ಮ್ಯಾಥ್ಯೂ ಹೇಡನ್ - ಗ್ರೇಮ್ ಸ್ಮಿತ್ 
ಕ್ರಿಕೆಟ್

ಅನುಭವಿಗಳು ಇಲ್ಲದಿರುವುದು ಇಂಗ್ಲೆಂಡ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಬಹುದು: ಮ್ಯಾಥ್ಯೂ ಹೇಡನ್, ಗ್ರೇಮ್ ಸ್ಮಿತ್ ಅಭಿಪ್ರಾಯ

2007ರಲ್ಲಿ ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು.

ಲೀಡ್ಸ್: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ಭಾರತ ತಂಡವು ಸಾಕಷ್ಟು ಅನುಭವಿಗಳನ್ನು ಕಳೆದುಕೊಂಡಿದೆ ಮತ್ತು ಇಂಗ್ಲೆಂಡ್‌ನ ಸೀಮಿಂಗ್ ಪರಿಸ್ಥಿತಿಯಲ್ಲಿ ಇದು ಭಾರತಕ್ಕೆ ಕಷ್ಟವಾಗಿ ಪರಿಣಮಿಸಲಿದೆ ಎಂದು ಕ್ರಿಕೆಟ್ ದಂತಕಥೆಗಳಾದ ಮ್ಯಾಥ್ಯೂ ಹೇಡನ್ ಮತ್ತು ಗ್ರೇಮ್ ಸ್ಮಿತ್ ಹೇಳಿದ್ದಾರೆ.

ಶುಕ್ರವಾರದಿಂದ ಹೆಡಿಂಗ್ಲಿಯಲ್ಲಿ ಪ್ರಾರಂಭವಾಗಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಕಳೆದ ತಿಂಗಳು ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಈ ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದರಿಂದ ಗಿಲ್ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

'ಭಾರತ ನಿಜವಾಗಿಯೂ ಕಷ್ಟಪಡಲಿದೆ ಎಂದು ನಾನು ಭಾವಿಸುತ್ತೇನೆ. ಶುಭಮನ್ ಗಿಲ್ ಈ ಪ್ರತಿಕೂಲ ವಾತಾವರಣ, ಸೀಮಿಂಗ್ ಪರಿಸ್ಥಿತಿಗಳು, ಬೌನ್ಸಿಂಗ್ ಪರಿಸ್ಥಿತಿಗಳಿಗೆ ನಾಯಕನಾಗಿ ಬರುತ್ತಿದ್ದಾರೆ. ಇದು ನಿಜವಾದ ಸವಾಲಾಗಲಿದೆ. ಪ್ರವಾಸಿ ತಂಡಕ್ಕೆ ಇದು ನಿಜಕ್ಕೂ ಕಠಿಣ ಪರೀಕ್ಷೆ' ಎಂದು ಹೇಡನ್ ಐಸಿಸಿಗೆ ತಿಳಿಸಿದರು.

'ಸಾಮಾನ್ಯವಾಗಿ ಪ್ರವಾಸಿ ತಂಡಗಳು ಇಲ್ಲಿಗೆ ಬರುತ್ತವೆ. ಚಿಕ್ಕವರಾಗಿರಲಿ ಅಥವಾ ಹಿರಿಯರಾಗಿರಲಿ, ಆಟಗಾರನಾಗಿ ನೀವು ಮೂಲಭೂತವಾಗಿ ಒಗ್ಗಿಕೊಂಡಿರುವ ಪರಿಸ್ಥಿತಿಗೆ ವಿರುದ್ಧವಾದ ಪರಿಸ್ಥಿತಿ ಇಲ್ಲಿ ಇರುತ್ತದೆ. ಹೀಗಾಗಿ ಸಾಕಷ್ಟು ಹೊಂದಾಣಿ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಸರಣಿಯ ಕೊನೆಯಲ್ಲಿ ಇಂಗ್ಲೆಂಡ್ ಉತ್ತಮ ಸ್ಥಾನದಲ್ಲಿರುತ್ತದೆ ಎಂದು ನಾನು ಹೇಳುತ್ತೇನೆ' ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಹೇಳಿದರು.

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಸ್ಮಿತ್, ಇಂಗ್ಲೆಂಡ್‌ಗೆ ತುಂಬಾ ಪರಿಚಿತವಾಗಿರುವ ಪರಿಸ್ಥಿತಿಯಲ್ಲಿ ಅಪ್ರತಿಮ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಇಂಗ್ಲೆಂಡ್ ತಂಡವು ತವರಿನಲ್ಲಿ ಚೆನ್ನಾಗಿ ಆಡುತ್ತದೆ. ಅಲ್ಲಿನ ಪರಿಸ್ಥಿತಿಯನ್ನು ಅವರು ಅರ್ಥಮಾಡಿಕೊಂಡು ಉತ್ತಮ ಪ್ರದರ್ಶನ ನೀಡುತ್ತಾರೆ. ಶುಭಮನ್ ಮತ್ತು ಅವರ ತಂಡಕ್ಕೆ ಇದು ಸವಾಲಿನ ಕೆಲಸವಾಗಲಿದೆ ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿ ಸಾಕಷ್ಟು ಅನುಭವಿಗಳಿಲ್ಲ. ಆ ಒತ್ತಡವು ಎಲ್ಲರ ಮೇಲೆ ಉಂಟಾಗುತ್ತದೆ' ಎಂದು ಹೇಳಿದರು.

'ಬುಮ್ರಾ ಬೌಲಿಂಗ್ ದಾಳಿಯಲ್ಲಿ ಹೆಚ್ಚಿನ ಪಾಲು ಹೊಂದಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಈ ಪರಿಸ್ಥಿತಿಗಳಲ್ಲಿ ಇಂಗ್ಲೆಂಡ್ ಭಾರತವನ್ನು ಉತ್ತಮವಾಗಿ ಎದುರಿಸಲಿದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

ಕೊಹ್ಲಿ ಮತ್ತು ರೋಹಿತ್ ಹೊರತುಪಡಿಸಿ, ಕಳೆದ ಡಿಸೆಂಬರ್‌ನಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ನಂತರ ಆರ್ ಅಶ್ವಿನ್ ಕೂಡ ನಿವೃತ್ತಿ ಘೋಷಿಸಿದ್ದಾರೆ. 2007ರಲ್ಲಿ ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಿಸ್ತಿನಲ್ಲಿರಿಸಲು 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

SCROLL FOR NEXT