರಿಣಮಿಸಿದೆ.

26 ವರ್ಷದ ಅರ್ಶ್ ದೀಪ್ ಸಿಂಗ್ ಭಾರತ ತಂಡದಲ್ಲಿ ಸ್ಥಾನ ಪಡೆದ ನಂತರ ತಮ್ಮ ಚೊಚ್ಚಲ ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿದ್ದಾರೆ. ಭಾರತ ತಂಡ ಜೂನ್ 13 ರಿಂದ ಬೆಕೆನ್‌ಹ್ಯಾಮ್‌ನ ಕೆಂಟ್ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಭಾರತ ಎ ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನಾಡುತ್ತಿದೆ.

ಈಗಾಗಲೇ ಸೀಮಿತ ಓವರ್ ಗಳ ಮಾದರಿಯ ಕ್ರಿಕೆಟ್ ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿರುವ ಅರ್ಶ್ ದೀಪ್ ಎರಡು ವರ್ಷಗಳ ಹಿಂದೆ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಕೆಂಟ್ ತಂಡವನ್ನು ಪ್ರತಿನಿಧಿಸಿದ್ದರು, ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ಪರ ಆಡಿದ್ದ ಅರ್ಶ್ ದೀಪ್ ಸಿಂಗ್ ಗಮನಾರ್ಹ ವ್ರದರ್ಶನ ನೀಡಿದ್ದರು. ಅವರ ತಂಡ ಕೂ ಟೂರ್ನಿಯಲ್ಲಿ ರನ್ನರ್ ಅಪ್ ಕೂಡ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕರ್ನಾಟಕದ ಗ್ಯಾರಂಟಿ ಮಾದರಿ' ಗುರುತಿಸಿ, ಹೆಚ್ಚಿನ ಆರ್ಥಿಕ ಬೆಂಬಲ ನೀಡಿ: ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ

ಚುನಾವಣಾ ಆಯೋಗ ಕೇಂದ್ರದ ಜತೆ ಸೇರಿ ಪ್ರಜಾಪ್ರಭುತ್ವದ 'ಕತ್ತು ಹಿಸುಕುತ್ತಿದೆ': ಸಿದ್ದರಾಮಯ್ಯ

'ಕೊಟ್ಟ ಮಾತು ಉಳಿಸಿಕೊಳ್ಳಿ': ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಗೆ ಜೆಮಿಮಾ ಆಗ್ರಹ! Video

SIR ವಿರುದ್ಧ ಕಾನೂನು ಹೋರಾಟಕ್ಕೆ ಕೇರಳ ಸರ್ಕಾರ ನಿರ್ಧಾರ; ಪ್ರತಿಪಕ್ಷಗಳಿಂದಲೂ ಬೆಂಬಲ

ಹರಿಯಾಣದಲ್ಲೂ ಮತಗಳ್ಳತನ: ರಾಹುಲ್ ಹೇಳಿಕೆ ಆಧಾರರಹಿತ ಎಂದ ಚುನಾವಣಾ ಆಯೋಗ

SCROLL FOR NEXT