ಅಭಿಷೇಕ್ ಶರ್ಮಾ 
ಕ್ರಿಕೆಟ್

'91 ಎಸೆತಗಳಲ್ಲಿ 233 ರನ್': 25 ಸಿಕ್ಸರ್‌ಗಳು, 13 ಬೌಂಡರಿ ಬಾರಿಸಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ ಅಭಿಷೇಕ್ ಶರ್ಮಾ

ಟಿ20 ವಿಶ್ವಕಪ್‌ಗೂ ಮೊದಲು, ಅಭಿಷೇಕ್ ಅವರ ಸರಾಸರಿ 37.05 ಮತ್ತು ಸ್ಟ್ರೈಕ್ ರೇಟ್ 195ರ ಆಸುಪಾಸಿನಲ್ಲಿತ್ತು. ಆದರೆ ಅಂದಿನಿಂದ, ಅವರ ಸರಾಸರಿ 19.4ಕ್ಕೆ ಕುಸಿದಿದೆ ಮತ್ತು ಸ್ಟ್ರೈಕ್ ರೇಟ್ 165ಕ್ಕೆ ಇಳಿದಿದೆ.

ಪಂಜಾಬ್ ಅಂತರ-ಜಿಲ್ಲಾ ಹಿರಿಯರ ವಿಭಾಗದ ಪಂದ್ಯವೊಂದರಲ್ಲಿ ಅಭಿಷೇಕ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 91 ಎಸೆತಗಳಲ್ಲಿ 15 ಬೌಂಡರಿ ಮತ್ತು 25 ಸಿಕ್ಸರ್‌ಗಳ ನೆರವಿನಿಂದ 233 ರನ್ ಸಿಡಿಸಿದರು. ತಾರ್ನ್ ತಾರನ್ ತಂಡದ ವಿರುದ್ಧ ಅಮೃತಸರ ತಂಡದ ಪರ 256.04 ಸ್ಟ್ರೈಕ್ ರೇಟ್‌ನಲ್ಲಿ ಅಭಿಷೇಕ್ ಆಡಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಸಂದರ್ಭದಲ್ಲೇ ಅವರ ಈ ಭರ್ಜರಿ ಪ್ರದರ್ಶನ ಮೂಡಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಕೋರ್‌ಕಾರ್ಡ್ ಹಾಗೂ ಅಭಿಷೇಕ್ ಅವರ ಬ್ಯಾಟಿಂಗ್‌ನ ಚಿತ್ರಗಳು ವೈರಲ್ ಆಗುತ್ತಿವೆ.

ಅಭಿಷೇಕ್ ಅವರ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 533 ರನ್ ಗಳಿಸಿತು.

ಈ ವರ್ಷದ ಆರಂಭದಲ್ಲಿ ಐಸಿಸಿ (ICC) ಟಿ20ಐ (T20I) ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಅಭಿಷೇಕ್ ಈಗ ಮೂರನೇ ಸ್ಥಾನದಲ್ಲಿದ್ದು, ಜಿಂಬಾಬ್ವೆ ಪ್ರವಾಸದಿಂದ ಮರಳುವಾಗ ಮೂರು ಇನಿಂಗ್ಸ್‌ಗಳಲ್ಲಿ 3.66ರ ಸರಾಸರಿಯೊಂದಿಗೆ ಒಟ್ಟು 11 ರನ್ ಮಾತ್ರ ಗಳಿಸಿದ್ದರು. ಇದು ಕೇವಲ ಒಂದು ಬಾರಿಯ ವೈಫಲ್ಯವಲ್ಲ; ಬದಲಿಗೆ, ತಿಂಗಳುಗಳಿಂದ ಮುಂದುವರಿದಿರುವ ಕಳಪೆ ಫಾರ್ಮ್‌ನ ಸರಣಿಯ ಮತ್ತೊಂದು ಘಟ್ಟವಿದು.

ಇಂಗ್ಲೆಂಡ್ ವಿರುದ್ಧದ ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು 26.2ರ ಸರಾಸರಿಯಲ್ಲಿ 131 ರನ್ ಗಳಿಸಿದರು. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ 24.5ರ ಸರಾಸರಿಯಲ್ಲಿ 49 ರನ್ ಗಳಿಸಿದರು. ತಮ್ಮ ಕಳೆದ 10 ಟಿ20 ಇನಿಂಗ್ಸ್‌ಗಳಲ್ಲಿ ಅವರು ಕೇವಲ ಒಂದು ಬಾರಿ ಮಾತ್ರ 50 ರನ್‌ಗಳ ಗಡಿಯನ್ನು ದಾಟಿದ್ದಾರೆ. ಗಳಿಸಿದ ರನ್‌ಗಳಿಗಿಂತಲೂ ಹೆಚ್ಚಾಗಿ, ಅವರು ಔಟ್ ಆದ ರೀತಿಯು ಹೆಚ್ಚು ಆತಂಕಕಾರಿಯಾಗಿದೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳಲ್ಲಿಯೂ ಬ್ಲೆಸ್ಸಿಂಗ್ ಮುಜರಬಾನಿ ಅವರಿಗೆ ಅಭಿಷೇಕ್ ತಮ್ಮ ವಿಕೆಟ್ ಒಪ್ಪಿಸಿದರು.

ಟಿ20 ವಿಶ್ವಕಪ್‌ಗೂ ಮೊದಲು, ಅಭಿಷೇಕ್ ಅವರ ಸರಾಸರಿ 37.05 ಮತ್ತು ಸ್ಟ್ರೈಕ್ ರೇಟ್ 195ರ ಆಸುಪಾಸಿನಲ್ಲಿತ್ತು. ಆದರೆ ಅಂದಿನಿಂದ, ಅವರ ಸರಾಸರಿ 19.4ಕ್ಕೆ ಕುಸಿದಿದೆ ಮತ್ತು ಸ್ಟ್ರೈಕ್ ರೇಟ್ 165ಕ್ಕೆ ಇಳಿದಿದೆ.

ಅವರು ದ್ವಂದ್ವ ಮನಸ್ಥಿತಿಯಲ್ಲಿರುವ ಬ್ಯಾಟರ್‌ನಂತೆ ಕಾಣುತ್ತಿದ್ದಾರೆ. ಅವರನ್ನು ಅಪಾಯಕಾರಿ ಆಟಗಾರನನ್ನಾಗಿ ಮಾಡಿದ್ದ ಆಕ್ರಮಣಕಾರಿ ಶೈಲಿ ಮರೆಯಾಗಿ. ಆದರೆ, ಆ ಬದಲಾವಣೆಯನ್ನು ಸಮರ್ಥಿಸಿಕೊಳ್ಳಲು ಅಗತ್ಯವಿರುವ ಸ್ಥಿರತೆ ಇನ್ನೂ ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಮಗಳನ್ನು ಕ್ಷಮಿಸಿ ಮೋದಿಜಿ ಹೊಸ ಜೀವನ ಕೊಟ್ಟಿದ್ದಾರೆ, ಮಕ್ಕಳಿಗೆ Instagram, Facebook ಬೇಡ': ಪ್ರಧಾನಿ ವಿರುದ್ಧ ನಿಂದನೆ ಮಾಡಿದ ಬಾಲಕಿಯ ತಾಯಿ

ನಿಮ್ಮಿಂದಂತು ಸರಿಯಾಗಿ ಸರ್ವಾಧಿಕಾರಿಯಾಗಲು ಆಗಲಿಲ್ಲ: ಕಾಂಗ್ರೆಸ್ ನೋಡಿ ಕಲಿಯಿರಿ; ಬಿಜೆಪಿ ತೊರೆದ ಶಹಜಾದ್ ಪೂನಾವಾಲಾ!

ತೀವ್ರಗೊಂಡ ಗಾಯದ ನೋವು: ಶ್ರೀಲಂಕಾ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು