ಬಿಸಿಸಿಐ 
ಕ್ರಿಕೆಟ್

'ತಗ್ಗಿಬಗ್ಗಿ ನಡೆಯಿರಿ, ಇದು ಭಾರತ': BCCI ವಿರುದ್ಧ ಐಸಿಸಿ ಮಾಜಿ ಮ್ಯಾಚ್ ರೆಫರಿ ಗಂಭೀರ ಆರೋಪ!

ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಆರ್ಥಿಕವಾಗಿ ಪ್ರಬಲವಾದ ಕ್ರಿಕೆಟ್ ಮಂಡಳಿ. ಭಾರತವು ತನ್ನ ಆರ್ಥಿಕ ಶಕ್ತಿಯಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದೆ.

ಐಸಿಸಿ ಮಾಜಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಭಾರತೀಯ ತಂಡಕ್ಕೆ ದಂಡ ವಿಧಿಸುವುದರಿಂದ ರಕ್ಷಿಸಲು ರಾಜಕೀಯ ಪ್ರಭಾವವನ್ನು ಬಳಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ನಿವೃತ್ತ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ತಂದೆಯೂ ಆಗಿರುವ ಬ್ರಾಡ್ ಸಂದರ್ಶನವೊಂದರಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.

'ಸೌಮ್ಯ'ವಾಗಿರಲು ಮತ್ತು ಒಂದು ನಿರ್ದಿಷ್ಟ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ಅಪರಾಧದಿಂದಾಗಿ ಭಾರತ ತಂಡವನ್ನು ಪಾರುಮಾಡಲು ಸೂಚಿಸುವ ನೇರ ಫೋನ್ ಕರೆ ತನಗೆ ಬಂದಿತ್ತು' ಎಂದು ಬ್ರಾಡ್ ಹೇಳಿಕೊಂಡಿದ್ದಾರೆ.

ಭಾರತವು ಪಂದ್ಯದ ಕೊನೆಯಲ್ಲಿ ಮೂರು ಅಥವಾ ನಾಲ್ಕು ಓವರ್‌ಗಳನ್ನು ಬಾಕಿ ಉಳಿಸಿಕೊಂಡಿತ್ತು. ಈ ಅಪರಾಧಕ್ಕೆ ಸ್ವಯಂಚಾಲಿತವಾಗಿ ದಂಡ ವಿಧಿಸಲಾಗುತ್ತಿತ್ತು. ಆದರೆ, ಬಿಸಿಸಿಐ ಒತ್ತಡದಿಂದಾಗಿ, ದಂಡವನ್ನು ತಪ್ಪಿಸಲು ನಾನು ಕುಶಲತೆಯಿಂದ ನಡೆದುಕೊಳ್ಳಬೇಕಾಯಿತು ಎಂದು ಹೇಳಿದರು.

'ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಅತ್ಯಂತ ಶ್ರೀಮಂತ ಮತ್ತು ಆರ್ಥಿಕವಾಗಿ ಪ್ರಬಲವಾದ ಕ್ರಿಕೆಟ್ ಮಂಡಳಿ. ಭಾರತವು ತನ್ನ ಆರ್ಥಿಕ ಶಕ್ತಿಯಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದೆ. ಇಂದಿನ ಕ್ರಿಕೆಟ್ ಪರಿಸರದಲ್ಲಿ (ಮ್ಯಾಚ್ ರೆಫರಿ ಅಥವಾ ಅಧಿಕಾರಿಯಾಗಿ) ಸಕ್ರಿಯವಾಗಿ ಭಾಗವಹಿಸದಿರುವುದು ಸಂತೋಷವಾಗಿದೆ. ಕ್ರಿಕೆಟ್ ಆಡಳಿತ ಮತ್ತು ಕಾರ್ಯನಿರ್ವಹಣೆಯು ಈಗ ಹಿಂದೆಂದಿಗಿಂತಲೂ ರಾಜಕೀಯ ಪ್ರೇರಿತವಾಗಿದೆ' ಎಂದು ಟೆಲಿಗ್ರಾಫ್‌ಗೆ ತಿಳಿಸಿದರು.

ನಿಧಾನಗತಿಯ ಓವರ್ ರೇಟ್ ಪ್ರಸಂಗವನ್ನು ವಿವರಿಸುತ್ತಾ, ಫೋನ್ ಕರೆ ಕುರಿತು ಮಾತನಾಡಿದ ಬ್ರಾಡ್, ಈ ಘಟನೆಯು ಸೌರವ್ ಗಂಗೂಲಿ ನಾಯಕರಾಗಿದ್ದ ಭಾರತ ತಂಡದ ಪಂದ್ಯಕ್ಕೆ ಸಂಬಂಧಿಸಿದೆ. ಆದಾಗ್ಯೂ, ಗಂಗೂಲಿಯನ್ನು ಒಳಗೊಂಡ ಮತ್ತೊಂದು ಸಂದರ್ಭದಲ್ಲಿ, ಬ್ರಾಡ್ ಅವರು ಕಾನೂನುಗಳಿಗೆ ಬದ್ಧರಾಗಿದ್ದರು ಮತ್ತು ತಂಡಕ್ಕೆ ದಂಡ ವಿಧಿಸಿದೆ ಎಂದು ಹೇಳಿದರು.

ಪಂದ್ಯದ ಕೊನೆಯಲ್ಲಿ ಭಾರತದ ಮೂರು, ನಾಲ್ಕು ಓವರ್‌ಗಳು ಬಾಕಿ ಇದ್ದುದರಿಂದ ಅದು ದಂಡಕ್ಕೆ ಸಮನಾಗಿತ್ತು. ನನಗೆ ಒಂದು ಫೋನ್ ಕರೆ ಬಂತು, 'ಸೌಮ್ಯವಾಗಿರಿ, ಸ್ವಲ್ಪ ಸಮಯ ತೆಗೆದುಕೊಳ್ಳಿ ಏಕೆಂದರೆ ಇದು ಭಾರತ' ಎನ್ನಲಾಯಿತು ಮತ್ತು ಆದ್ದರಿಂದ ನಾವು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಯಿತು. ಸಮಯವನ್ನು ಮಿತಿಗಿಂತ ಕೆಳಗೆ ತರಬೇಕಾಯಿತು ಎಂದರು.

'ಮುಂದಿನ ಪಂದ್ಯದಲ್ಲೂ ಅದೇ ಆಯಿತು. ಗಂಗೂಲಿ ಕೆಲವು ನಡವಳಿಕೆಯನ್ನು ಪುನರಾವರ್ತಿಸಿದರು. ಗಂಗೂಲಿ ಆಟವನ್ನು ವೇಗಗೊಳಿಸಲು ಅಥವಾ ಕೆಲವು ನಿಯಮಗಳನ್ನು ಅನುಸರಿಸಲು ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರು. ನಾನು ಫೋನ್ ಮಾಡಿ, 'ನಾನು ಈಗ ಏನು ಮಾಡಬೇಕೆಂದು ನೀವು ಬಯಸುತ್ತೀರಿ?' ಎಂದು ಕೇಳಿದೆ ಮತ್ತು ಅವರು ಗಂಗೂಲಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಹೇಳಿದರು. ಆದ್ದರಿಂದ ಆರಂಭದಿಂದಲೂ ರಾಜಕೀಯ ಒಳಗೊಂಡಿತ್ತು ಇಂದಿನ ಆಟಗಾರರು ಕ್ರಿಕೆಟ್‌ನಲ್ಲಿ ರಾಜಕೀಯದ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ ಅಥವಾ ತೊಂದರೆ ತಪ್ಪಿಸಲು ಮೌನವಾಗಿರುತ್ತಾರೆ ಎಂದು ಅವರು ಹೇಳಿದರು.

ಬ್ರಾಡ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 123 ಟೆಸ್ಟ್ ಪಂದ್ಯಗಳಲ್ಲಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಕೊನೆಯ ಪಂದ್ಯ 2024ರ ಫೆಬ್ರುವರಿಯಲ್ಲಿ ಕೊಲಂಬೊದಲ್ಲಿ ನಡೆದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Women's World Cup 2025: ಜೆಮಿಮಾ ಭರ್ಜರಿ ಶತಕ, 5 ವಿಕೆಟ್ ಗಳಿಂದ ಆಸೀಸ್ ಸೋಲಿಸಿ, ಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಮೋದಿ ಮತಕ್ಕಾಗಿ 'ಭರತ ನಾಟ್ಯ'ನೂ ಮಾಡ್ತಾರೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

ಸಂಪುಟ ಸಭೆಯಲ್ಲಿ ಸಚಿವರ ಜಟಾಪಟಿ: ಡಾ. ಹೆಚ್‌.ಸಿ. ಮಹಾದೇವಪ್ಪ- ಕೆಜೆ ಜಾರ್ಜ್ ಕಿತ್ತಾಡಿಕೊಂಡ್ರಾ?

ಚುನಾವಣಾ ಆಯೋಗದ SIR ಗೆ ಹೆದರಿ ಆತ್ಮಹತ್ಯೆಗೆ ಶರಣಾದ ಪಶ್ಚಿಮ ಬಂಗಾಳದ ವ್ಯಕ್ತಿ!

ಪ. ಜಾತಿಯಲ್ಲಿ ಒಳ ಮೀಸಲಾತಿ: ಸಮರ್ಪಕ ಅನುಷ್ಟಾನಕ್ಕೆ ಮುಂದಿನ ಕ್ಯಾಬಿನೆಟ್ ನಲ್ಲಿ ಬಿಲ್ ಮಂಡನೆ!

SCROLL FOR NEXT