ಜಸ್ಪ್ರೀತ್ ಬುಮ್ರಾ 
ಕ್ರಿಕೆಟ್

IPL 2026: ಸತತ ಐದು ಐಪಿಎಲ್ ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದ ಜಸ್ಪ್ರೀತ್ ಬುಮ್ರಾ; ಆರ್ ಅಶ್ವಿನ್ ಹೇಳಿದ್ದೇನು?

ಕಳೆದ ಐದು ಐಪಿಎಲ್ ಇನಿಂಗ್ಸ್‌ಗಳಲ್ಲಿ ವಿಕೆಟ್ ಪಡೆಯದಿದ್ದರೂ, ಬುಮ್ರಾ ಕೇವಲ ಎರಡು ಪಂದ್ಯಗಳಲ್ಲಿ 10ಕ್ಕಿಂತ ಹೆಚ್ಚಿನ ಎಕಾನಮಿ ರೇಟ್ ದಾಖಲಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಸತತ ಐದು ಐಪಿಎಲ್ ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬುಮ್ರಾ ಉತ್ತಮ ಪ್ರದರ್ಶನ ನೀಡಿದರೂ ಕೂಡ ವಿಕೆಟ್ ಕಾಲಂನಲ್ಲಿ ಅವರ ಹೆಸರಿಲ್ಲದಿರುವುದು ಅಚ್ಚರಿಯ ಸಂಗತಿಯೇ ಸರಿ. ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2025ರಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಅವರು ವಿಕೆಟ್ ಪಡೆಯಲಿಲ್ಲ ಮತ್ತು ಈಗ ಐಪಿಎಲ್ 2026ರಲ್ಲಿ ನಾಲ್ಕು ಪಂದ್ಯಗಳಲ್ಲಿಯೂ ಬುಮ್ರಾ ವಿಕೆಟ್ ಪಡೆದಿಲ್ಲ.

ಭಾರತದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಇದೀಗ ಬುಮ್ರಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಂತಹ ಹೆಚ್ಚಿನ ಸ್ಕೋರಿಂಗ್ ಸ್ಥಳಗಳಲ್ಲಿ, ಬಿಗಿಯಾದ ಯಾರ್ಕರ್‌ಗಳನ್ನು ಎಸೆಯುವ ಮತ್ತು ರನ್‌ಗಳ ಹರಿವನ್ನು ನಿರ್ಬಂಧಿಸುವ ಬುಮ್ರಾ ಅವರ ಸಾಮರ್ಥ್ಯವು ವಿಕೆಟ್ ಪಡೆಯುವುದಕ್ಕಿಂತಲೂ ಮುಖ್ಯವಾಗಿದೆ ಎಂದಿದ್ದಾರೆ.

ಕ್ರಿಕ್‌ವಿಜ್ ಪ್ರಕಾರ, ಬುಮ್ರಾ ವಿಕೆಟ್ ಪಡೆಯದೆ 122 ಎಸೆತಗಳನ್ನು ಎಸೆದಿದ್ದಾರೆ. ಇದು ಅವರ ಐಪಿಎಲ್ ವೃತ್ತಿಜೀವನದ ಅತಿ ಉದ್ದದ ವಿಕೆಟ್ ಪಡೆಯದ ಸರಣಿಯಾಗಿದೆ.

ಜಸ್ಪ್ರೀತ್ ಬುಮ್ರಾ ಅವರ ಕೊನೆಯ ಐದು ಐಪಿಎಲ್ ಇನಿಂಗ್ಸ್

0/40 (4) vs ಪಿಬಿಕೆಎಸ್, ಅಹಮದಾಬಾದ್

0/35 (4) vs ಕೆಕೆಆರ್, ವಾಂಖೆಡೆ

0/21 (4) vs ಡಿಸಿ, ದೆಹಲಿ

0/32 (3) vs ಆರ್‌ಆರ್, ಗುವಾಹಟಿ

0/35 (4) vs ಆರ್‌ಸಿಬಿ, ವಾಂಖೆಡೆ

ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಬುಮ್ರಾ ಮತ್ತೊಮ್ಮೆ ವಿಕೆಟ್ ಪಡೆಯದೆ, ನಾಲ್ಕು ಓವರ್‌ಗಳಲ್ಲಿ 35 ರನ್ ಬಿಟ್ಟುಕೊಟ್ಟರು. ಆದಾಗ್ಯೂ, RCB 20 ಓವರ್‌ಗಳಲ್ಲಿ 240/4 ರನ್ ಗಳಿಸಿದರೂ, ಮುಂಬೈ ತಂಡದ ಅತ್ಯಂತ ಮಿತವ್ಯಯಿ ಬೌಲರ್ ಆಗಿ ಬುಮ್ರಾ ಗುರುತಿಸಿಕೊಂಡರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಶ್ವಿನ್, ಬುಮ್ರಾ ಅವರು ವಿಕೆಟ್‌ ಪಡೆಯದಿರುವುದರ ಮೇಲೆ ಮಾತ್ರ ಗಮನಹರಿಸುವುದು ತಪ್ಪುದಾರಿಗೆಳೆಯುವಂತಿದೆ ಮತ್ತು ಮುಂಬೈ ತಂಡದ ಗುರಿಗೆ ಹಾನಿ ಮಾಡಬಹುದು. ಬುಮ್ರಾ ಅವರ ನಿಜವಾದ ಮೌಲ್ಯವು ಪಿನ್‌ಪಾಯಿಂಟ್ ಯಾರ್ಕರ್‌ಗಳನ್ನು ಎಸೆಯುವುದು ಮತ್ತು ರನ್‌ಗಳನ್ನು ಕಟ್ಟಿಹಾಕುವುದರಲ್ಲಿದೆ, ವಿಶೇಷವಾಗಿ ವಾಂಖೆಡೆಯಂತಹ ಸ್ಥಳಗಳಲ್ಲಿ' ಎಂದಿದ್ದಾರೆ.

'ಬುಮ್ರಾ ಅವರು ವಿಕೆಟ್‌ ಪಡೆದಿಲ್ಲ ಎನ್ನುವುದು ತಂಡದ ಗುರಿಯನ್ನು ಕುಂಠಿತಗೊಳಿಸಬಹುದು. ಅವರು ಯಾರ್ಕರ್‌ಗಳನ್ನು ಎಸೆಯುವುದು ಮತ್ತು ಪ್ರತಿ ರನ್‌ಗೆ ಎದುರಾಳಿಗಳನ್ನು ಕಟ್ಟಿಹಾಕುವುದು ವಿಕೆಟ್‌ಗಳನ್ನು ಪಡೆಯುವುದಕ್ಕಿಂತಲೂ ಹೆಚ್ಚು ಮುಖ್ಯವಾಗಿದೆ, ವಿಶೇಷವಾಗಿ ವಾಂಖೆಡೆಯಂತಹ ಸ್ಥಳಗಳಲ್ಲಿ' ಎಂದು ಅಶ್ವಿನ್ ಹೇಳಿದರು.

'ಟಿ20 ಕ್ರಿಕೆಟ್‌ನಲ್ಲಿ ಬೌಲರ್‌ಗಳ ಯಶಸ್ಸು ಅವರ ಸ್ವಂತ ಕೌಶಲ್ಯದ ಬಗ್ಗೆ ಮಾತ್ರ

ಲ್ಲ, ತಂಡದ ಕೆಲಸವೂ ಆಗಿದೆ. ಬೌಲರ್‌ಗಳಿಗೆ ಸಾಮಾನ್ಯವಾಗಿ ಕಡಿಮೆ ಸ್ಪೆಲ್‌ಗಳನ್ನು ನೀಡುವುದರಿಂದ, ಅವರು ವಿರುದ್ಧ ತುದಿಯಿಂದ ಒತ್ತಡ ಹೆಚ್ಚಿಸಲು ಇತರ ಬೌಲರ್‌ಗಳನ್ನು ಅವಲಂಬಿಸುತ್ತಾರೆ. ತಂಡದ ಸದಸ್ಯರು ಬಿಗಿಯಾಗಿ ಬೌಲಿಂಗ್ ಮಾಡಿ ರನ್‌ಗಳನ್ನು ಬಿಟ್ಟುಕೊಡದಿದ್ದರೆ, ಮುಂದಿನ ಬೌಲರ್ ಬಂದಾಗ ಅದು ವಿಕೆಟ್‌ಗಳ ಅವಕಾಶಗಳನ್ನು ಸೃಷ್ಟಿಸುತ್ತದೆ. ಬ್ಯಾಟರ್‌ಗಳು ಪಾಲುದಾರಿಕೆಗಳನ್ನು ಹೇಗೆ ನಿರ್ಮಿಸುತ್ತಾರೆ ಎಂದುಕೊಳ್ಳುವಂತೆಯೇ ಅನೇಕ ತಂಡಗಳು ಇನ್ನೂ ಬೌಲಿಂಗ್ ಅನ್ನು ಸಂಘಟಿತ 'ಪಾಲುದಾರಿಕೆ' ಪ್ರಯತ್ನವೆಂದು ಸಂಪೂರ್ಣವಾಗಿ ಯೋಚಿಸುವುದಿಲ್ಲ' ಎಂದು ಹೇಳಿದರು.

ಕಳೆದ ಐದು ಐಪಿಎಲ್ ಇನಿಂಗ್ಸ್‌ಗಳಲ್ಲಿ ವಿಕೆಟ್ ಪಡೆಯದಿದ್ದರೂ, ಬುಮ್ರಾ ಕೇವಲ ಎರಡು ಪಂದ್ಯಗಳಲ್ಲಿ 10ಕ್ಕಿಂತ ಹೆಚ್ಚಿನ ಎಕಾನಮಿ ರೇಟ್ ದಾಖಲಿಸಿದ್ದಾರೆ. ಐಪಿಎಲ್ 2025 ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮತ್ತು ಸದ್ಯದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೆಚ್ಚಿನ ಎಕಾನಮಿ ರೇಟ್ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

ಸಾಮಾಜಿಕ ಮಾಧ್ಯಮಗಳಿಗೆ ಕಡಿವಾಣ: ಮೆಟಾ, ಎಕ್ಸ್, ಗೂಗಲ್, ಸ್ನ್ಯಾಪ್‌ಚಾಟ್‌ಗೆ ಸಂಸದೀಯ ಸಮಿತಿ ಸಮನ್ಸ್

'ನನ್ನ ಕಾಲುಗಳು ನಡುಗುತ್ತಿದ್ದವು'; ಕ್ಯಾರವಾನ್‌ಗೆ ನುಗ್ಗಿ ಶರ್ಟ್ ಬಿಚ್ಚಿದ...: ಆಘಾತಕಾರಿ ಅನುಭವ ಬಿಚ್ಚಿಟ್ಟ ನಟಿ Kajal Aggarwal

LS Debate: ದೇಶದ ಯುವಶಕ್ತಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ: ಸಂಸದೆ ಪ್ರಿಯಾಂಕಾ ವಾದ್ರಾ

Video: ಕರ್ನಾಟಕದಲ್ಲಿ 'ಕನ್ನಡಿಗ'ನಿಗೇ ಜಾಗ ಇಲ್ಲವೇ? BMTC ಬಸ್ಸಿನ ಮೇಲೆ ಅಂಟಿಸಿದ್ದ ಸ್ಟಿಕರ್ ತೆರವು ಖಂಡಿಸಿದ JDS