ಮೊಹ್ಸಿನ್ ನಖ್ವಿ  
ಕ್ರಿಕೆಟ್

Asia Cup 2025: ವಿಜೇತ ತಂಡಕ್ಕೆ ACC ಮುಖ್ಯಸ್ಥ ನಖ್ವಿಯಿಂದ ಟ್ರೋಫಿ ವಿತರಣೆ; ಭಾರತದ ನಿಲುವೇನು?

ಪಂದ್ಯದ ನಂತರದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಅವರ ಉಪಸ್ಥಿತಿ ಬಗ್ಗೆ ಭಾರತ ತಂಡದ ನಿಲುವು ಗಮನ ಸೆಳೆಯುವ ನಿರೀಕ್ಷೆಯಿದೆ.

ದುಬೈ: ಭಾನುವಾರ ನಡೆಯಲಿರುವ ಭಾರತ- ಪಾಕಿಸ್ತಾನ ನಡುವಣ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಲು ಪಾಕಿಸ್ತಾನದ ಆಂತರಿಕ ಸಚಿವರು ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಸಜ್ಜಾಗಿದ್ದಾರೆ.

ಪಂದ್ಯದ ನಂತರದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಅವರ ಉಪಸ್ಥಿತಿ ಬಗ್ಗೆ ಭಾರತ ತಂಡದ ನಿಲುವು ಗಮನ ಸೆಳೆಯುವ ನಿರೀಕ್ಷೆಯಿದೆ.

ಪಂದ್ಯದ ನಂತರದ ಟ್ರೋಫಿ ವಿತರಣಾ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮುಖ್ಯಸ್ಥರು ಹಾಗೂ ಎಸಿಸಿ ಮುಖ್ಯಸ್ಥರಾಗಿರುವ ನಖ್ವಿ ಹಾಜರಿರುವುದು ಕಡ್ಡಾಯವಾಗಿದೆ. ಪಂದ್ಯವೊಂದರಲ್ಲಿ ಮಂಡಳಿಯ ಮುಖ್ಯಸ್ಥರ ಹಾಜರಾತಿಯು ಸಾಮಾನ್ಯವಾಗಿ ವಾಡಿಕೆಯಂತೆ ಇರುತ್ತದೆ. ಆದರೆ ಅವರ ಭಾರತ ವಿರೋಧಿ ಹೇಳಿಕೆಗಳ ಹಿನ್ನೆಲೆಯಲ್ಲಿ ಭಾರತ ತಂಡ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ACC ಮುಖ್ಯಸ್ಥರಾಗಿ ನಖ್ವಿ ಟ್ರೋಫಿ ವಿತರಿಸಲು ಹಾಗೂ ಎರಡೂ ತಂಡಗಳೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ನಲ್ಲಿ ಭಾಗವಹಿಸುವ ಹಕ್ಕು ಹೊಂದಿದ್ದಾರೆ.

ಆದಾಗ್ಯೂ ಭಾರತ ತಂಡವು ಪಾಕಿಸ್ತಾನದೊಂದಿಗೆ 'ನೋ ಹ್ಯಾಂಡ್‌ಶೇಕ್' ನೀತಿಯನ್ನು ನಿರ್ವಹಿಸುತ್ತಿದೆ. ಬಹಿರಂಗವಾಗಿ ಭಾರತದ ವಿರುದ್ಧ ಹೇಳಿಕೆ ನೀಡಿರುವ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥರೊಂದಿಗೆ ಬಿಸಿಸಿಐ ಆಟಗಾರರು ಮಾತನಾಡುವ ಸಾಧ್ಯತೆಯಿಲ್ಲ. ಆದಾಗ್ಯೂ, ನಖ್ವಿ ಉಪಸ್ಥಿತಿಗೆ ಸಂಬಂಧಿಸಿದಂತೆ ಬಿಸಿಸಿಐ ತನ್ನ ನಿಲುವನ್ನು ಇನ್ನೂ ಸಾರ್ವಜನಿಕವಾಗಿ ಸ್ಪಷ್ಟಪಡಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಷ್ಟ್ರಪತಿಗಳು, ರಾಜ್ಯಪಾಲರು ಮಸೂದೆ ಅಂಗೀಕರಿಸಲು ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ, ಹಾಗೆಂದು ಅನಿರ್ದಿಷ್ಟಾವಧಿಯವರೆಗೆ ವಿಳಂಬ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ

ಜಪಾನ್ ಕುಸಿತ, ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎಚ್ಚರ! (ಹಣಕ್ಲಾಸು)

ಗಗನಯಾನ: 80 ಸಾವಿರ ಪರೀಕ್ಷೆಗಳು ಮುಗಿದಿವೆ, ಯಾವುದೇ ಸಮಯದಲ್ಲಿ ಉಡಾವಣೆಗೆ ಸಿದ್ಧ

ಬಿಹಾರ ಸೋಲಿನಿಂದ ಕಂಗೆಟ್ಟ ಕೈ ಪಡೆ: ಒಡೆದು ಛಿದ್ರವಾಯ್ತಾ INDIA ಒಕ್ಕೂಟ- ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ?

SCROLL FOR NEXT