ರುತುರಾಜ್ ಗಾಯಕ್ವಾಡ್ 
ಕ್ರಿಕೆಟ್

IPL 2025: ಸೋತರೂ ಮೀಸೆ ಮಣ್ಣಾಗಲಿಲ್ಲ! RCB ವಿರುದ್ಧ ಸೋಲಿನ ನಂತರ CSK ನಾಯಕ ಹೇಳಿದ್ದೇನು?

17 ವರ್ಷಗಳ ಬಳಿಕ ಸಿಎಸ್‌ಕೆ ತವರು ಮೈದಾನದಲ್ಲಿ ಆರ್‌ಸಿಬಿ ಮೊದಲ ಗೆಲುವು ದಾಖಲಿಸಿದೆ. 2008ರಲ್ಲಿ ಆರ್‌ಸಿಬಿ ತವರಿನಲ್ಲಿ ಸಿಎಸ್‌ಕೆಯನ್ನು ಸೋಲಿಸಿತ್ತು.

ಶುಕ್ರವಾರ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಹೀನಾಯ ಸೋಲು ಕಂಡಿದೆ. ಸೋಲಿನ ನಂತರ ಮಾತನಾಡಿದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ವಿಚಿತ್ರ ಹೇಳಿಕೆ ನೀಡಿದ್ದಾರೆ.

17 ವರ್ಷಗಳ ಬಳಿಕ ಸಿಎಸ್‌ಕೆ ತವರು ಮೈದಾನದಲ್ಲಿ ಆರ್‌ಸಿಬಿ ಮೊದಲ ಗೆಲುವು ದಾಖಲಿಸಿದೆ. 2008ರಲ್ಲಿ ಆರ್‌ಸಿಬಿ ತವರಿನಲ್ಲಿ ಸಿಎಸ್‌ಕೆಯನ್ನು ಸೋಲಿಸಿತ್ತು. ಈ ಬಾರಿ ರಜತ್ ಪಾಟಿದಾರ್ ನೇತೃತ್ವದ ತಂಡವು ಬರೋಬ್ಬರಿ 50 ರನ್‌ಗಳ ಗೆಲುವು ಸಾಧಿಸಿದೆ. ರುತುರಾಜ್ ಅವರನ್ನು ಸೋಲಿನ ಬಗ್ಗೆ ಕೇಳಿದಾಗ, ತಮ್ಮ ತಂಡವು ದೊಡ್ಡ ಅಂತರದಿಂದೇನು ಸೋಲು ಕಂಡಿಲ್ಲ. ಕೇವಲ 50 ರನ್‌ಗಳಿಂದ ಸೋತಿದೆ. ಇದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.

'ಈ ವಿಕೆಟ್‌ನಲ್ಲಿ 170 ರನ್‌ಗಳನ್ನು ಗಳಿಸುವುದೇ ಹೆಚ್ಚೆಂದು ನಾನು ಈಗಲೂ ಭಾವಿಸುತ್ತೇನೆ. ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಕಳಪೆ ಫೀಲ್ಡಿಂಗ್ ನಮಗೆ ನಷ್ಟವನ್ನುಂಟು ಮಾಡಿತು. ನೀವು 170 ರನ್‌ಗಳನ್ನು ಬೆನ್ನಟ್ಟುವಾಗ, ನಿಮಗೆ ಸ್ವಲ್ಪ ಹೆಚ್ಚು ಸಮಯವಿರುತ್ತದೆ. ಆದರೆ, ನೀವು ಹೆಚ್ಚುವರಿಯಾಗಿ 20 ರನ್‌ಗಳನ್ನು ಚೇಸ್ ಮಾಡುವಾಗ ಪವರ್ ಪ್ಲೇನಲ್ಲಿ ವಿಭಿನ್ನವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಆದರೆ, ಇಂದು ಅದು ಸಾಧ್ಯವಾಗಲಿಲ್ಲ' ಎಂದರು.

'ಅದು (ವಿಕೆಟ್) ಸ್ವಲ್ಪ ನಿಧಾನವಾಯಿತು, ಅದು ಸ್ವಲ್ಪ ಜಿಗುಟಾಯಿತು. ಹೊಸ ಚೆಂಡು ಸ್ವಲ್ಪ ಜಿಗುಟಾಗಿತ್ತು. ಅದು ಹೇಗೆ ಆಯಿತೆಂದು ತಿಳಿದಿಲ್ಲ. ರಾಹುಲ್ ತ್ರಿಪಾಟಿ ಪ್ರಯತ್ನಿಸಿದರು, ನಾನು ಕೂಡ ಉತ್ತಮ ಪ್ರದರ್ಶನ ನೀಡಲು ಯತ್ನಿಸಿದೆ. ಕೆಲವೊಮ್ಮೆ ಅದು ನಮ್ಮ ಪರವಾಗಿ ಕೆಲಸ ಮಾಡುತ್ತದೆ, ಕೆಲವೊಮ್ಮೆ ಮಾಡುವುದಿಲ್ಲ' ಎಂದ ಗಾಯಕ್ವಾಡ್ ತಮ್ಮ ತಂಡವು ಫೀಲ್ಡಿಂಗ್‌ನಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

'ಫೀಲ್ಡಿಂಗ್ ಬಹಳಷ್ಟು ಸುಧಾರಿಸಬೇಕು ಮತ್ತು ನಾವು ಫೀಲ್ಡಿಂಗ್ ವಿಭಾಗದಲ್ಲಿ ಬಲವಾಗಿ ಮರಳಬೇಕು ಎಂದು ನಾನು ಭಾವಿಸುತ್ತೇನೆ. ನಾವು ಕ್ಯಾಚ್‌ಗಳನ್ನು ಕೈಬಿಟ್ಟೆವು ಮತ್ತು ಬೌಂಡರಿಗಳು ಬರುತ್ತಲೇ ಇದ್ದವು ಮತ್ತು ಕೊನೆಯ ಓವರ್‌ನವರೆಗೂ ಆವೇಗ ನಿಲ್ಲಲಿಲ್ಲ' ಎಂದರು.

'ಆದರೆ ಕೊನೆಯಲ್ಲಿ ನಾವು ದೊಡ್ಡ ಅಂತರದಿಂದ ಸೋತಿಲ್ಲ, ಅದು ಕೇವಲ 50 ರನ್‌ಗಳಷ್ಟೇ. ತಂಡದಲ್ಲಿ ಮೂವರು ವಿಶ್ವ ದರ್ಜೆಯ ಸ್ಪಿನ್ನರ್‌ಗಳು ಇದ್ದಾಗ ಖಂಡಿತವಾಗಿಯೂ ವಿಭಿನ್ನ ಸನ್ನಿವೇಶವಿರುತ್ತದೆ. ಅವರನ್ನು ಎದುರಿಸಲು ಹೊಸ ಬ್ಯಾಟ್ಸ್‌ಮನ್‌ಗಳು ಬೇಕಾಗುತ್ತಾರೆ. ಈ ಬಾರಿ ಅದು ಆಗಲಿಲ್ಲ. ಮುಂದಿನ ಪಂದ್ಯ ಗುವಾಹಟಿಯಲ್ಲಿದ್ದು, ಅದಕ್ಕಿನ್ನು ಸಮಯವಿದೆ. ಆದರೆ, ನಾವು ಮಾನಸಿಕವಾಗಿ ಸುಧಾರಿಸಬಹುದಾದ ಕ್ಷೇತ್ರಗಳನ್ನು ನೋಡಬೇಕು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT