ಕೆಎಲ್ ರಾಹುಲ್ - ಸಂಜನಾ ಗಣೇಶನ್ 
ಕ್ರಿಕೆಟ್

'ಸಂಜನಾ, ಇದು ಬರೀ ಮಜವಾಗಿರಲಿಲ್ಲ!': ಜಸ್ಪ್ರೀತ್ ಬುಮ್ರಾ ಪತ್ನಿಗೆ ಕೆಎಲ್ ರಾಹುಲ್ ಉತ್ತರ!

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ವಿಶೇಷವಾಗಿ ಭಾರತದ ಸ್ಪಿನ್ ಮಾಂತ್ರಿಕರಾದ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರ ಬೌಲಿಂಗ್ ವೇಳೆ ವಿಕೆಟ್ ಕೀಪಿಂಗ್ ಎಷ್ಟು 'ಮಜವಾಗಿತ್ತು' ಎಂದು ರಾಹುಲ್ ಅವರನ್ನು ಪ್ರಶ್ನಿಸಲಾಗಿದೆ.

ಭಾರತದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಫಿನಿಷರ್ ಆಗಿ ಮೂಡಿಬಂದಿದ್ದಾರೆ. ಏಕದಿನ ಮಾದರಿಯಲ್ಲಿ ಫಿನಿಷರ್ ಸ್ಥಾನವನ್ನು ತಮ್ಮದಾಗಿಸಿಕೊಂಡಿರುವ ರಾಹುಲ್, ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಒಂದೇ ಒಂದು ಸೋಲು ಕಾಣದೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಫೈನಲ್ ಪಂದ್ಯ ಮುಗಿದ ನಂತರ ನಡೆದ ಸಂದರ್ಶನದಲ್ಲಿ, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ವಿಶೇಷವಾಗಿ ಭಾರತದ ಸ್ಪಿನ್ ಮಾಂತ್ರಿಕರಾದ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರ ಬೌಲಿಂಗ್ ವೇಳೆ ವಿಕೆಟ್ ಕೀಪಿಂಗ್ ಎಷ್ಟು 'ಮಜವಾಗಿತ್ತು' ಎಂದು ರಾಹುಲ್ ಅವರನ್ನು ಪ್ರಶ್ನಿಸಲಾಗಿದೆ.

ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಜೊತೆಗೆ ಮಾತನಾಡಿದ ರಾಹುಲ್, ವಿಕೆಟ್ ಕೀಪಿಂಗ್ ಮಾಡುವುದು ಮಜವಾಗಿರಲಿಲ್ಲ. ಬದಲಿಗೆ ಬೇಸರದಿಂದ ಕೂಡಿತ್ತು ಎಂದಿದ್ದಾರೆ.

ಭಾರತದ ಸ್ಪಿನ್ನರ್‌ಗಳು ಬೌಲಿಂಗ್ ಮಾಡುವಾಗ ಕೀಪಿಂಗ್ ವೇಳೆ ಎಷ್ಟು 'ಮೋಜು' ಮಾಡಿದ್ದೀರಿ ಎಂದು ಸಂಜನಾ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ರಾಹುಲ್, 'ಸಂಜನಾ, ಇದು ಕೇವಲ ಮಜವಾಗಿರಲಿಲ್ಲ! ಈ ಸ್ಪಿನ್ನರ್‌ಗಳು ಬೌಲಿಂಗ್ ಮಾಡುವಾಗ ನಾನು 200 ರಿಂದ 250 ಬಾರಿ ಸ್ಕ್ವಾಟ್ ಮಾಡಬೇಕಾಯಿತು' ಎಂದಿದ್ದಾರೆ.

ಭಾರತ ತಂಡಕ್ಕಾಗಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆಲ್ಲುವುದಕ್ಕಿಂತ ಉತ್ತಮ ಭಾವನೆ ಇನ್ನೊಂದಿಲ್ಲ ನಾನು ಭಾವಿಸುತ್ತೇನೆ. ನಾನು ಇದನ್ನು ಒಂದೆರಡು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದೆ. ಅಂದಿನಿಂದಲೂ ನನ್ನ ಸಂಪೂರ್ಣ ಗಮನ ಸಾಧ್ಯವಾದಷ್ಟು ಪ್ರಶಸ್ತಿಗಳನ್ನು ಗೆಲ್ಲುವುದರ ಮೇಲಿತ್ತು. ನನ್ನ ತಂಡಕ್ಕಾಗಿ ನಾನು ಪಂದ್ಯಗಳನ್ನು ಗೆಲ್ಲಲು ಸಾಧ್ಯವಿರುವ ಅವಕಾಶವನ್ನು ದೇವರು ನನಗೆ ನೀಡಿದ್ದಾನೆ. ನಾನು ಯಾವಾಗಲೂ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಅದುವೇ ಕ್ರೀಡೆಯ ಸೌಂದರ್ಯ. ನಿಮಗೆ ಅವಕಾಶಗಳು ಸಿಗುತ್ತಲೇ ಇರುತ್ತವೆ. ನೀವು ವಿನಮ್ರರಾಗಿದ್ದುಕೊಂಡು, ನಿಮ್ಮ ಹೃದಯವನ್ನು ಸರಿಯಾದ ಸ್ಥಳದಲ್ಲಿ ಇರಿಸಿ, ಕಠಿಣ ತರಬೇತಿ ಪಡೆದು ಮತ್ತು ನಿಮ್ಮ ಬ್ಯಾಟ್ ಅನ್ನು ಮಾತನಾಡಲು ಬಿಟ್ಟಾಗ, ದೇವರು ನಿಮ್ಮನ್ನು ಆಶೀರ್ವದಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ ಎಂದು ನಾನು ಹೇಳಬಲ್ಲೆ ಅಷ್ಟೆ. ನಾವು ನಮ್ಮ ವೃತ್ತಿಜೀವನದುದ್ದಕ್ಕೂ ವರ್ಷಪೂರ್ತಿ ಶ್ರಮಿಸುತ್ತೇವೆ. ಆದರೆ, ಅಂತಹ ಕ್ಷಣಗಳು ನಿಜವಾಗಿಯೂ ವಿಶೇಷವಾದವು' ರಾಹುಲ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT