ಪ್ರತೀಕಾ ರಾವಲ್ 
ಕ್ರಿಕೆಟ್

Women's World Cup 2025: ಟೂರ್ನಿಯಿಂದಲೇ ಪ್ರತೀಕಾ ರಾವಲ್ ಔಟ್; ಟೀಂ ಇಂಡಿಯಾಗೆ ಸಂಕಷ್ಟ!

ಬಾಂಗ್ಲಾದೇಶ ವಿರುದ್ಧದ ಚೇಸ್‌ ವೇಳೆಯಲ್ಲಿಯೂ ಸಹ, ಪ್ರತೀಕಾ ಅವರ ಬದಲಿಗೆ ಅಮನ್‌ಜೋತ್ ಕೌರ್ ಅವರು ಸ್ಮೃತಿ ಮಂಧಾನ ಅವರೊಂದಿಗೆ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದರು.

2025ರ ಮಹಿಳಾ ವಿಶ್ವಕಪ್ ಅಭಿಯಾನದಲ್ಲಿ ಭಾರತಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿ ಪ್ರತೀಕಾ ರಾವಲ್ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ವಾಸ್ತವದಲ್ಲಿ ಅವರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ದೆಹಲಿಯ ಯುವ ಆರಂಭಿಕ ಆಟಗಾರ್ತಿಗೆ ಭಾನುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಮೊಣಕಾಲು ಮತ್ತು ಪಾದಕ್ಕೆ ಗಾಯವಾಗಿತ್ತು.

ಮಹಿಳಾ ವಿಶ್ವಕಪ್‌ನಿಂದ ಪ್ರತಿಕಾ ರಾವಲ್ ಔಟ್

ಸೋಮವಾರ ರೆವ್‌ಸ್ಪೋರ್ಟ್ಸ್ ಈ ವಿಷಯವನ್ನು ದೃಢಪಡಿಸಿದೆ. ನವಿ ಮುಂಬೈನಲ್ಲಿ ನಡೆದ ಪಂದ್ಯದ ಸಂದರ್ಭದಲ್ಲಿ, ಬಾಂಗ್ಲಾದೇಶದ 21ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಬೌಂಡರಿ ಲೈನ್ ಬಳಿ ಚೆಂಡನ್ನು ಫೀಲ್ಡ್ ಮಾಡುವ ಪ್ರಯತ್ನದಲ್ಲಿ, ಅವರ ಕಾಲು ನೆಲಕ್ಕೆ ಸಿಲುಕಿತು ಮತ್ತು ತಿರುಚಿಕೊಂಡಿತು. ತಕ್ಷಣವೇ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

ಅಕ್ಟೋಬರ್ 29 ರಂದು ಭಾರತ vs ಆಸ್ಟ್ರೇಲಿಯಾ ಸೆಮಿಸ್

ಬಾಂಗ್ಲಾದೇಶ ವಿರುದ್ಧದ ಚೇಸ್‌ ವೇಳೆಯಲ್ಲಿಯೂ ಸಹ, ಪ್ರತೀಕಾ ಅವರ ಬದಲಿಗೆ ಅಮನ್‌ಜೋತ್ ಕೌರ್ ಅವರು ಸ್ಮೃತಿ ಮಂಧಾನ ಅವರೊಂದಿಗೆ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದರು. ಅಕ್ಟೋಬರ್ 29 ರಂದು ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ನಡೆಯಲಿದ್ದು, ಪ್ರತೀಕಾ ಅವರ ಬದಲಿ ಆಟಗಾರ್ತಿ ಆಯ್ಕೆಗೆ ಟೀಂ ಇಂಡಿಯಾ ಸಾಕಷ್ಟು ಬ್ಯಾಟಿಂಗ್ ಸಂಪನ್ಮೂಲಗಳನ್ನು ಹೊಂದಿಲ್ಲ.

ಇದೀಗ ಶಫಾಲಿ ವರ್ಮಾ ಒಂದು ಆಯ್ಕೆಯಾಗಿರಬಹುದು. ಆರಂಭಿಕ ಆಟಗಾರ್ತಿಯಾಗಿ ಶಫಾಲಿ ಆಸ್ಟ್ರೇಲಿಯಾ ವಿರುದ್ಧ ಹಲವು ಬಾರಿ ಆಡಿದ್ದಾರೆ. ಭಾರತ ಎ vs ಆಸ್ಟ್ರೇಲಿಯಾ ಎ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾರೆ. ಈ ಬಗ್ಗೆ ಯಾವುದೇ ವರದಿಗಳಿಲ್ಲ. ಇದಲ್ಲದೆ, ಬಾಂಗ್ಲಾದೇಶ ವಿರುದ್ಧದ ಪಂದ್ಯ ಮಳೆಯಿಂದ ನಿಂತಿದ್ದು, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯ ಕೂಡ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಅಥವಾ ಯಾವುದೇ ಫಲಿತಾಂಶ ಬರದಿದ್ದರೆ, ಆಸ್ಟ್ರೇಲಿಯಾ ಸ್ವಯಂಚಾಲಿತವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ 5 ವರ್ಷ ಕಾಲ ನಾನೇ ಮುಖ್ಯಮಂತ್ರಿ': ಸಿದ್ದರಾಮಯ್ಯ ಮಾರ್ಮಿಕ ಹೇಳಿಕೆ!

ಮೊನ್ನೆ ನೇಮಕ ಇಂದು RSS ಕಾರ್ಯಕರ್ತನ ಹೆಸರು ತೆಗೆದು ಹಾಕಿದ ಸರ್ಕಾರ; ಸಿಎಂ ಸಿದ್ದರಾಮಯ್ಯಗೆ ಕ್ಷಮೆ!

ಪರಸ್ಪರ ಸಮ್ಮತಿಯ ಸೆಕ್ಸ್ ಅಪರಾಧವಲ್ಲ: ಅತ್ಯಾಚಾರ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

'ನಾನು ಇನ್ನೂ ಉತ್ತಮವಾದದ್ದನ್ನು ಪಡೆಯಲು ಅರ್ಹ': ತಂಡದಿಂದ ಕೈಬಿಟ್ಟ ಬಿಸಿಸಿಐ, ಅಜಿತ್ ಅಗರ್ಕರ್ ವಿರುದ್ಧ ಕನ್ನಡಿಗ Karun Nair ಕಿಡಿ!

ಮತ್ತೊಬ್ಬ ಏಕನಾಥ ಶಿಂಧೆ ಹುಟ್ಟಲು ಸಾಧ್ಯವಿಲ್ಲ; 'ನವೆಂಬರ್ ಕ್ರಾಂತಿ'ಗೆ ಕಾಂಗ್ರೆಸ್ ಅವಕಾಶ ನೀಡಲ್ಲ!

SCROLL FOR NEXT