ಪಾಕಿಸ್ತಾನದ ಅಭಿಮಾನಿ 
ಕ್ರಿಕೆಟ್

Women's World Cup 2025: ರಾಷ್ಟ್ರಗೀತೆ ಹಾಡಿ ಭಾರತದ ಗೆಲುವನ್ನು ಸಂಭ್ರಮಿಸಿದ ಪಾಕ್ ಅಭಿಮಾನಿ! ಬಳಿಕ ಖಾತೆಯೇ ನಾಪತ್ತೆ!

ಟೀಂ ಇಂಡಿಯಾ ಗೆಲುವಿನ ಬಳಿಕವು ಸರಣಿ ಪೋಸ್ಟ್ ಮಾಡಿದ್ದ ಅರ್ಷದ್ ಅವರ ಖಾತೆಯನ್ನೇ ಇದೀಗ ಅಳಿಸಲಾಗಿದೆ.

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಪಾಕಿಸ್ತಾನ ತಂಡದ ಅಭಿಮಾನಿಯೊಬ್ಬರ ನಡೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ. ಪಾಕಿಸ್ತಾನದ ಜೆರ್ಸಿ ಧರಿಸಿದ್ದ ಅಭಿಮಾನಿಯೊಬ್ಬರು, ಫೈನಲ್ ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ಹಾಡಿ, ಬೆಂಬಲ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅರ್ಷದ್ ಮುಹಮ್ಮದ್ ಹನೀಫ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

'ಭಾರತ vs ದಕ್ಷಿಣ ಆಫ್ರಿಕಾ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಸುನಿಧಿ ಚೌಹಾಣ್ ಭಾರತದ ರಾಷ್ಟ್ರಗೀತೆ ಹಾಡುತ್ತಿರುವುದು ಹೆಮ್ಮೆಯ ಕ್ಷಣ! ಎಲ್ಲೆಡೆ ನಡುಕ ಹುಟ್ಟಿಸಿದೆ. ವುಮೆನ್ ಇನ್ ಬ್ಲೂ ತಂಡವನ್ನು ಜೋರಾಗಿ ಹುರಿದುಂಬಿಸೋಣ - ಕಪ್ ಅನ್ನು ಮನೆಗೆ ತನ್ನಿ' ಎಂದು ಅರ್ಷದ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಟೀಂ ಇಂಡಿಯಾ ಗೆಲುವಿನ ಬಳಿಕವು ಸರಣಿ ಪೋಸ್ಟ್ ಮಾಡಿದ್ದ ಅರ್ಷದ್ ಅವರ ಖಾತೆಯನ್ನೇ ಇದೀಗ ಅಳಿಸಲಾಗಿದೆ.

2005 ಮತ್ತು 2017ರ ಫೈನಲ್‌ಗಳಲ್ಲಿನ ಸೋಲಿನ ನಂತರ, ಐಸಿಸಿ ಮಹಿಳಾ ವಿಶ್ವಕಪ್ ಗೆಲ್ಲುವ ಭಾರತದ ದಶಕಗಳ ಕನಸು ಕೊನೆಗೂ ನನಸಾಗಿದೆ.

ಭಾರತದ ಚೊಚ್ಚಲ ಗೆಲುವನ್ನು ಗುರುತಿಸಿ ಬಿಸಿಸಿಐ ಸೋಮವಾರ ಆಟಗಾರ್ತಿಯರಿಗೆ, ಸಹಾಯಕ ಸಿಬ್ಬಂದಿಗೆ ಮತ್ತು ಆಯ್ಕೆ ಸಮಿತಿಗೆ 51 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ.

'ಈ ಅಭೂತಪೂರ್ವ ಯಶಸ್ಸನ್ನು ಗೌರವಿಸಲು, ಬಿಸಿಸಿಐ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆ ಸಮಿತಿಯ ಗಮನಾರ್ಹ ಪ್ರದರ್ಶನ, ಸಮರ್ಪಣೆ ಮತ್ತು ರಾಷ್ಟ್ರದ ಕ್ರೀಡಾ ವೈಭವಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ 51 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ' ಎಂದು ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

'ಬಿಸಿಸಿಐ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿರುವ ಜಯ್ ಶಾ ಅವರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಲು ಬಿಸಿಸಿಐ ಈ ಅವಕಾಶವನ್ನು ಬಳಸಿಕೊಂಡಿದೆ.

'ಐಸಿಸಿ ಅಧ್ಯಕ್ಷರಾಗಿ, ಅವರು ಕ್ರೀಡೆಯಾದ್ಯಂತ ಲಿಂಗ ಸಮಾನತೆಗೆ ಒತ್ತು ನೀಡಿದರು. ಅವರ ನಾಯಕತ್ವದಲ್ಲಿ, ಐಸಿಸಿ ಮಹಿಳಾ ವಿಶ್ವಕಪ್‌ ಬಹುಮಾನದ ಮೊತ್ತವನ್ನು ಏರಿಸಲಾಗಿದೆ. ಇದು ಮಹಿಳಾ ಕ್ರಿಕೆಟಿಗರನ್ನು ಅವರ ಪುರುಷ ಗೆಳೆಯರೊಂದಿಗೆ ಸಮಾನವಾಗಿ ನಡೆಸಿಕೊಳ್ಳಲಾಗುವುದು ಎಂಬುದರ ಸಂಕೇತವಾಗಿದೆ' ಎಂದು ಅದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!