ಪಾಕಿಸ್ತಾನ ಸೂಪರ್ ಲೀಗ್ ನಾಯಕರು AFP
ಕ್ರಿಕೆಟ್

'IPL ಬಾಲಿವುಡ್ ಸಿನಿಮಾದಂತಿರುತ್ತದೆ, PSL ಗಂಭೀರ ಕ್ರಿಕೆಟ್ ಸ್ಪರ್ಧೆಯಾಗಿದೆ': ರಿಲೀ ರೊಸೊವ್ ಸ್ಫೋಟಕ ಹೇಳಿಕೆ!

ದಕ್ಷಿಣ ಆಫ್ರಿಕಾದ ಆಟಗಾರ ರಿಲೀ ರೊಸೊವ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೇವಲ ಬಾಲಿವುಡ್ ಸಿನಿಮಾದಂತಿರುತ್ತದೆ. ಆದರೆ, ಪಿಎಸ್ಎಲ್ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಸದ್ಯ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ತಂಡವಾದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ರಿಲೀ ರೊಸೊವ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ, ಐಪಿಎಲ್‌ಗಿಂತ ಪಿಎಸ್‌ಎಲ್ ಹೆಚ್ಚು ಸ್ಪರ್ಧಾತ್ಮಕವಾಗಿದೆ ಮತ್ತು ಐಪಿಎಲ್ ಬಾಲಿವುಡ್‌ನಿಂದ ಹೆಚ್ಚಿನ ಬೆಂಬಲವನ್ನು ಹೊಂದಿರುವ ದೀರ್ಘ ಪಂದ್ಯಾವಳಿಯಾಗಿದೆ ಎಂದಿದ್ದಾರೆ.

'ಐಪಿಎಲ್ ದೀರ್ಘ ಪಂದ್ಯಾವಳಿಯಾಗಿದ್ದು, ಬಲವಾದ ಬಾಲಿವುಡ್ ಪ್ರಭಾವದಿಂದಾಗಿ ಇದು ಮನರಂಜನೆಯಂತೆ ಭಾಸವಾಗುತ್ತದೆ. ಆದರೆ, ಪಿಎಸ್ಎಲ್ ಚಿಕ್ಕದಾಗಿದೆ, ಹೆಚ್ಚು ತೀವ್ರವಾಗಿರುತ್ತದೆ ಮತ್ತು ಗಂಭೀರ ಕ್ರಿಕೆಟ್ ಸ್ಪರ್ಧೆಯ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತದೆ' ಎಂದು ಅವರು ಹೇಳಿದರು.

ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಅವರು ಪೇಶಾವರ್ ಝಲ್ಮಿಗೆ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆಂದು ಬಹಿರಂಗಪಡಿಸಿದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಉದ್ಯೋಗಿಗಳಿಗೆ ಪಿಎಸ್ಎಲ್ ತಂಡಗಳೊಂದಿಗೆ ಕೆಲಸ ಮಾಡಲು ಅವಕಾಶ ನೀಡುವ ನಿಯಮವನ್ನು ಪ್ರಶ್ನಿಸಲಾಗುತ್ತಿದೆ.

ಪಿಎಸ್‌ಎಲ್ ಆರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸರ್ಫರಾಜ್ ಅಹ್ಮದ್ ಮತ್ತು ವಹಾಬ್ ರಿಯಾಜ್ ಅವರು ಕ್ವೆಟ್ಟಾ ಗ್ಲಾಡಿಯೇಟರ್ಸ್ ಫ್ರಾಂಚೈಸಿಯೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಿತ್ತು.

ಮಂಡಳಿಯು ತನ್ನ ನೀತಿಯಡಿಯಲ್ಲಿ ಪಿಸಿಬಿ ವೇತನದಾರರ ಪಟ್ಟಿಯಲ್ಲಿರುವ ಮಾಜಿ ಆಟಗಾರರು ಪಿಎಸ್‌ಎಲ್‌ನಲ್ಲಿ ಯಾವುದೇ ಫ್ರಾಂಚೈಸಿ ಪರ ಕೆಲಸ ಮಾಡಲು ಅನುಮತಿ ಇಲ್ಲ. ಏಕೆಂದರೆ, ಅದು ಹಿತಾಸಕ್ತಿಯ ಸಂಘರ್ಷವಾಗಿದೆ ಎಂದು ಹೇಳಿದೆ.

ಪಿಸಿಬಿಯಲ್ಲಿ ಸಂಭಾವನೆ ಪಡೆಯುವ ರಾಷ್ಟ್ರೀಯ ಆಯ್ಕೆದಾರ ಮತ್ತು ಬ್ಯಾಟಿಂಗ್ ಸಲಹೆಗಾರರಾಗಿರುವ ಮಿಸ್ಬಾ ಅವರು, ಪೇಶಾವರ್ ಜಲ್ಮಿ ಜೊತೆಗಿನ ತಮ್ಮ ಸಂಬಂಧವನ್ನು ಸಮರ್ಥಿಸಿಕೊಂಡಿದ್ದಾರೆ.

'ನಾನು ರಾಷ್ಟ್ರೀಯ ಆಯ್ಕೆದಾರನಾಗುವ ಮೊದಲು ಜಲ್ಮಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದೆ ಮತ್ತು ಒಂದು ಆವೃತ್ತಿಯಲ್ಲಿ ನಿರ್ದಿಷ್ಟ ದಿನಗಳಲ್ಲಿ ಮಾತ್ರ ನಾನು ಅವರ ಸಲಹೆಗಾರನಾಗಿ ಕೆಲಸ ಮಾಡುತ್ತೇನೆ' ಎಂದು ಮಿಸ್ಬಾ ಪೇಶಾವರ್ ಜಲ್ಮಿ ಕಿಟ್ ಧರಿಸಿ ಮಾಧ್ಯಮಗಳಿಗೆ ತಿಳಿಸಿದರು.

ರಾಷ್ಟ್ರೀಯ ತಂಡದ ಮುಖ್ಯ ತರಬೇತುದಾರ ಮತ್ತು ಮುಖ್ಯ ಆಯ್ಕೆದಾರರಾಗಿಯೂ ಉಳಿದಿರುವ ಮತ್ತು 2019 ರಿಂದ ಪಿಸಿಬಿಯ ಒಳಗೆ ಮತ್ತು ಹೊರಗೆ ಕಾರ್ಯನಿರ್ವಹಿಸುತ್ತಿರುವ ಮಿಸ್ಬ, ರಾಷ್ಟ್ರೀಯ ಆಯ್ಕೆದಾರರಾಗಿ ಪಿಎಸ್‌ಎಲ್‌ನಲ್ಲಿ ನಿಕಟವಾಗಿ ಕೆಲಸ ಮಾಡುವುದು ಮತ್ತು ಯುವ ಆಟಗಾರರ ಕ್ರಿಯೆಯನ್ನು ಗಮನಿಸುವುದು ಸಹಾಯಕವಾಗಿದೆ ಎಂದು ಹೇಳಿದರು.

'ನೀವು ಅವರನ್ನು ಹತ್ತಿರದಿಂದ ವೀಕ್ಷಿಸಿದಾಗ ಮತ್ತು ಗಮನಿಸಿದಾಗ ಮತ್ತು ಅವರು ಒಂದು ನಿರ್ದಿಷ್ಟ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಿದಾಗ, ರಾಷ್ಟ್ರೀಯ ಆಯ್ಕೆದಾರರಾಗಿ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

ಬೆಂಗಳೂರು: ದೃಷ್ಟಿಹೀನ ಸ್ನೇಹಿತೆ ಬಳಿ ಇದ್ದ 49.5 ಲಕ್ಷ ರೂ. ನಗದು, ಚಿನ್ನ ಕದ್ದ ಖದೀಮ ದಂಪತಿ ಬಂಧನ!

SCROLL FOR NEXT