ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ 
ಕ್ರಿಕೆಟ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ: ನಾಯಕ ಶುಭಮನ್ ಗಿಲ್ ಗೆ ಸೂಚನೆ

ಗಿಲ್ ಅವರನ್ನು ತಂಡದ ನಾಯಕರನ್ನಾಗಿ ನೋಡುವ ಅನುಭವ ಇಬ್ಬರೂ ದಿಗ್ಗಜರಿಗೆ ವಿಶಿಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ಇತ್ತೀಚೆಗೆ ಟೀಂ ಇಂಡಿಯಾದ ಅತ್ಯಂತ ನಿರೀಕ್ಷಿತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ ಅನುಭವಿ ಜೋಡಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮರಳುವಿಕೆ. ಭಾರತ ಇತ್ತೀಚೆಗೆ ಏಷ್ಯಾ ಕಪ್ 2025 (ಟಿ20 ಸ್ವರೂಪ) ಗೆಲ್ಲುವ ಮೂಲಕ ಪ್ರಮುಖ ಯಶಸ್ಸನ್ನು ಕಂಡಿದ್ದರೂ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಹೆಚ್ಚಿನ ಉತ್ಸಾಹವಿದೆ. ಈ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಗಿದ ನಂತರ ತಂಡಕ್ಕಾಗಿ ಆಡದ ಕೊಹ್ಲಿ ಮತ್ತು ರೋಹಿತ್ ಮತ್ತೆ ಭಾರತದ ಜೆರ್ಸಿಯನ್ನು ಧರಿಸಲಿದ್ದಾರೆ. ಆದರೆ, ತಂಡವನ್ನು ನಾಯಕ ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಮುಂಚಿತವಾಗಿ ಗಿಲ್ ಅವರನ್ನು ಭಾರತದ ನಾಯಕನನ್ನಾಗಿ ಬಡ್ತಿ ನೀಡಲಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ರೋಹಿತ್ ಅವರ ಅನುಭವ ಮತ್ತು ರಾಷ್ಟ್ರೀಯ ತಂಡವನ್ನು ಮುನ್ನಡೆಸುವಾಗ ಅವರು ಪಡೆದ ಯಶಸ್ಸಿನ ಹೊರತಾಗಿಯೂ ಗಿಲ್ ಅವರಿ ಆ ಜವಾಬ್ದಾರಿಯನ್ನು ನೀಡಿತು.

ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್, ಕೊಹ್ಲಿ ಮತ್ತು ರೋಹಿತ್ ಅವರನ್ನು ನಿರ್ವಹಿಸುವತ್ತ ಹೆಚ್ಚು ಗಮನಹರಿಸಬೇಡಿ ಎಂದು ಏಕದಿನ ನಾಯಕನಾಗಿ ಶುಭಮನ್ ಗಿಲ್ ಅವರಿಗೆ ಸೂಚಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ತಮ್ಮ ಪಾತ್ರ ಮತ್ತು ತಂಡದಲ್ಲಿನ ಚಲನಶೀಲತೆಯನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ. ಆದ್ದರಿಂದ, ಗಿಲ್ ಅವರನ್ನು ನಿರ್ವಹಿಸುವ ಅಗತ್ಯವಿಲ್ಲ ಎಂದಿದ್ದಾರೆ.

'ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಂದ ಇದು ಸಮಸ್ಯೆಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ವಿರಾಟ್ ಅವರನ್ನು ನೋಡಿ, ಎಂಎಸ್ ಧೋನಿ ಇನ್ನೂ ಆಡುತ್ತಿರುವಾಗಲೇ ಅವರು ನಾಯಕರಾದರು. ಹೊಸ ನಾಯಕನನ್ನು ರೂಪಿಸುವಲ್ಲಿ ಹಿರಿಯ ಆಟಗಾರ ಯಾವ ಪಾತ್ರವನ್ನು ವಹಿಸುತ್ತಾರೆಂದು ಅವರಿಗೆ ತಿಳಿದಿದೆ' ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

'ರೋಹಿತ್ ನಾಯಕನಾದಾಗಲೂ ಅದೇ ಆಗಿತ್ತು. ಹೌದು, ವಿರಾಟ್ ಅವರ ಹಿರಿಯ ಆಟಗಾರನಲ್ಲ, ಆದರೆ ಮಾಜಿ ನಾಯಕ. ಸ್ಪಷ್ಟವಾಗಿ, ಅವರು ಆ ಹಂತವನ್ನು ದಾಟಿದ್ದಾರೆ ಮತ್ತು ಭಾರತೀಯ ಕ್ರಿಕೆಟ್‌ನ ಸುಧಾರಣೆಯ ಬಗ್ಗೆ ಯಾವ ನಿರ್ಧಾರ ಸೂಕ್ತ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಇಬ್ಬರೂ ಯಾವಾಗಲೂ ಪ್ರಬುದ್ಧರಾಗಿ ಕಾಣಿಸಿಕೊಳ್ಳುತ್ತಾರೆ. ಆ ಹಿರಿಯ ಆಟಗಾರರನ್ನು ನಿರ್ವಹಿಸಲು ಶುಭಮನ್ ತಮ್ಮ ಶಕ್ತಿಯನ್ನು ವ್ಯಯಿಸಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

ಭಾರತದ ನಾಯಕ ಸ್ಥಾನದಿಂದ ಕೆಳಗಿಳಿದ ನಂತರ ಕೊಹ್ಲಿ ಅವರು ರೋಹಿತ್ ನಾಯಕತ್ವದಲ್ಲಿ ಕೆಲಸ ಮಾಡಿದ್ದರೂ, ಗಿಲ್ ಅವರನ್ನು ತಂಡದ ನಾಯಕರನ್ನಾಗಿ ನೋಡುವ ಅನುಭವ ಇಬ್ಬರೂ ದಿಗ್ಗಜರಿಗೆ ವಿಶಿಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಟ್ರಂಪ್ ಗೇ ಠಕ್ಕರ್: ವಿರೋಧದ ನಡುವೆಯೇ ಭಾರತದಲ್ಲಿ ಗೂಗಲ್ ಭಾರಿ ಹೂಡಿಕೆ, ಪ್ರಧಾನಿ ಮೋದಿಗೆ ಸುಂದರ್ ಪಿಚೈ ವಿವರಣೆ!

ಟ್ರಂಪ್‌ರನ್ನು Pak PM ಹೊಗಳುತ್ತಿದ್ದಾಗ ಹಿಂದೆ ನಿಂತಿದ್ದ Italy ಪ್ರಧಾನಿ ಜಾರ್ಜಿಯಾ ಮೆಲೋನಿ ರಿಯಾಕ್ಷನ್ Video Viral!

ಬೇಗ ಹೋಗು, ನನ್ನ ಉಳಿಸಿಕೊಡು: ರಾಜು ತಾಳಿಕೋಟೆಯ ಕೊನೆಯ 6 ನಿಮಿಷದ ಘಟನೆ ವಿವರಿಸಿದ Biggboss ವಿಜೇತ ಶೈನ್ ಶೆಟ್ಟಿ!

ಸದ್ಯಕ್ಕಿಲ್ಲ ಬ್ರೇಕ್.. 'ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅ.18ರವರೆಗೂ ಭಾರಿ ಮಳೆ': ಹವಾಮಾನ ಇಲಾಖೆ!

ಕಳಂಕಿತ ಸಿಎಂ, ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ಕುರಿತ JPCಗೆ ಇಂಡಿಯಾ ಬಣ ಬಹಿಷ್ಕಾರ

SCROLL FOR NEXT