ಅಭಿಷೇಕ್ ಶರ್ಮಾ  
ಕ್ರಿಕೆಟ್

'ಪಂಜಾಬಿಗಳು ಮುಕ್ತವಾಗಿ ಆಟವಾಡಲು ಇಷ್ಟಪಡುತ್ತಾರೆ': ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಅಭಿಷೇಕ್ ಶರ್ಮಾ ಹೇಳಿಕೆ

ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಭರ್ಜರಿ ಗೆಲುವು ಸಾಧಿಸಿತು.

ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ದಾಖಲೆಯ ಶತಕ ಬಾರಿಸಿದ ನಂತರ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ, ತಾವು ಮತ್ತು ಟ್ರಾವಿಸ್ ಹೆಡ್ ಆರಂಭದಲ್ಲಿ ದಾಳಿ ಮಾಡುವ ಗುರಿ ಹೊಂದಿದ್ದೆವು. ಆದರೆ, ನಿಧಾನಗತಿಯ ಪಿಚ್‌ನಿಂದಾಗಿ ತಮ್ಮ ವಿಧಾನವನ್ನು ಬದಲಿಸಿಕೊಳ್ಳಬೇಕಾಯಿತು ಎಂದು ಹೇಳಿದರು. ಪರಿಸ್ಥಿತಿಗಳು ಹೆಚ್ಚಿನ ಸ್ಕೋರ್ ಕಲೆಹಾಕಲು ಕಷ್ಟಕರವಾಗಿತ್ತು. ಆದರೆ, ನಾಯಕ, ತರಬೇತುದಾರರು ಮತ್ತು ತಂಡದ ನಿರ್ವಹಣೆಯ ಬೆಂಬಲದಿಂದ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸದಿಂದ ಆಡಲು ನಮಗೆ ಅನುವು ಮಾಡಿಕೊಟ್ಟಿದೆ. ನಾನು ಪಂಜಾಬ್‌ಗಾಗಿ ಈ ರೀತಿ ಆಡುತ್ತೇನೆ ಮತ್ತು ಪಂಜಾಬಿ ಆಟಗಾರರು ಮುಕ್ತವಾಗಿ ಆಡಲು ಇಷ್ಟಪಡುತ್ತಾರೆ ಎಂದು ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಗಳಿಸುವ ಮೂಲಕ ಶರ್ಮಾ ಅನೇಕ ದಾಖಲೆಗಳನ್ನು ಮುರಿದರು.

ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಭರ್ಜರಿ ಗೆಲುವು ಸಾಧಿಸಿತು. ಅಭಿಷೇಕ್ ಶರ್ಮಾ ಅದ್ಭುತ ಫಾರ್ಮ್‌ನಲ್ಲಿದ್ದರು. ಕೇವಲ 47 ಎಸೆತಗಳಲ್ಲಿ ತಮ್ಮ ಎರಡನೇ ಐಪಿಎಲ್ ಶತಕವನ್ನು ಗಳಿಸಿದರು. ಇದರಲ್ಲಿ 9 ಬೌಂಡರಿಗಳು ಮತ್ತು 10 ಬೃಹತ್ ಸಿಕ್ಸರ್‌ಗಳು ಇದ್ದವು.

ಅಂತಿಮವಾಗಿ 68 ಎಸೆತಗಳಲ್ಲಿ 135 ರನ್ ಗಳಿಸಿ ಅಜೇಯರಾಗುಳಿದರು. ಸನ್‌ರೈಸರ್ಸ್ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಭರ್ಜರಿ 242 ರನ್ ಗಳಿಸಿತು.

'ನಾವು ಆಟ ಆರಂಭಿಸಿದ ರೀತಿ, ನಮಗೆ ಒಂದು ಯೋಜನೆ ಇತ್ತು. ಹೆಡ್ ಮತ್ತು ನಾನು ಪವರ್ ಪ್ಲೇ ಅನ್ನು ಬಳಸಿಕೊಳ್ಳಲು ಬಯಸಿದ್ದೆವು. ಆದರೆ, ವಿಕೆಟ್ ನಿಧಾನವಾಗಿತ್ತು, ಆದ್ದರಿಂದ ನಾವು ಹೊಂದಿಕೊಂಡು ವಿಭಿನ್ನ ಯೋಜನೆಗಳನ್ನು ರೂಪಿಸಬೇಕಾಗಿತ್ತು. ಎರಡೂ ಇನಿಂಗ್ಸ್‌ಗಳು ಬ್ಯಾಟ್ ಆಗುವವರೆಗೂ ನಮಗೆ ಉತ್ತಮ ಸ್ಕೋರ್ ಎಷ್ಟೆಂಬುದು ತಿಳಿದಿರುವುದಿಲ್ಲ. ತಂಡದ ಕೋಚ್ ಮತ್ತು ನಾಯಕ ಮುಕ್ತವಾಗಿ ಆಡಲು ಸ್ವಾತಂತ್ರ್ಯ ನೀಡುತ್ತಾರೆ. ನಿಮಗೆ ನಾಯಕ ಮತ್ತು ತರಬೇತುದಾರರ ಬೆಂಬಲವಿರಬೇಕು. 2024ರಲ್ಲಿ ನಾವು ಹೊಂದಿದ್ದ ನಿರ್ವಹಣೆಯು ಪಂದ್ಯವನ್ನು ಬದಲಿಸುವಂತಿತ್ತು. ನಾನು ಯಾವಾಗಲೂ ಹೀಗೆ ಆಡಲು ಬಯಸುತ್ತೇನೆ. ನಾನು ಪಂಜಾಬ್‌ಗಾಗಿ ಹೀಗೆ ಆಡುತ್ತೇನೆ ಮತ್ತು ಪಂಜಾಬಿ ಆಟಗಾರರು ಮುಕ್ತವಾಗಿ ಆಡಲು ಇಷ್ಟಪಡುತ್ತಾರೆ' ಎಂದು ಶರ್ಮಾ ಪಂದ್ಯದ ನಂತರ ಹೇಳಿದರು.

ತಮ್ಮ ಅತ್ಯುತ್ತಮ ಶತಕಕ್ಕಾಗಿ ಅಭಿಷೇಕ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಅವರ 81 ಪಂದ್ಯಗಳಲ್ಲಿ ಏಳನೇ ಪ್ರಶಸ್ತಿಯಾಗಿದ್ದು, ಎಸ್‌ಆರ್‌ಎಚ್ ಪರ ಭಾರತೀಯ ಆಟಗಾರನಿಗೆ ದೊರೆತ ಗರಿಷ್ಠ ಪ್ರಶಸ್ತಿಯಾಗಿದೆ. 145 ಪಂದ್ಯಗಳಲ್ಲಿ ಆರು ಪ್ರಶಸ್ತಿಗಳನ್ನು ಪಡೆದಿರುವ ಭುವನೇಶ್ವರ್ ಕುಮಾರ್ ಅವರ ದಾಖಲೆ ಮೀರಿಸಿದೆ.

ಈ ಮೂಲಕ, ಅಭಿಷೇಕ್ ಒಂಬತ್ತು ಟಿ20 ಶತಕಗಳನ್ನು ಗಳಿಸಿದರು. ಭಾರತೀಯ ಬ್ಯಾಟ್ಸ್‌ಮನ್‌ ವಿರಾಟ್ ಕೊಹ್ಲಿಯೊಂದಿಗೆ ಸಮಬಲ ಸಾಧಿಸಿದರು.

ಸಾರ್ವಕಾಲಿಕ ಪಟ್ಟಿಯಲ್ಲಿ, ಕ್ರಿಸ್ ಗೇಲ್ 22 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬಾಬರ್ ಅಜಮ್ (12) ಮತ್ತು ಡೇವಿಡ್ ವಾರ್ನರ್ (10) ನಂತರದ ಸ್ಥಾನದಲ್ಲಿದ್ದಾರೆ. ಆದರೆ, ಅಭಿಷೇಕ್ ಈಗ ಕ್ವಿಂಟನ್ ಡಿ ಕಾಕ್, ರಿಲೀ ರೊಸ್ಸೌ ಮತ್ತು ಸಾಹಿಬ್ಜಾದಾ ಫರ್ಹಾನ್ ಅವರಂತಹ ಆಟಗಾರರನ್ನು ಒಳಗೊಂಡ ಗುಂಪನ್ನು ಸೇರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ: ಹಡಗಿನ ಮೇಲೆ IRGC ಗುಂಡಿನ ದಾಳಿ, ಕದನ ವಿರಾಮ ಅನಿಶ್ಚಿತತೆ..?

'ಕದನ ವಿರಾಮ ವಿಸ್ತರಿಸುತ್ತೇವೆ, ಇರಾನ್‌ಗೆ ಮಾತುಕತೆಗೆ ಸಮಯ ನೀಡುತ್ತೇವೆ; ಹಾರ್ಮುಜ್ ಜಲಸಂಧಿ ನಿರ್ಬಂಧ ಮುಂದುವರಿಕೆ': ಡೊನಾಲ್ಡ್ ಟ್ರಂಪ್

ಪಹಲ್ಗಾಮ್ ಉಗ್ರರ ದಾಳಿಗೆ ಒಂದು ವರ್ಷ: ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗಲ್ಲ; ಶತ್ರುಗಳಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್

ಏ.23ರಿಂದ CET ಪರೀಕ್ಷೆ: 3.3 ಲಕ್ಷ ಅಭ್ಯರ್ಥಿಗಳು ನೋಂದಣಿ; 745 ಕೇಂದ್ರಗಳಲ್ಲಿ ವಸ್ತ್ರಸಂಹಿತೆ ನಿರ್ವಹಣೆಗೆ ಅಧಿಕಾರಿಗಳ ನಿಯೋಜನೆ

ಬಿಟ್‌ಕಾಯಿನ್ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ: ಗೃಹ ಸಚಿವ ಡಾ ಜಿ ಪರಮೇಶ್ವರ್

SCROLL FOR NEXT