ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಯೂಸುಫ್-ಸೂರ್ಯಕುಮಾರ್ ಯಾದವ್ online desk
ಕ್ರಿಕೆಟ್

ಸು...ರ್ ಕುಮಾರ್: ಹಸ್ತ ಲಾಘವ ಕೊಡದ ಟೀಂ ಇಂಡಿಯಾ ನಾಯಕನಿಗೆ ಅವಹೇಳನಕಾರಿ ಶಬ್ದದಿಂದ ನಿಂದಿಸಿದ ಪಾಕ್ ಮಾಜಿ ಕ್ರಿಕೆಟಿಗ

ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದ ನಂತರ ಭಾರತದ ಆಟಗಾರರು ಪಾಕಿಸ್ತಾನ ತಂಡದೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು.

ದುಬೈ: ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಯೂಸುಫ್, ನೇರ ಪ್ರಸಾರದ ಟಿವಿ ಚರ್ಚೆಯ ಸಂದರ್ಭದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು 'ಹಂದಿ' (ಸುವರ್) ಎಂದು ಕರೆದು ಅವಹೇಳನಕಾರಿ ಪದವನ್ನು ಬಳಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಿರುವ ನಡುವೆ, ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದ ನಂತರ ಭಾರತದ ಆಟಗಾರರು ಪಾಕಿಸ್ತಾನ ತಂಡದೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು. ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಆಘಾ ಇಬ್ಬರೂ ನಾಯಕರು ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ನ್ನು ಬಿಟ್ಟುಬಿಟ್ಟರು.

ಪಂದ್ಯದ ನಂತರವೂ ಅಹಿತಕರ ವಾತಾವರಣ ಮುಂದುವರೆಯಿತು, ಪಂದ್ಯವನ್ನು ಗೆದ್ದ ನಂತರ ಭಾರತದ ಆಟಗಾರರು ಪಾಕಿಸ್ತಾನದ ಹ್ಯಾಂಡ್‌ಶೇಕ್ ಪ್ರಸ್ತಾಪವನ್ನು ತಿರಸ್ಕರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ನಾಯಕ ಸಲ್ಮಾನ್ ಪಂದ್ಯದ ನಂತರದ ಪ್ರಸ್ತುತಿಯಿಂದ ಹಿಂದೆ ಸರಿದರು.

ಅತಿಥಿ ತಜ್ಞರಾಗಿ ಕಾಣಿಸಿಕೊಂಡ ಯೂಸುಫ್ ಅವರನ್ನು ಪಾಕಿಸ್ತಾನ ತಂಡದೊಂದಿಗೆ ಹಸ್ತಲಾಘವ ಮಾಡಲು ಭಾರತ ನಿರಾಕರಿಸಿದ ಬಗ್ಗೆ ಕೇಳಿದಾಗ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೇಲೆ ಅವರು ವೈಯಕ್ತಿಕ ದಾಳಿ ನಡೆಸಿದರು.

ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಯೂಸುಫ್ ಸೂರ್ಯಕುಮಾರ್ ಮೇಲೆ ಆಕ್ರಮಣಕಾರಿ ಹೇಳಿಕೆ ನೀಡಿದ್ದಾರೆ. ಸೂರ್ಯಕುಮಾರ್ ತಮ್ಮ ಅಜೇಯ 47 ರನ್‌ಗಳೊಂದಿಗೆ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು ಮತ್ತು ಭಾರತವನ್ನು ಫೌಲ್ ಪ್ಲೇ ಎಂದು ಆರೋಪಿಸಿದರು.

"ಭಾರತವು ಅವರ ಸಿನಿಕ ಪ್ರಪಂಚದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರ ನಾಯಕ ಸುವರ್ಕುಮಾರ್ ಯಾದವ್.... ," ಎಂದು ಯೂಸುಫ್ ಸಮಾ ಟಿವಿಯಲ್ಲಿ ನೇರ ಪ್ರಸಾರದ ಸಮಯದಲ್ಲಿ ಹೇಳುತ್ತಿದ್ದಂತೆಯೇ ಆಂಕರ್ ಅವರನ್ನು ಸರಿಪಡಿಸಲು ಪ್ರಯತ್ನಿಸಿದರು. "ಸುವರ್ಕುಮಾರ್ ಯಾದವ್." "ಹೌದು, ನಾನು ಹೇಳಿದ್ದು ಅದನ್ನೇ, ಸುರವರ್ ಕುಮಾರ್ ಯಾದವ್." ಎಂದು ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಭಾರತವು ಪಂದ್ಯಗಳನ್ನು ಗೆಲ್ಲಲು ಅಂಪೈರ್‌ಗಳು ಮತ್ತು ರೆಫರಿಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಅವರು ಮತ್ತಷ್ಟು ಆರೋಪಿಸಿದರು. "ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುತ್ತಿರುವ ವಿಧಾನಗಳಿಂದಾಗಿ ಭಾರತವು ತನ್ನ ಬಗ್ಗೆ ನಾಚಿಕೆಪಡಬೇಕು, ಅಂಪೈರ್ ಅನ್ನು ಬಳಸಿಕೊಂಡು ಮತ್ತು ರೆಫರಿಯನ್ನು ಅವರ ಇಚ್ಛೆಯಂತೆ ವರ್ತಿಸುವಂತೆ ಹಿಂಸಿಸುತ್ತಿದೆ. ಎಂದು ಮೊಹಮ್ಮದ್ ಯೂಸುಫ್ ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ, ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವ ಪಾಕಿಸ್ತಾನದ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರಾಕರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಮತ್ತೊಂದು ಬೃಹತ್ ದರೋಡೆ: ವಿಜಯಪುರ SBI ಬ್ಯಾಂಕ್‌ ಸಿಬ್ಬಂದಿ ಕಟ್ಟಿಹಾಕಿ, 8 ಕೋಟಿ ಹಣ, 50 ಕೋಟಿ ಚಿನ್ನಾಭರಣ ಕಳವು?

ಕ್ರೈಸ್ತ ಬ್ರಾಹ್ಮಣ, ಕ್ರೈಸ್ತ ಒಕ್ಕಲಿಗ, ಕ್ರೈಸ್ತ ಕುರುಬ Hindu ಉಪಜಾತಿ ಸೇರ್ಪಡೆ ವಿರುದ್ಧ ರಾಜ್ಯಪಾಲರಿಗೆ BJP ದೂರು!

75ರ ವಸಂತಕ್ಕೆ ಕಾಲಿಡುತ್ತಿರುವ ನರೇಂದ್ರ ಮೋದಿ: ಜನರ ಪ್ರಧಾನಿಯ ಏಳು ಬೀಳುಗಳ ಸ್ಮರಣೀಯ ಪ್ರಯಾಣ

ಹಿಮಾಚಲದಲ್ಲಿ ವಿನಾಶ: ಮೇಘಸ್ಫೋಟ-ಭೂಕುಸಿತ; 13 ಮಂದಿ ಸಾವು, 16ಕ್ಕೂ ಹೆಚ್ಚು ಮಂದಿ ನಾಪತ್ತೆ, SDRF ಕಾರ್ಯಾಚರಣೆ!

ಸಿನಿಮಾಗೆ 200 ರೂ. ಟಿಕೆಟ್ ದರ: ಹೈಕೋರ್ಟ್ ಮೆಟ್ಟಿಲೇರಿದ 'ಹೊಂಬಾಳೆ', ಮಲ್ಟಿಪ್ಲೆಕ್ಸ್ ಮಾಲೀಕರು

SCROLL FOR NEXT