ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ 
ಕ್ರಿಕೆಟ್

ವೈಫಲ್ಯದ ನಡುವೆಯೂ ಮುಖ್ಯ ಕೋಚ್ ಹುದ್ದೆಯಿದ ಗೌತಮ್ ಗಂಭೀರ್‌ರನ್ನು ಕಿತ್ತುಹಾಕಿಲ್ಲ ಏಕೆ?; ಎರಡು ಪ್ರಮುಖ ಕಾರಣ!

ವೈಟ್-ಬಾಲ್ ಕ್ರಿಕೆಟ್ ವಿಷಯಕ್ಕೆ ಬಂದರೆ, ಗಂಭೀರ್ ಕನಿಷ್ಠ 2027 ರ ಏಕದಿನ ವಿಶ್ವಕಪ್‌ವರೆಗೆ ಇರಲಿದ್ದಾರೆ ಎಂದು ವರದಿ ತಿಳಿಸಿದೆ.

ಗೌತಮ್ ಗಂಭೀರ್ ಅವರ ಅಧಿಕಾರಾವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯು ಹಲವು ಬಾರಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಹೀನಾಯ ಪ್ರದರ್ಶನವು ವೈಟ್-ಬಾಲ್ ಕೋಚ್ ಆಗಿ ಅವರ ದಾಖಲೆಗೆ ಕಳಂಕ ತಂದಿದೆ. ಹಿಂದೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಟೆಸ್ಟ್ ಸರಣಿ ಸೋಲುಗಳಿಂದಾಗಿ ಸಾಮಾಜಿಕ ಮಾಧ್ಯಮದ ಒಂದು ವರ್ಗವು ಗಂಭೀರ್ ಅವರನ್ನು ವಜಾಗೊಳಿಸಬೇಕೆಂಬ ಕೂಗಿಗೆ ಕಾರಣವಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2027ರ ಫೈನಲ್‌ಗೆ ಅರ್ಹತೆ ಪಡೆಯಲು ಭಾರತವು ಸಾಕಷ್ಟು ಸಾಧಿಸಬೇಕಾಗಿದೆ. ಆದಾಗ್ಯೂ, ವರದಿಗಳ ಪ್ರಕಾರ, ಸದ್ಯಕ್ಕೆ ಗಂಭೀರ್ ಅವರ ಸ್ಥಾನ ಸುರಕ್ಷಿತವಾಗಿದೆ.

ರೆವ್‌ಸ್ಪೋರ್ಟ್ಸ್ ಪ್ರಕಾರ, ಗಂಭೀರ್ ಅವರನ್ನು ಭಾರತದ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸುವುದು ಅಸಂಭವವಾಗಲು ಎರಡು ಪ್ರಮುಖ ಕಾರಣಗಳಿವೆ.

ವರದಿ ಪ್ರಕಾರ, ಮೊದಲನೆಯದಾಗಿ, ಭಾರತ ತಂಡವು ಸದ್ಯ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಪರಿವರ್ತನೆಯ ಹಂತದಲ್ಲಿರುವುದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಈ ಬಗ್ಗೆ ಒಪ್ಪಿಗೆ ಇದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜ ಆಟಗಾರಲು ಇತ್ತೀಚಿಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವುದರಿಂದ, ಭಾರತದ ಟೆಸ್ಟ್ ತಂಡವು ಈಗ ಹೊಸ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಹೊಸ ತಂಡವಾಗಿ ರೂಪುಗೊಳ್ಳುತ್ತಿದೆ.

ಎರಡನೆಯದಾಗಿ, ಆಟಗಾರರಿಗೆ ಉಂಟಾಗುತ್ತಿರುವ ಗಾಯಗಳ ಬಗ್ಗೆಯೂ ಬಿಸಿಸಿಐ ಪರಿಗಣಿಸುತ್ತಿದೆ. ವರದಿ ಪ್ರಕಾರ, ಗಿಲ್ ಸರಣಿಯ ಮಧ್ಯದಲ್ಲಿ ಗಾಯಗೊಂಡಿಲ್ಲದಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸೋಲುಗಳು ವಿಭಿನ್ನವಾಗಿರುತ್ತಿದ್ದವು ಎಂಬ ನಂಬಿಕೆ ಇದೆ.

ಭಾರತವು ಗಾಯಗಳಿಂದ ಬಳಲುತ್ತಿದೆ. ಮುಂಬರುವ ಎರಡು ಟೆಸ್ಟ್ ಪಂದ್ಯಗಳ ಶ್ರೀಲಂಕಾ ಪ್ರವಾಸದ ಮೇಲೂ ಇದು ಪರಿಣಾಮ ಬೀರಿದೆ. ವೇಗಿ ಜಸ್ಪ್ರೀತ್ ಬುಮ್ರಾ, ನಂ. 3 ಬ್ಯಾಟ್ಸ್‌ಮನ್ ಸಾಯಿ ಸುಧರ್ಸನ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ.

ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಕ್ರಿಕೆಟ್ ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಮಣ್ ತಮ್ಮ ಪಾತ್ರದಲ್ಲಿ ಬಲಿಷ್ಠರಾಗಿದ್ದಾರೆ ಎಂದು ವರದಿ ಹೇಳುತ್ತದೆ. ಶ್ರೀಲಂಕಾ ಪ್ರವಾಸದ ನಂತರ ಡಬ್ಲ್ಯುಟಿಸಿ 2025-27 ಚಕ್ರದಲ್ಲಿ ಕೇವಲ ಎರಡು ಸರಣಿಗಳು ಮಾತ್ರ ಉಳಿದಿರುವುದರಿಂದ ಟೆಸ್ಟ್ ಮುಖ್ಯ ಕೋಚ್ ಆಗಿ ಮಧ್ಯಂತರ ನೇಮಕಾತಿಯನ್ನು ಬಹುತೇಕ ತಳ್ಳಿಹಾಕಲಾಗಿದೆ.

ವೈಟ್-ಬಾಲ್ ಕ್ರಿಕೆಟ್ ವಿಷಯಕ್ಕೆ ಬಂದರೆ, ಗಂಭೀರ್ ಕನಿಷ್ಠ 2027 ರ ಏಕದಿನ ವಿಶ್ವಕಪ್‌ವರೆಗೆ ಇರಲಿದ್ದಾರೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Karnataka Bandh-ಮಂಡ್ಯ, ಮೈಸೂರು ಭಾಗಗಳಲ್ಲಿ ಉತ್ತಮ ಸ್ಪಂದನೆ: ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ-Video

‘Hormuz ಮೇಲೆ ಅಮೆರಿಕಾ ಸಂಪೂರ್ಣ ಹಿಡಿತ’ ಎಂದ Trump; ಹೇಳಿಕೆಯಿಂದ ‘ವಾಸ್ತವ ಬದಲಾಗಲ್ಲ’, ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; Iran ತಿರುಗೇಟು..!

AI ಗುಳ್ಳೆ ಯಾವಾಗ ಸಿಡಿಯುತ್ತೆ? (ಹಣಕ್ಲಾಸು)

ವಿಧಾನಸೌಧ-ವಿಕಾಸಸೌಧ, ಆರೋಗ್ಯಸೌಧದಲ್ಲೇ ಇಲ್ಲ ಆರೋಗ್ಯ! ಕ್ಯಾಂಟೀನ್‌ಗಳಲ್ಲಿ ಜಿರಳೆ, ಅವಧಿ ಮೀರಿದ ಆಹಾರ ಪತ್ತೆ; ಹೊರಗೆ ಊಟ ಮಾಡುವ ಮುನ್ನ ಇದನ್ನೊಮ್ಮೆ ನೋಡಿ..!

ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಪೂರ್ಣ: 19 ಸಚಿವರಿಗೆ ಹೊಣೆಗಾರಿಕೆ, ಕೆಲ ಪ್ರಮುಖ ವಿಚಾರಗಳಿಗೆ ಇನ್ನೂ ಸಿಗದ ಪರಿಹಾರ, ಮುಂದುವರೆದ ಅಸಮಾಧಾನ..!