ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಆಯುಷ್ ಮ್ಹಾತ್ರೆ ಗಾಯದಿಂದಾಗಿ ಐಪಿಎಲ್ 2026 ಉಳಿದ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ. ಇತ್ತೀಚೆಗೆ ಅಂಡರ್-19 ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸಿದ್ದ ಮ್ಹಾತ್ರೆ, ಈ ಆವೃತ್ತಿಯಲ್ಲಿ CSK ಪರ ಉತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದರು. ಏಪ್ರಿಲ್ 18 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ CSKಯ ಹಿಂದಿನ ಪಂದ್ಯದ ಸಮಯದಲ್ಲಿ ಮ್ಹಾತ್ರೆ ಗಾಯಗೊಂಡಿದ್ದರು.
'ಏಪ್ರಿಲ್ 18 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಸಮಯದಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯದಿಂದಾಗಿ ಆಯುಷ್ ಮ್ಹಾತ್ರೆ ಐಪಿಎಲ್ 2026ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅವರು ಚೇತರಿಸಿಕೊಳ್ಳಲು 6-12 ವಾರಗಳು ಬೇಕಾಗುತ್ತದೆ' ಎಂದು ಸಿಎಸ್ಕೆ ಮಂಗಳವಾರ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಗಾಯದ ಸಮಸ್ಯೆಗಳ ನಡುವೆ, ತಂಡವು ತಾತ್ಕಾಲಿಕವಾಗಿ ಆರ್ಸಿಬಿಯಂತಹ ಇತರ ಫ್ರಾಂಚೈಸಿಗಳಿಂದ ಯುವ ಆಟಗಾರರನ್ನು ಕರೆತರಬಹುದು ಎಂದು ಸಿಎಸ್ಕೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ.
'ಹಲವು ಆಟಗಾರರು ಗೊಯಗೊಂಡಿರುವ ಕಾರಣ, ಏಳನೇ ಪಂದ್ಯದ ನಂತರ ಲೋನ್ ವಿಂಡೋ (loan window) ಮುಚ್ಚುತ್ತದೆ. ಹೀಗಾಗಿ, ಆರ್ಸಿಬಿಯ 19 ವರ್ಷದ ವಿಹಾನ್ ಮಲ್ಹೋತ್ರಾ ಅವರನ್ನು ಆರ್ಸಿಬಿಯಿಂದ ಎರವಲು ಪಡೆಯುವುದು ಉತ್ತಮ ಉಪಾಯವಾಗಿದೆ. ಅವರು ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ, ಆದ್ದರಿಂದ ಇದು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. ವಿಹಾನ್ ಅಲ್ಲದಿದ್ದರೆ, ಅಭಿಗ್ಯಾನ್ ಕುಂಡು ಕೂಡ ಉತ್ತಮ ಆಯ್ಕೆಯಾಗಿದ್ದು, 'ಭವಿಷ್ಯವನ್ನು' ಗಮನದಲ್ಲಿಟ್ಟುಕೊಂಡು ಈ ರೀತಿ ಮಾಡಬಹುದು' ಎಂದು ಅಶ್ವಿನ್ ಎಕ್ಸ್ನಲ್ಲಿ ಬರೆದಿದ್ದಾರೆ.
'ಎರಡೂ ತಂಡಗಳು ಅಗ್ರ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಹೋರಾಡುತ್ತಿರುವಾಗ, ಯಾವುದೇ ವಿವೇಕಯುತ ತಂಡದ ಆಡಳಿತವು ಆವೃತ್ತಿಯ ಮಧ್ಯದಲ್ಲಿ ತಮ್ಮ ಆಟಗಾರರನ್ನು ನೇರ ಪ್ರತಿಸ್ಪರ್ಧಿಗೆ ಏಕೆ ಸಾಲ ನೀಡುತ್ತದೆ? ಅವರ ಎದುರಾಳಿಗಳಲ್ಲಿ ಒಬ್ಬರು ರೇಸ್ನಿಂದ ಬೇಗನೆ ಹೊರಬಿದ್ದರೆ, ಅದು ಆರ್ಸಿಬಿಗೆ ಸಹಾಯವೇ ಆಗಿರುತ್ತದೆ' ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
'ಒಂದು ತಂಡ ಆರಾಮದಾಯಕ ಸ್ಥಾನದಲ್ಲಿದೆ ಮತ್ತು ಇನ್ನೊಂದು ತಂಡವು ಸದ್ಯ ಆ ತಂಡದೊಂದಿಗೆ ಸ್ಪರ್ಧೆಯಲ್ಲಿಯೂ ಇಲ್ಲ, ಆದ್ದರಿಂದ ಸ್ವಲ್ಪ ಹಣ ಗಳಿಸುವ ಅವಕಾಶವಿದೆ, ಮತ್ತು ಆಟಗಾರನಿಗೆ ಆಡಲು ಅವಕಾಶವೂ ಸಿಗುತ್ತದೆ. ಕೆಲವು ಪಂದ್ಯಗಳ ನಂತರ ಅವರು ಮೂಲ ಫ್ರಾಂಚೈಸಿಯೊಂದಿಗೆ ಮರಳಲಿದ್ದಾರೆ' ಎಂದು ಅಶ್ವಿನ್ ಹೇಳಿದ್ದಾರೆ.
ಈ ಆವೃತ್ತಿಯಲ್ಲಿ ಮ್ಹಾತ್ರೆ ಸಿಎಸ್ಕೆ ಪರ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ. ಅವರು ಆರು ಪಂದ್ಯಗಳಿಂದ 177.87 ಸ್ಟ್ರೈಕ್ ರೇಟ್ನಲ್ಲಿ 201 ರನ್ ಗಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2026ರ ಆವೃತ್ತಿಯಲ್ಲಿ ಕಳಪೆ ಆರಂಭವನ್ನು ಕಂಡಿದೆ. ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.