ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ 
ಕ್ರಿಕೆಟ್

England Test Series: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿಯಿಂದ ಇಂಗ್ಲೆಂಡ್ ತಂಡಕ್ಕೆ ಪ್ರಯೋಜನ!

ಭಾರತ ತಂಡವು ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಅನುಭವವನ್ನು ಹೊಂದಿದ್ದು, ಜಸ್ಪ್ರೀತ್ ಬುಮ್ರಾ ಅವರ ಪ್ರತಿಭೆ ಮತ್ತು ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಅವರಂತಹ ಯುವ ಆಟಗಾರರನ್ನು ಹೊಂದಿದೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಇದೀಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಮುಂಬರುವ ಟೆಸ್ಟ್ ಸರಣಿಗೆ ಶುಭಮನ್ ಗಿಲ್ ಹೊಸ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಜೂನ್ 20ರಂದು ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಪ್ರಾರಂಭವಾಗಲಿದ್ದು, 2011 ರಲ್ಲಿಯೂ ಜೂನ್ 20ರಂದೇ ವಿರಾಟ್ ಕೊಹ್ಲಿ ಕೂಡ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯಿಂದ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡಕ್ಕೆ ಪ್ರಮುಖ ಮಾನಸಿಕ ಪ್ರಯೋಜನ ದೊರೆಯಲಿದೆ ಎಂದು ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.

ಅದೇ ವೇಳೆ, ಈ ದಿಗ್ಗಜ ಜೋಡಿಯ ಅನುಪಸ್ಥಿತಿಯು ಭಾರತೀಯ ತಂಡವನ್ನು ಹುರಿದುಂಬಿಸಬಹುದು ಮತ್ತು ಹೆಚ್ಚಿದ ತೀವ್ರತೆ ಮತ್ತು ಒಗ್ಗಟ್ಟಿನಿಂದ ಆಡಲು ಪ್ರೇರೇಪಿಸಬಹುದು ಎಂದು ಹಾರ್ಮಿಸನ್ ಭಾವಿಸುತ್ತಾರೆ.

'ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದಿರುವುದು (ಇಂಗ್ಲೆಂಡ್‌ಗೆ) ಮಾನಸಿಕವಾಗಿ ಉತ್ತೇಜನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇಬ್ಬರು ಶ್ರೇಷ್ಠ ಆಟಗಾರರು ಬಹುಶಃ ಐದರಿಂದ ಹತ್ತು ವರ್ಷಗಳ ಹಿಂದೆ ಇದ್ದಷ್ಟು ಶ್ರೇಷ್ಠ ಆಟಗಾರರಲ್ಲದಿದ್ದರೂ, ವಿರಾಟ್ ಮತ್ತು ರೋಹಿತ್ ತಂಡದ ಪಟ್ಟಿಯಲ್ಲಿರುವುದನ್ನು ನೋಡುವುದು ಇನ್ನೂ ಹೆಚ್ಚಿನ ತೂಕವನ್ನು ಹೊಂದಿದೆ. ಆದ್ದರಿಂದ ಆಡುವ ಹನ್ನೊಂದರಲ್ಲಿ ಆ ಇಬ್ಬರು ಶ್ರೇಷ್ಠ ಆಟಗಾರರಿಲ್ಲದಿರುವುದು, ಅದು ಕೆಲವೊಮ್ಮೆ ತಂಡವನ್ನು ಹುರಿದುಂಬಿಸುತ್ತದೆ' ಎಂದು ಹೇಳಿದರು.

'ರೋಹಿತ್ ಅಥವಾ ವಿರಾಟ್‌ರಂತಹ ದೊಡ್ಡ ಆಟಗಾರರು ತಂಡವನ್ನು ತೊರೆದಾಗ, ಅದು ವಾಸ್ತವವಾಗಿ ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಹಗುರಗೊಳಿಸುತ್ತದೆ. ಆದರೆ, ನಿಮಗೆ ಯಾರೋ ಇದ್ದಾರೆ. ಅವರು ಹೋಗಿ ಹೆಚ್ಚಿನ ರನ್ ಗಳಿಸುತ್ತಾರೆ ಎಂದು ಕಾಯಲು ಸಾಧ್ಯವಿಲ್ಲ. ಬದಲಿಗೆ, ಇತರ ಆಟಗಾರರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಪ್ರದರ್ಶನ ನೀಡಬೇಕಾಗುತ್ತದೆ. ಈ ದೃಷ್ಟಿಯಿಂದ ಭಾರತ ತಂಡಕ್ಕೆ ಅದು ಸವಾಲಾಗಿರುತ್ತದೆ' ಎಂದರು.

'ಇಂಗ್ಲೆಂಡ್ ದೃಷ್ಟಿಕೋನದಿಂದ, ಶ್ರೇಷ್ಠ ಆಟಗಾರರು ಇಲ್ಲದಿರುವುದು ತಂಡಕ್ಕೆ ಉತ್ತೇಜನ ನೀಡುತ್ತದೆ. ಇದು ಭಾರತದ ವಿರುದ್ಧ ಆಡಲು ನೆರವಾಗುತ್ತದೆ. ನಾನು ನಿಕಟ ಸರಣಿಯನ್ನು ನಿರೀಕ್ಷಿಸುತ್ತಿದ್ದೇನೆ. ಆದರೆ, ಈ ಸರಣಿ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವುದರಿಂದ ಇಂಗ್ಲೆಂಡ್ ನೆಚ್ಚಿನ ತಂಡ ಎಂದು ನಾನು ಭಾವಿಸುತ್ತೇನೆ' ಎಂದು ಟಾಕ್‌ಸ್ಪೋರ್ಟ್ ಆಯೋಜಿಸಿದ್ದ IANS ಜೊತೆಗಿನ ವಿಶೇಷ ಸಂವಾದದಲ್ಲಿ ಹಾರ್ಮಿಸನ್ ಹೇಳಿದರು.

ಭಾರತ ತಂಡವು ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಅನುಭವವನ್ನು ಹೊಂದಿದ್ದು, ಜಸ್ಪ್ರೀತ್ ಬುಮ್ರಾ ಅವರ ಪ್ರತಿಭೆ ಮತ್ತು ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಅವರಂತಹ ಯುವ ಆಟಗಾರರನ್ನು ಹೊಂದಿದೆ. ಇತ್ತ ಇಂಗ್ಲೆಂಡ್ ತಂಡದಲ್ಲಿ ಹ್ಯಾರಿ ಬ್ರೂಕ್ ಮತ್ತು ಜೇಮಿ ಸ್ಮಿತ್‌ರಂತಹ ಕ್ರಿಕೆಟಿಗರು ಮತ್ತು ಓಲಿ ಪೋಪ್ ಅವರಂತಹ ಯುವ ಆಟಗಾರರನ್ನು ಹೊಂದಿದೆ. ಜೋ ರೂಟ್ ಮತ್ತು ವಿಶ್ವ ದರ್ಜೆಯ ನಾಯಕ ಬೆನ್ ಸ್ಟೋಕ್ಸ್ ಅವರ ಅನುಭವವೂ ತಂಡದಲ್ಲಿದೆ.

ಇಂಗ್ಲೆಂಡ್‌ನಲ್ಲಿ ಈ ಬೇಸಿಗೆಯಲ್ಲಿ ಹೆಚ್ಚುತ್ತಿರುವ ಒಣ ಹವಾಮಾನವು ಕೂಡ ಚರ್ಚೆಗೆ ಗ್ರಾಸವಾಗಿದೆ. ಸರಣಿಯ ಉದ್ಘಾಟನಾ ಪಂದ್ಯ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯಲಿದ್ದು, ಈ ವರ್ಷ ಅಲ್ಲಿ ಹೆಚ್ಚು ಮಳೆಯಾಗಿಲ್ಲ. ವೇಗದ ಬೌಲರ್‌ಗಳಿಗೆ ಅನುಕೂಲಕರವಾದ ಪಿಚ್, ಪೇಸ್ ಬೌಲಿಂಗ್‌ಗೆ ಉತ್ತಮ ಪರಿಸ್ಥಿತಿಯನ್ನು ನೀಡುತ್ತದೆ. ಆದ್ದರಿಂದ, ಪರಿಸ್ಥಿತಿಯ ಸಂಪೂರ್ಣ ಲಾಭವನ್ನು ಪಡೆಯಲು ಮೊದಲು ಬೌಲಿಂಗ್ ಮಾಡುವ ಆಯ್ಕೆಯು ವಿವೇಕಯುತವಾಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT