ಜಸ್ಪ್ರೀತ್ ಬೂಮ್ರಾ 
ಕ್ರಿಕೆಟ್

IPL 2026: ಇಲ್ಲಿಯವರೆಗೂ ಒಂದೇ ಒಂದು ವಿಕೆಟ್ ಪಡೆಯದ ವಿಶ್ವ ಪ್ರಸಿದ್ಧ ವೇಗಿ! ಹತಾಶೆಗೆ ಅಭಿಮಾನಿಗಳು ಶಾಕ್- Video

ಮುಂಬೈ ಇತ್ತೀಚಿಗೆ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಬೂಮ್ರಾ ಅವರ ಹತಾಶೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮುಂಬೈ: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದಾಗಿನಿಂದಲೂ ಮುಂಬೈ ಇಂಡಿಯನ್ಸ್ (MI) ವೇಗಿ ಜಸ್ಪ್ರೀತ್ ಬೂಮ್ರಾ ವಿಕೆಟ್ ಪಡೆಯಲು ಹೆಣಗಾಡುತ್ತಿದ್ದಾರೆ. ಇಲ್ಲಿಯವರೆಗೂ ಒಂದೇ ಒಂದು ವಿಕೆಟ್ ಪಡೆದಿಲ್ಲ. ಅಲ್ಲದೇ ಅವರ ಫ್ರಾಂಚೈಸಿಯೂ ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿಲ್ಲ.

ಮುಂಬೈ ಇತ್ತೀಚಿಗೆ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಬೂಮ್ರಾ ಅವರ ಹತಾಶೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ರಪಂಚದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾದ ಬೂಮ್ರಾ ಅವರ ಮಾನಸಿಕ ಸ್ಥಿತಿಯ ಬಗ್ಗೆ ಅಭಿಮಾನಿಗಳು ಚಿಂತಿತರಾಗಿದ್ದಾರೆ.

ಹತಾಶೆಯಿಂದ ಬುಮ್ರಾ ಬೌಲಿಂಗ್ ಮಾರ್ಕರ್ ಅನ್ನು ಎತ್ತಿ ಎಸೆಯುತ್ತಾರೆ. ಬಳಿಕ ಬಾಗಿ ಕಿರುಚುವುದು ವಿಡಿಯೋದಲ್ಲಿದೆ. ಹಿಂಬದಿಯಲ್ಲಿ ಆರ್ ಸಿಬಿಯ ಟೀಮ್ ಡೇವಿಡ್ ಕಾಣಿಸುತ್ತಾರೆ. ಡೇವಿಡ್ ಮುಂಬೈ ಇಂಡಿಯನ್ಸ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಕೇವಲ 16 ಎಸೆತಗಳಲ್ಲಿ 34 ರನ್ ಗಳಿಸಿ ತಮ್ಮ ತಂಡ 240 ರನ್ ಗಳಿಸಲು ನೆರವಾದರು. ಇದಕ್ಕೆ ಪ್ರತಿಯಾಗಿ, ಮುಂಬೈ ಕೇವಲ 222 ರನ್ ಗಳಿಸಲು ಸಾಧ್ಯವಾಯಿತು.

ಪಂದ್ಯದ ವೇಳೆ ಬುಮ್ರಾ ಹೆಣಗಾಡಿದರು. ತಮ್ಮ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟರೂ, ಮತ್ತೆ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಯಾವಾಗಲೂ ಮುಖದಲ್ಲಿ ನಗುವನ್ನು ಹೊಂದಿರುವ ಬುಮ್ರಾ ಅವರನ್ನು ನೋಡಿ ಅಭಿಮಾನಿಗಳು ತೀವ್ರ ಆಘಾತಕ್ಕೊಳಗಾದರು.

ಬುಮ್ರಾ ಅವರ ವೈಫಲ್ಯದ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಅನೇಕ ಕಾರಣ ನೀಡಿದ್ದಾರೆ. ಪವರ್‌ಪ್ಲೇನಲ್ಲಿ ಇತರ ಬೌಲರ್‌ಗಳಿಂದ ಒತ್ತಡದ ಕೊರತೆಯು ಬುಮ್ರಾ ಅವರ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ನೌಕಾ ದಿಗ್ಬಂಧನ ಮುಂದುವರೆಸಿದರೆ ಹಾರ್ಮುಜ್ ಜಲಸಂಧಿ ಬಂದ್: ಇರಾನ್ ಎಚ್ಚರಿಕೆ, ಇಂಧನ ಮಾರುಕಟ್ಟೆ ಮತ್ತೆ ಅಸ್ಥಿರ..!

ಡಾಕ್ಟರ್ 'ಹೃದಯವಂತ' ಅಂತ ಗೆಲ್ಲಿಸಿದ್ರೆ, ಕರ್ನಾಟಕದ ಬುಡಕ್ಕೆ ತಂದಿಟ್ರು: ಡಾ. ಸಿಎನ್ ಮಂಜುನಾಥ್ ವಿರುದ್ಧ ಆಕ್ರೋಶ

ಸೂರ್ಯಾಗೆ ಕೊಕ್?; ಭಾರತ ಟಿ20 ತಂಡದ ನಾಯಕ ಪಟ್ಟಕ್ಕೆ ಶ್ರೇಯಸ್ ಅಯ್ಯರ್, 11ರ ಬಳಗದಲ್ಲಿ ಸ್ಥಾನಕ್ಕೆ ರಜತ್ ಪಟಿದಾರ್ ಪೈಪೋಟಿ!

RCB vs DC: ಬೆಂಗಳೂರಿನಲ್ಲಿ ಇಂದು IPL; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ವಾಹನ ನಿಲುಗಡೆ ಮಾಹಿತಿ...

ಹಳೆಯ ಮಹಿಳಾ ಮಸೂದೆ ತನ್ನಿ, ಯಾರು ಮಹಿಳಾ ವಿರೋಧಿ ಎಂಬುದನ್ನು ನೋಡೋಣ- ಪ್ರಿಯಾಂಕಾ ಗಾಂಧಿ

SCROLL FOR NEXT