ಯುಜ್ವೇಂದ್ರ ಚಾಹಲ್-ಧನಶ್ರೀ ವರ್ಮಾ 
ಕ್ರಿಕೆಟ್

ಮದುವೆಯಾದ 2 ತಿಂಗಳಲ್ಲೇ ಚಹಾಲ್ 'ಕಳ್ಳಾಟ' ಪತ್ತೆ ಮಾಡಿದೆ: ದಾಂಪತ್ಯ ದ್ರೋಹದ ಕುರಿತು ಧನಶ್ರೀ ವರ್ಮಾ ಸ್ಫೋಟಕ ಹೇಳಿಕೆ, Video!

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರ ಮುರಿದ ವಿವಾಹವು ಮತ್ತೊಮ್ಮೆ ಸುದ್ದಿಗಳಲ್ಲಿದೆ. ಈಗ, ನೃತ್ಯ ಸಂಯೋಜಕಿ ತಮ್ಮ ಮದುವೆಯಾದ ಕೇವಲ ಎರಡು ತಿಂಗಳ ನಂತರ ತನ್ನ ಮಾಜಿ ಪತಿ ಮೋಸ ಮಾಡಿರುವುದನ್ನು ಪತ್ತೆ ಹಚ್ಚಿದೆ

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರ ಮುರಿದ ವಿವಾಹವು ಮತ್ತೊಮ್ಮೆ ಸುದ್ದಿಗಳಲ್ಲಿದೆ. ಈಗ, ನೃತ್ಯ ಸಂಯೋಜಕಿ ತಮ್ಮ ಮದುವೆಯಾದ ಕೇವಲ ಎರಡು ತಿಂಗಳ ನಂತರ ತನ್ನ ಮಾಜಿ ಪತಿ ಮೋಸ ಮಾಡಿರುವುದನ್ನು ಪತ್ತೆ ಹಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಪ್ರಸ್ತುತ, ಧನಶ್ರೀ ರೈಸ್ ಅಂಡ್ ಫಾಲ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಒಂದು ಭಾಗದಲ್ಲಿ, ಧನಶ್ರೀ ಊಟದ ಮೇಜಿನ ಬಳಿ ಉಪಾಹಾರದ ಸಮಯದಲ್ಲಿ ನಟಿ ಕುಬ್ರಾ ಸೈಟ್ ಅವರೊಂದಿಗಿನ ತನ್ನ ಮುರಿದ ವಿವಾಹದ ಬಗ್ಗೆ ಚರ್ಚಿಸುತ್ತಾರೆ.

ನಿಮ್ಮ ಸಂಬಂಧದಲ್ಲಿ 'ಇದು ಕೆಲಸ ಮಾಡಲು ಸಾಧ್ಯವಿಲ್ಲ, ಈ ತಪ್ಪು ಈಗಾಗಲೇ ಮಾಡಲಾಗಿದೆ' ಎಂದು ನೀವು ಯಾವಾಗ ಅರಿತುಕೊಂಡಿದ್ದೀರಿ?" ಎಂದು ಕುಬ್ರಾ ಕೇಳಿದರು, "ಮೊದಲ ವರ್ಷ" ಎಂದು ಧನಶ್ರೀ ಉತ್ತರಿಸಿದರು. ನಾನು ಅವನನ್ನು ಎರಡನೇ ತಿಂಗಳಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದೆ ಎಂದು ಧನಶ್ರೀ ಮತ್ತಷ್ಟು ವಿವರಿಸಿದರು. ಆಕೆಯ ಪ್ರತಿಕ್ರಿಯೆ ಕುಬ್ರಾ ಅವರನ್ನು ಆಶ್ಚರ್ಯಗೊಳಿಸಿದ್ದು ಮ್ಯಾಡ್ ಬ್ರದರ್ ಎಂದು ಹೇಳುತ್ತಾರೆ. ಈ ಶೋನ ಆರಂಭದಲ್ಲಿ, ಧನಶ್ರೀ ಜೀವನಾಂಶ ವದಂತಿಗಳು ಸುಳ್ಳು ಎಂದು ಬಹಿರಂಗಪಡಿಸಿದರು. ಆದಿತ್ಯ ನಾರಾಯಣ್ ಜೊತೆ ಮಾತನಾಡುವಾಗ ಸುಮಾರು ಒಂದು ವರ್ಷ ಕಳೆದಿದೆ. ಪರಸ್ಪರ ಒಪ್ಪಿಗೆಯಿಂದಾಗಿ ಇದು ವಿಚ್ಛೇದನ ಬೇಗನೆ ಸಿಕ್ಕಿತು ಎಂದು ಹೇಳಿದರು.

ನಂತರ ಜೀವನಾಂಶದ ಬಗ್ಗೆ ಚರ್ಚೆಗಳು ಶುರುವಾದವು. ಅದು ತಪ್ಪು. ನಾನು ಏನೂ ಮಾತನಾಡುತ್ತಿಲ್ಲ ಎಂಬ ಕಾರಣಕ್ಕಾಗಿ ನೀವು ಏನನ್ನಾದರೂ ಹೇಳುತ್ತಲೇ ಇರುತ್ತೀರಾ? ನನ್ನ ಪೋಷಕರು ನನಗೆ ನನ್ನ ಮನಸ್ಸನ್ನು ನಾನು ಪ್ರೀತಿಸುವ ಜನರೊಂದಿಗೆ ಮಾತ್ರ ಮಾತನಾಡಲು ಕಲಿಸಿದ್ದಾರೆ. ನಾವು ನಾಲ್ಕು ವರ್ಷಗಳ ಕಾಲ ಜೊತೆಯಲ್ಲಿದ್ದೇವು. ಅದಕ್ಕೂ ಮೊದಲು ನಾವು 6-7 ತಿಂಗಳುಗಳ ಕಾಲ ಡೇಟಿಂಗ್ ಮಾಡಿದ್ದೇವು ಎಂದು ಹೇಳಿದರು. ಅಂತಿಮವಾಗಿ ನನ್ನ ಜೀವನದಲ್ಲಿ ಈ ರೀತಿ ನಡೆಯಿತಲ್ಲ ಎಂಬ ವಿಚಾರ ನೋವುಂಟು ಮಾಡುತ್ತದೆ ಎಂದು ಧನಶ್ರೀ ಹೇಳಿದರು.

ಧನಶ್ರೀ ಮತ್ತು ಯುಜ್ವೇಂದ್ರ ಚಾಹಲ್ ಅವರ ಪರಿಚಯ 2020ರಲ್ಲಿ COVID-19 ಲಾಕ್‌ಡೌನ್ ಸಮಯದಲ್ಲಿ ಆಯಿತು. ಧನಶ್ರೀ ಅವರ ಆನ್‌ಲೈನ್ ನೃತ್ಯ ತರಗತಿಗಳ ಮೂಲಕ ಸಂಪರ್ಕ ಸಾಧಿಸಿದಾಗ ಅರಳಿತು. ಈ ಜೋಡಿ 2020ರ ಡಿಸೆಂಬರ್ 20ರಂದು ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗಿದ್ದು 2025ರಲ್ಲಿ ದಾಂಪತ್ಯ ಕೊನೆಗೊಂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ ರೂ. 8,500 ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು: ವಾರಸುದಾರರಿಗೆ ಪರಿಹಾರ ವಿತರಣೆ- ಸಿಎಂ ಸಿದ್ದರಾಮಯ್ಯ

Gaza deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ: ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ, BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT